ಬೆವರುಗುಳ್ಳೆ-ಗೃಹೋಪಚಾರ


Team Udayavani, Apr 12, 2019, 6:00 AM IST

h-16

ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಬೆವರಿಗುಳ್ಳೆ ಉಷ್ಣದ ಗುಳ್ಳೆಗಳು ಎಲ್ಲೆಡೆ ಹಾಗೂ ಎಲ್ಲಾ ವಯಸ್ಸಿನವರಲ್ಲೂ ಕಂಡುಬರುತ್ತವೆ. ಅಧಿಕ ಬೆವರು ಉಂಟಾದಾಗ ಬೆವರಿನ ಗ್ರಂಥಿಗಳಲ್ಲಿ ಸೋಂಕು (ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳ) ಉಂಟಾಗಿ ತನ್ಮೂಲಕ ಚರ್ಮದಲ್ಲಿ ಕೆಂಪು ಸಣ್ಣ ಗುಳ್ಳೆಗಳು ಉಂಟಾಗುತ್ತವೆ. ತುರಿಕೆ, ಉರಿ ಅಧಿಕವಿರುವ ಈ ಗುಳ್ಳೆಗಳು ಕುತ್ತಿಗೆ, ಹೊಟ್ಟೆ, ಬೆನ್ನು , ಮುಖ ಹಾಗೂ ತೊಡೆಯ ಭಾಗದ ಚರ್ಮದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

ಮನೆಯಲ್ಲಿಯೇ ಈ ತೊಂದರೆ ನಿವಾರಣೆಗೆ ಆಹಾರ, ಮದ್ದು, ಉಪಚಾರಗಳನ್ನು ಮಾಡಬಹುದು. ಇವು ಬೆವರುಗುಳ್ಳೆಯ ನಿವಾರಣೆಯೊಂದಿಗೆ ತನುಮನಗಳಿಗೂ ತಂಪು ನೀಡುತ್ತವೆ.

ಓಟ್‌ಮೀಲ್‌ ಸ್ನಾನ
1 ಟಬ್‌ ನೀರಿಗೆ 1-2 ಕಪ್‌ ಓಟ್‌ಮೀಲ್‌ ಬೆರೆಸಬೇಕು. ಇದರಲ್ಲಿ 10-15 ನಿಮಿಷವಿದ್ದು, ಟಬ್‌ಬಾತ್‌ ಅಥವಾ ಅವಾಗಾಹ ಸ್ನಾನ ಮಾಡಿದರೆ ಶಮನಕಾರಿ. ಇದು ಬೆವರಿನ ಗ್ರಂಥಿಗಳ ಅವರೋಧ ನಿವಾರಣೆ ಮಾಡಿ, ಚರ್ಮದ ಉರಿಯೂತ ಗುಣಪಡಿಸುತ್ತದೆ. ಬೆವರುಗುಳ್ಳೆ ನಿವಾರಣೆಯಾಗುವುದರ ಜೊತೆಗೆ ದೇಹಕ್ಕೂ ಹಿತ ಹಾಗೂ ಶ್ರಮನಿವಾರಕ ಈ ಸ್ನಾನ. ಎರಡು ದಿನಕ್ಕೊಮ್ಮೆ ಬಳಸಿದರೆ ಉತ್ತಮ.

ಎಲೋವೆರಾ ಹಾಗೂ ಅರಸಿನದ ಲೇಪ
ಎಲೋವೆರಾವು ಚರ್ಮಕ್ಕೆ ಟಾನಿಕ್‌ನಂತೆ ಜೊತೆಗೆ ಉರಿಯೂತ ನಿವಾರಕ ಅರಸಿನವು ಸಹ ಬ್ಯಾಕ್ಟೀರಿಯಾ ಮೊದಲಾದ ಸೂಕ್ಷ್ಮಾಣು ಜೀವಿಗಳನ್ನು ನಿವಾರಣೆ ಮಾಡುತ್ತದೆ. ದಿನಕ್ಕೆ 1-2 ಬಾರಿ ಈ ಲೇಪ ಹಚ್ಚಿದರೆ ಶೀಘ್ರವಾಗಿ ಬೆವರುಗುಳ್ಳೆ ನಿವಾರಣೆಯಾಗುತ್ತದೆ. ಇದು ಚರ್ಮದಲ್ಲಿ ಜಲೀಯ ಅಂಶದ ಕೊರತೆ ಉಂಟಾಗದಂತೆ ಸಹ ಕಾರ್ಯವೆಸಗುತ್ತದೆ.

ಕಡಲೆಹಿಟ್ಟು ಹಾಗೂ ಗುಲಾಬಿ ಜಲದ ಲೇಪ
ಕಡಲೆಹಿಟ್ಟು 3 ಚಮಚ, ಗುಲಾಬಿ ಜಲ 10 ಚಮಚ, ಫ್ರಿಜ್‌ ನೀರು 4 ಚಮಚ ಬೆರೆಸಿ ಲೇಪಿಸಿದರೆ ಶಮನಕಾರಿ. ಇದೇ ರೀತಿ ಮುಲ್ತಾನಿ ಮಿಟ್ಟಿ , ಗುಲಾಬಿ ಜಲದ ಲೇಪನವೂ ಹಿತಕಾರಿ. ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಬೆವರುಗುಳ್ಳೆ ಉಂಟಾದಾಗ ಈ ಎರಡು ಲೇಪಗಳು ಶೀಘ್ರ ಫ‌ಲಕಾರಿ.

ಅಡುಗೆಸೋಡಾದಿಂದ ಗೃಹೋಪಚಾರ
ಮೈಯ ಅಧಿಕ ಭಾಗದ ಚರ್ಮದಲ್ಲಿ ಬೆವರು ಗುಳ್ಳೆಗಳು ಕಂಡುಬಂದರೆ ಈ ಲೇಪ ಹಿತಕರ. 8-10 ಚಮಚ ಅಡುಗೆ ಸೋಡಾವನ್ನು 2 ಕಪ್‌ ನೀರಿಗೆ ಬೆರೆಸಿ ಕಲಕಬೇಕು. ಇದರಲ್ಲಿ ದಪ್ಪ ಹತ್ತಿ ಉಂಡೆ ಅದ್ದಿ, ಅದನ್ನು ಬೆವರುಗುಳ್ಳೆ ಇರುವ ಕಡೆಗೆ ಉಜ್ಜಬೇಕು. 4-5 ನಿಮಿಷದ ಬಳಿಕ ಸ್ನಾನ ಮಾಡಬೇಕು. ಕ್ಷಾರೀಯ ಅಂಶ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಗುಣವಿರುವುದರಿಂದ ಇದು ಬೆವರುಗುಳ್ಳೆಗಳನ್ನು ಶೀಘ್ರ ಗುಣಪಡಿಸುತ್ತದೆ.

ಆಲೂಸ್ಲೆ„ಸ್‌ ಮಾಲೀಶು
ತಾಜಾ ಆಲೂಗಡ್ಡೆಯನ್ನು ದುಂಡಗೆ ಬಿಲ್ಲೆಗಳಾಗಿ ಕತ್ತರಿಸಬೇಕು. ಇದನ್ನು ಫ್ರಿಜ್‌ ನೀರಿನಲ್ಲಿ ಅದ್ದಿ ಬೆವರುಗುಳ್ಳೆ ಇರುವ ಭಾಗಕ್ಕೆ ಮಾಲೀಶು ಮಾಡಬೇಕು. ಹತ್ತು ನಿಮಿಷದ ಬಳಿಕ ತೊಳೆಯಬೇಕು. (ದಿನಕ್ಕೆ 1-2 ಬಾರಿ). ಇದು ಚರ್ಮಕ್ಕೆ ಎಮೋಲಿಯಂಟ್‌.

ಕಲ್ಲಂಗಡಿ ಜ್ಯೂಸ್‌ ಚಿಕಿತ್ಸೆ
ಕಲ್ಲಂಗಡಿ ಹಣ್ಣಿನ ರಸ ದಪ್ಪಗೆ ಲೇಪಿಸಿ, 20 ನಿಮಿಷಗಳ ಬಳಿಕ ತೊಳೆಯಬೇಕು. ದಿನಕ್ಕೆ 1-2 ಕಪ್‌ ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಸೇವಿಸಬೇಕು. ಇದು ಅಧಿಕ ನೀರಿನ ಅಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಕೂಡಿದ್ದು ಚರ್ಮದ ಟಾನಿಕ್‌ ಹಾಗೂ ದೇಹಕ್ಕೆ ತಂಪು. ಆದ್ದರಿಂದ ಬೆವರಿನ ಗುಳ್ಳೆ , ಉಷ್ಣದ ಗುಳ್ಳೆಗಳನ್ನು ಶೀಘ್ರ ನಿವಾರಣೆ ಮಾಡುತ್ತದೆ.

ಹಸಿಶುಂಠಿ ಜಲದ ಮನೆಮದ್ದು
2 ಚಮಚ ಹಸಿ ಶುಂಠಿಯ ತುರಿಯನ್ನು 2 ಕಪ್‌ ನೀರಿಗೆ ಬೆರೆಸಿ ಕುದಿಸಿ ಸೋಸಬೇಕು. ಆರಿದ ಬಳಿಕ, ಹತ್ತಿ ಉಂಡೆಯನ್ನು ಈ ನೀರಿನಲ್ಲಿ ಅದ್ದಿ ಬೆವರುಗುಳ್ಳೆಗಳಿಗೆ ಲೇಪಿಸಬೇಕು. 10-15 ನಿಮಿಷಗಳ ಬಳಿಕ ತೊಳೆಯಬೇಕು. ತುಂಬಾ ತುರಿಕೆ ಹಾಗೂ ಪೂಯಯುಕ್ತ ಬೆವರುಗುಳ್ಳೆಗಳಿದ್ದಾಗ ಶುಂಠಿಯ ಜಲದ ಪ್ರಯೋಗ ಪರಿಣಾಮಕಾರಿ.

ಕರ್ಪೂರದ ಎಣ್ಣೆಯ ಪ್ರಯೋಗ
2 ಬಿಲ್ಲೆ ಕರ್ಪೂರವನ್ನು 10 ಚಮಚ ಕಹಿಬೇವಿನ ಎಣ್ಣೆಯಲ್ಲಿ ಪುಡಿಮಾಡಿ ಬೆರೆಸಬೇಕು. ಚೆನ್ನಾಗಿ ಕಲಕಿ ಗಾಜಿನ ಬಾಟಲಲ್ಲಿ ಹಾಕಿಡಬೇಕು. ಇದನ್ನು ಬೆವರುಗುಳ್ಳೆಗಳಿಗೆ ಲೇಪಿಸಿ 10 ನಿಮಿಷದ ಬಳಿಕ ತೊಳೆಯಬೇಕು. ತುರಿಕೆ ಹಾಗೂ ಉರಿ ಅಧಿಕವಿರುವ ಬೆವರು ಗುಳ್ಳೆಗಳಿಗೆ ಈ ಮನೆಮದ್ದು ಉತ್ತಮ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.