ಟೀಚರ್‌ ಉದ್ಯೋಗವಲ್ಲ ; ಉಪಾಧಿ


Team Udayavani, Nov 8, 2019, 5:15 AM IST

cc-14

ಸಾಂದರ್ಭಿಕ ಚಿತ್ರ

ಮೊನ್ನೆ ಪೇಟೆಯಲ್ಲಿ ಪರಿಚಯದವರೊಬ್ಬರು ಸಿಕ್ಕಿದಾಗ, ಮಾತಿನ ಮಧ್ಯೆ “ಮುಗಿಯಿತೇ ಬಿ.ಎಡ್‌ ಕೋರ್ಸ್‌?’ ಎಂದು ಕೇಳಿದರು. “ಇಲ್ಲಾ, ಇನ್ನು ಒಂದು ಸೆಮಿಸ್ಟರ್‌ ಇದೆ’ ಎಂದಾಗ, “ಹೋ! ಮತ್ತೆ ಟೀಚರ್‌ ಆಗ್ತಿ’ ಎಂದಾಗ ಹೌದೆಂದು ಉತ್ತರಿಸಿದೆನು. “ನಿಮಗೆ ಇವತ್ತು ರಜೆಯಾ?’ ಎಂದು ನಾನು ಕೇಳಿದ್ದೇ ತಪ್ಪಾಯಿತೇನೋ?’. “ಇಲ್ಲಪ್ಪಾ, ನಿಮ್ಮ ಹಾಗೆಯಾ ನಮಗೆ? ಟೀಚರ್‌ನವರಿಗಾದ್ರೆ ಎಪ್ರಿಲ್‌-ಮೇ ರಜೆ, ಮಳೆ ಬಂದ್ರೂ ರಜೆ, ಬಿಸಿಲು ಬಂದ್ರೂ ರಜೆ, ನನಗೆ ಸ್ವಲ್ಪ ಬೇರೆ ಕೆಲಸ ಇರುವುದರಿಂದ ಅರ್ಧ ದಿನ ರಜೆ ಹಾಕಿದ್ದೇನೆ’ ಎಂದರು.

ಈ ಮಾತು ನನ್ನ ಮನಸ್ಸನ್ನು ಕೊರೆಯುತ್ತಿರುವುದರಿಂದಾಗಿ ನನ್ನ ಅನಿಸಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಕೆಲವರಿಗೆ, ಶಿಕ್ಷಕ ವೃತ್ತಿ ಎಂದರೆ ಕೇವಲ ರಜೆ ಎಂದು ಮಾತ್ರ ಅನಿಸುತ್ತಿದೆಯೇ? ಅದರೊಂದಿಗೆ, ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳ ಒಳಿತಿಗಾಗಿ, ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವ ಚಿತ್ರಣವೇಕೆ ಕಾಣಿಸುತ್ತಿಲ್ಲ? ಜೋರಾಗಿ ಮಳೆ ಸುರಿದರೆ ಮುಂಜಾಗ್ರತಾ ಕ್ರಮವಾಗಿ, ಮಕ್ಕಳಿಗೆ ರಜೆ ನೀಡಿದರೆ, ಅದು ಹಾಸ್ಯದ ವಿಷಯವಾಗಿ ಕಾಣಿಸುತ್ತಿರುವುದು ವಿಷಾದನೀಯ.

ಒಬ್ಬ ಅಧ್ಯಾಪಕ/ಕಿ ತನ್ನ ಸ್ವಂತ ಮಕ್ಕಳಿಗೆ ನೀಡುವ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ತನ್ನ ಶಾಲಾ ವಿದ್ಯಾರ್ಥಿಗಳೊಂದಿಗೆ ಕಳೆಯುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪೋಷಿಸಿ, ಪ್ರೋತ್ಸಾಹಿಸಿ ಮುನ್ನಡೆಸುವವರು ಶಿಕ್ಷಕರು. ತರಗತಿಯಲ್ಲಿ ಪಾಠ ಮಾಡುತ್ತ, ಪುಟಾಣಿಗಳ ಮನಸ್ಸಿನಲ್ಲಿರುವ ಕುತೂಹಲ ಭರಿತ ನಾನಾ ಪ್ರಶ್ನೆಗಳಿಗೆ ಉತ್ತರಿಸುತ್ತ, ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುತ್ತ, ಸರಿ-ತಪ್ಪುಗಳ ಬಗ್ಗೆ ತಿಳಿಸಿ, ಸರಿಯಾದ ಮಾರ್ಗದರ್ಶನವನ್ನಿತ್ತು, ಓರ್ವ ಆದರ್ಶ ವ್ಯಕ್ತಿಯನ್ನಾಗಿ ರೂಪಿಸುವವರು ಶಿಕ್ಷಕರು.

ಜನಗಣತಿ, ಮಕ್ಕಳ ಗಣತಿ, ಜಾನುವಾರು ಗಣತಿ ಎಂದು ಮನೆಮನೆಗೆ ತೆರಳಿ, ಮಾಹಿತಿಗಳನ್ನು ಕಲೆಹಾಕಿ, ನಗುಮೊಗದೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುವವರು ನಮ್ಮ ಶಿಕ್ಷಕರು. ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟವನ್ನು ಬಡಿಸಿ, ವಿದ್ಯಾರ್ಥಿಗಳು ಸಂತೃಪ್ತಿಯಿಂದ ಊಟ ಮಾಡುವುದನ್ನು ನೋಡಿ ಖುಷಿಪಡುವವರು ಅಧ್ಯಾಪಕರು. ವಿದ್ಯಾರ್ಥಿಗಳನ್ನು ಪ್ರತಿಭಾ ಕಾರಂಜಿ, ಕ್ರೀಡೋತ್ಸವ, ಶಾಲಾ ವಾರ್ಷಿಕೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ, ಇನ್ನೊಂದೆಡೆ ಪರೀಕ್ಷೆಗೆ ಅಣಿಗೊಳಿಸುತ್ತಾ, ಮತ್ತೂಂದೆಡೆ ಬದುಕಿನಲ್ಲಿನ ಏಳು-ಬೀಳುಗಳನ್ನು ಧೈರ್ಯವಾಗಿ ಎದುರಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯುವದನ್ನು ತಿಳಿಸಿಕೊಡುವ ಜವಾಬ್ದಾರಿಯೂ ಶಿಕ್ಷಕರದ್ದು. ಅಲ್ಲದೇ ಶಾಲೆಯಲ್ಲಿ ಹಾಜರಿ ಪುಸ್ತಕದಿಂದ ಹಿಡಿದು, ವಿದ್ಯಾರ್ಥಿವೇತನ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆ, ಕಬ್ಬಿಣದಂಶದ ಮಾತ್ರೆಗಳ ವಿತರಣೆ, ಶಿಕ್ಷಕ-ರಕ್ಷಕರ ಸಭೆ… ಹೀಗೆ ನೂರೆಂಟು ಕೆಲಸಗಳನ್ನು ನಿರ್ವಹಿಸಿ, ಅದರ ದಾಖಲೆಗಳನ್ನು ತಯಾರಿಸಿ ಜೋಪಾನವಾಗಿಡಬೇಕಾದ ಹೊಣೆ ಶಿಕ್ಷಕರದ್ದು.

ಆದಿತ್ಯವಾರ ಶಾಲೆಗೆ ರಜೆ ಇರುವುದರಿಂದಾಗಿ ತಮ್ಮ ಮಕ್ಕಳ ಕೀಟಲೆ, ತುಂಟಾಟಗಳನ್ನು ನೋಡಿ ಬೇಸತ್ತು, ಭಾನುವಾರವೂ ಶಾಲೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತೆಂದು ಯೋಚಿಸುವ ಪೋಷಕರೂ ಇದ್ದಾರೆ. ಮನೆಯಲ್ಲಿ ಒಂದೆರಡು ಮಕ್ಕಳನ್ನು ಸಂಭಾಳಿಸುವಲ್ಲಿ ಹೈರಾಣಾಗಿರುವ ಪೋಷಕರ ನಡುವೆ, ತರಗತಿಯಲ್ಲಿ 50-60 ವಿದ್ಯಾರ್ಥಿಗಳನ್ನು ಸಂಭಾಳಿಸಿ, ಸರಿಯಾದ ಮಾರ್ಗದರ್ಶನವನ್ನು ನೀಡುವ ಅಧ್ಯಾಪಕರ ತಾಳ್ಮೆಗೆ ಸರಿಸಾಟಿ ಯಾವುದಿದೆ? ಅಂದು ವಿದ್ಯಾಭ್ಯಾಸಕ್ಕಾಗಿ ಗುರುಗಳನ್ನು ಹುಡುಕಿಕೊಂಡು ವಿದ್ಯಾರ್ಥಿಗಳು ಹೋಗುತ್ತಿದ್ದರು. ಆದರೆ, ಇಂದು ಅರ್ಧದಲ್ಲಿ ಶಾಲೆಬಿಟ್ಟ ಮಕ್ಕಳನ್ನು, ಬಹುದಿನಗಳ ಕಾಲ ಗೈರುಹಾಜರಾಗಿರುವ ಮಕ್ಕಳನ್ನು ಹುಡುಕಿಕೊಂಡು, ಮನೆಮನೆಗೆ ಅಧ್ಯಾಪಕರು ಹೋಗಬೇಕಾಗಿದೆ, ಹಾಗೂ “ಮರಳಿ ಬಾ ಶಾಲೆಗೆ’ ಎಂದು ಕರೆತರುವ ಜವಾಬ್ದಾರಿ ಶಿಕ್ಷಕರದ್ದು.

ಒಂದನೇ ತರಗತಿಗೆ ಸೇರಿದ ಮೊದಲ ದಿನ, ಪೋಷಕರು ತಮ್ಮ ಮಕ್ಕಳನ್ನು ತರಗತಿಯಲ್ಲಿ ಬಿಟ್ಟು ಹೊರಡುವಾಗ, ಇಡೀ ಶಾಲೆಯೇ ಒಂದಾಗುವಂತೆ ಅಳುವ ಮಕ್ಕಳು ಒಂದೆಡೆಯಾದರೆ, ಕುಳಿತಲ್ಲಿ ಕೂರದೆ, ಇಡೀ ತರಗತಿಯಲ್ಲಿರುವ ಇತರರಿಗೆ ತಂಟೆ ಮಾಡುವ ಮಕ್ಕಳು ಇನ್ನೊಂದೆಡೆ. ಈ ಎರಡರ ಪೈಕಿ, ನಾವೂ ಒಂದು ವರ್ಗಕ್ಕೆ ಸೇರಿದವರಾಗಿದ್ದೆವು. ಆದರೆ, ನಮ್ಮನ್ನು ಸಮಾಧಾನ ಮಾಡಿ, ಶಾಲೆಗೆ ದಿನಾಲೂ ಬರುವಂತೆ ತಿಳಿಹೇಳಿ, ಚಾಕಲೇಟು ಕೊಟ್ಟು ರಮಿಸಿ, ತಿದ್ದಿತೀಡಿ, ಬುದ್ಧಿ ಹೇಳಿ ಅಕ್ಷರಾಭ್ಯಾಸವನ್ನು ಆರಂಭ ಮಾಡಿದ ನಮ್ಮ ಒಂದನೇ ತರಗತಿಯ ಟೀಚರನ್ನು ಮರೆಯಲು ಸಾಧ್ಯವೆ? ಅವರ ಆ ತಾಳ್ಮೆ ನಮಗಿದೆಯೇ?

ದಾರಿಯಲ್ಲಿ ಎದುರು ಸಿಕ್ಕಿದಾಗ “ನಮಸ್ತೆ ಟೀಚರ್‌’ ಅಥವಾ “ನಮಸ್ತೆ ಸಾರ್‌’ ಎಂದಾಗ, ಸಂತಸ ಪಡುವವರು ಶಿಕ್ಷಕರು. ಯಾವುದೇ ಫ‌ಲಾಪೇಕ್ಷೆಗಳಿಲ್ಲದೇ ಎಷ್ಟೋ ವರ್ಷಗಳಿಂದ ಶಿಕ್ಷಕನಾಗಿ, ಇದ್ದಷ್ಟೇ ಸಂಬಳದಲ್ಲಿ ದುಡಿಯುತ್ತಾ, ತಾನು ಕಲಿಸಿದ ವಿದ್ಯಾರ್ಥಿಗಳು ಉನ್ನತ, ಅತ್ಯುನ್ನತ ಸ್ಥಾನಕ್ಕೇರಿದಾಗ “ನನ್ನ ವಿದ್ಯಾರ್ಥಿನಿ’ ಎಂದು ಹಿರಿಹಿರಿ ಹಿಗ್ಗುವ ಜೀವ, ಅದು ಶಿಕ್ಷಕರದ್ದು.

ತಮ್ಮ ವಿದ್ಯಾರ್ಥಿಗಳ ಏಳಿಗೆ, ಶ್ರೇಯೋಭಿವೃದ್ಧಿ ಹಾಗೂ ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ತಮ್ಮ ಖುಷಿಯನ್ನು ಕಂಡುಕೊಂಡು ಸತ್ಪ್ರಜೆಯನ್ನಾಗಿ ರೂಪಿಸುವ ಮಹಾನ್‌ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಿಕ್ಷಕ ವೃಂದದವರಿಗೆಲ್ಲರಿಗೂ ಸಲಾಂ!

ಅನುಷಾ ಎಸ್‌. ಶೆಟ್ಟಿ
ಬಿಎಡ್‌ (4ನೇ ಸೆಮಿಸ್ಟರ್‌), ಡಾ. ಟಿ. ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯ, ಉಡುಪಿ

ಟಾಪ್ ನ್ಯೂಸ್

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.