ಹದಿಹರೆಯದ ದಿನಗಳು


Team Udayavani, Nov 22, 2019, 4:39 AM IST

pp-15

ವಿದ್ಯಾರ್ಥಿ ಜೀವನ ಒಂದು ಬಹಳ ಸುಂದರವಾದ ಜೀವನ. ಎಲ್ಲರೂ ಪ್ರಬುದ್ಧರಾದ ಮೇಲೆ ವಿದ್ಯಾರ್ಥಿಗಳಾಗಿದ್ದ ದಿನಗಳನ್ನು ನೆನೆಯುತ್ತಾರೆ. ಅದು ಜ್ಞಾನವನ್ನು ಪಡೆಯುವ ಕಾಲಘಟ್ಟ ಎಂಬುದು ನಿಜವೇ. ಆದರೆ, ಜೀವನದ ಅತ್ಯಂತ ಸಂತೋಷದಾಯಕ ಸಮಯವೂ ಹೌದು. ವಿದ್ಯಾರ್ಥಿ ಜೀವನದಲ್ಲಿ ಅನೇಕ ಸೋಲುಗೆಲುವುಗಳನ್ನು ಕಾಣುತ್ತೇವೆ. ಆದರೆ, ಅಲ್ಲಿ ಸೋಲು ಮುಖ್ಯವಾಗುವುದೇ ಇಲ್ಲ. ಸೋಲಿನಲ್ಲಿಯೂ ಒಂದು ಬಗೆಯ ನಿರ್ಲಿಪ್ತ ಭಾವವನ್ನು ಹೊಂದಿ “ಬಂದಂತೆ ಬದುಕು’ ಎಂಬು ಸಾಗುವ ಆತ್ಮವಿಶ್ವಾಸ ಮೂಡುವುದು ಇದೇ ಸಂದರ್ಭದಲ್ಲಿ.

ವಿದ್ಯಾರ್ಥಿ ಜೀವನ ಬರುವುದು ಹದಿಹರೆಯದಲ್ಲಿ. ಅದು ಕನಸು ಕಾಣುವ ದಿನಗಳು. ಹದಿಹರೆಯದ ದಿನಗಳು ಎಂದಾಕ್ಷಣ ಒಂದು ರೀತಿಯ ನವಿರು ಭಾವನೆ ನಮ್ಮಲ್ಲಿ ಮೂಡುತ್ತದೆ. ಕಷ್ಟವನ್ನೂ ಸಂಭ್ರಮಿಸುವ ದಿನಗಳಿವು. ತುಂಟತನ, ಚೇಷ್ಟೆ , ಚೆಲ್ಲಾಟ, ಆಟ, ನೋವು-ನಲಿವು… ಇತ್ಯಾದಿಗಳ ನಡುವೆ ಎಲ್ಲ ಸಂಕಟಗಳು ಮರೆತುಹೋಗುತ್ತವೆ.

ಹಾಗೆಂದು, ಹದಿಹರೆಯದ ವಿದ್ಯಾರ್ಥಿ ಜೀವನದಲ್ಲಿ ಎಚ್ಚರಿಕೆಯೂ ಅಗತ್ಯ. ಇವೇ ದಿನಗಳಲ್ಲಿ ವಿದ್ಯಾರ್ಥಿ ದಾರಿತಪ್ಪುವುದು. ಈ ಹಿಂದಿನ ದಿನಗಳಲ್ಲಂತೂ ದಾರಿ ತಪ್ಪಿಸುವ ಸಾಧ್ಯತೆಗಳು ಕಡಿಮೆ ಇದ್ದವು. ಈಗ ಸಾಮಾಜಿಕ ಜಾಲತಾಣಗಳಿವೆ, ಸೋಶಿಯಲ್‌ ಮೀಡಿಯಾಗಳಿವೆ. ದಾರಿ ತಪ್ಪಲು ಸಾಕಷ್ಟು ಅವಕಾಶಗಳಿವೆ.

ಈ ವಿದ್ಯಾರ್ಥಿ ಜೀವನದಲ್ಲಿಯೇ ಕೆಲವರು ಮೊಬೈಲ್‌ಗೆ ದಾಸರಾಗಿಬಿಡುತ್ತಿದ್ದಾರೆ. ಈ ಸಮಯದಲ್ಲಿ ವಿದ್ಯಾರ್ಥಿಯ ವರ್ತನೆ ಕೂಡ ಕೊಂಚ ಬದಲಾಗಿರುತ್ತದೆ. ಇಂದಿನ ವಿದ್ಯಾರ್ಥಿಗಳು ಸಹಜವಾಗಿ ಹಲವಾರು ಮೊಬೈಲ್‌ ಗೇಮ್‌ಗಳಾದ ಪಬ್‌-ಜಿ, ಕ್ಯಾಡಿಕ್ರಶ್‌, ಟಿಕ್‌-ಟಾಕ್‌ಗಳಲ್ಲಿ ಸಕ್ರಿಯವಾಗಿರುವುದನ್ನು ನೋಡುತ್ತೇವೆ.

ಈ ದಿನಗಳು ಹೇಗಿರುತ್ತವೆ ಎಂದರೆ ಯಾರು ಏನು ಬುದ್ಧಿ ಮಾತು ಹೇಳಿದರೂ ಕೇಳುವ ಸ್ಥಿತಿ ಇರುವುದಿಲ್ಲ. ಸ್ವತಃ ತಂದೆತಾಯಿಯ ಮಾತುಗಳನ್ನು ಮೀರಿ ನಡೆಯುವ ಹುಡುಗ-ಹುಡುಗಿಯರಿದ್ದಾರೆ. ಅವರಿಗೆ ಆ ಸಂದರ್ಭದಲ್ಲಿ ಏನೂ ಅನ್ನಿಸುವುದಿಲ್ಲ. ಆದರೆ, ಕಾಲ ಕಳೆದ ಬಳಿಕ ಕೆಲವರು ವ್ಯಥಿಸುತ್ತಾರೆ. ವಿದ್ಯಾರ್ಥಿಗಳಿಗೆ ತಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ಅವರಿಗೆ ಅರಿವಿರುವುದಿಲ್ಲ. ಆಗ ಅವರ ಸ್ಥಿತಿಯನ್ನು ಎಚ್ಚರಿಸುವ ಕೆಲಸ ನಡೆಯಲೇಬೇಕು. ಮನಸ್ಸು ಎಂಬುದು ಚಂಚಲವಾದುದು. ಆದರೆ, ಸತತವಾಗಿ ಒಳ್ಳೆಯ ನುಡಿಗಳನ್ನು ಹೇಳುವಂತಾದರೆ ಯಾರಿಗಾದರೂ ಬುದ್ಧಿ ಬಂದೇ ಬರುತ್ತದೆ.

ತಂದೆತಾಯಿಗಳಾಗಲಿ, ಪ್ರಾಧ್ಯಾಪಕರಾಗಲಿ ಬುದ್ಧಿಮಾತು ಹೇಳದೆ ಸುಮ್ಮನಿರುವುದು ಕೂಡ ಸರಿಯಲ್ಲ. ದಾರಿ ತಪ್ಪುವ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾದರೆ ಮಾತ್ರ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿದಂತಾಗುತ್ತದೆ.

ದಿಶಾ
ಪ್ರಥಮ ಎಲ್‌ಎಲ್‌ಬಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.