ಸಂತಸ ತಂದ ಮೊದಲ ಸಂಪಾದನೆ


Team Udayavani, Jul 12, 2019, 5:00 AM IST

u-12

ಕೆಲವೊಂದು ಅನುಭವಗಳು ಎಷ್ಟು ಖುಷಿಯನ್ನು ನೀಡುತ್ತವೆ ಅಂತಂದ್ರೆ ಜೀವನದಲ್ಲಿ ಆ ಘಟನೆಯನ್ನು ಮರೆಯೋದಕ್ಕೆ ಸಾಧ್ಯವೇ ಇಲ್ಲ. ಕಾಲೇಜಿನ ಸೆಮಿಸ್ಟರ್‌ ಪರೀಕ್ಷೆ ಮುಗಿದ ಅನಂತರ ಬಂದಂತಹ ಮೊದಲ ಅವಕಾಶ ಪುರಸಭೆಯಲ್ಲಿ ಡಾಟಾ ಎಂಟ್ರೀ ಮಾಡೋ ಕೆಲಸ. ನುಡಿ-ಬರಹದ ಪರಿಚಯ ಇದ್ದುದಕ್ಕೆ ಅದ್ಯಾಕೋ ನನ್ನ ಕೇಳದೇ ಆ ಕೆಲಸಕ್ಕೆ ನನ್ನ ಹೆಸರನ್ನ ನೋಂದಾವಣಿ ಮಾಡಿಬಿಟ್ಟಿದ್ರು. ಪುರಸಭೆಯಿಂದ ಕರೆ ಬಂದು “ನಾಡಿದ್ದಿನಿಂದ ಬಂದು ಸೇರ್ಕೊಳ್ಳಿ’ ಅಂತ ಹೇಳಿದಾಗ, ಮನೆಯಲ್ಲಿ ಒಂದು ಮಾತೂ ಹೇಳದೇ ಹೊರಟು ನಿಂತಿದ್ದೆ. ಏನು ಬೇಕಾದ್ರೂ ಆಗ್ಲಿ ಒಂದು ಪ್ರಯತ್ನ ಅಂತಂದು ನನ್ನ ಪಾಡಿಗೆ ಕೈಗೆ ಸಿಕ್ಕ ಒಂದಷ್ಟು ಬಟ್ಟೆಯನ್ನು ಬ್ಯಾಗಿಗೆ ತುರುಕಿಕೊಂಡು ಮನೆ ಬಿಟ್ಟಿದ್ದೆ.

ಹನ್ನೆರಡು ಸಾವಿರ‌ ಸಂಬಳ. ಅಂದಿನಿಂದಲೇ ನನ್ನ ಕೆಲಸ ಪ್ರಾರಂಭ. ಹೇಳುವುದನ್ನು ಕೇಳಿ ಮಾತ್ರ ಗೊತ್ತಿದ್ದ ನನಗೆ ಈಗ ಅಸಲೀ ಪುರಸಭೆಯ ಕೆಲಸದ ಅನುಭವವೂ ದೊರೆಯುವುದರಲ್ಲಿತ್ತು. ಒಳಹೋಗಿ ಪರಿಚಯ ಹೇಳಿದಾಗ ನನ್ನ ಒಂದು ಕಂಪ್ಯೂಟರ್‌ ಮುಂದೆ ತಂದು ನಿಲ್ಲಿಸಿಬಿಟ್ಟರು. ಅಲ್ಲಿಂದ ನನ್ನ ಕಟಕಟ, ಕುಟುಕುಟು ಕುಟ್ಟುವ ಕೆಲಸ ಜಾರಿಯಾಗಿ ಕುಟ್ಟುವುದಕ್ಕೆ ಪ್ರಾರಂಭಿಸಿದೆ. ಎಷ್ಟುದ್ದ ಹೆಸರುಗಳು, ಏನೇನೋ ಹೆಸರುಗಳು, ಪದಗಳಿಗೆ ಸಿಕ್ಕದಂಥವೂ ಇತ್ತು.

ನಾನಂತೂ ಸಂಪೂರ್ಣವಾಗಿ ಕುಟ್ಟುವುದರಲ್ಲೇ ತಲ್ಲೀನಳಾಗಿ ಹೋದೆ. ನಾವೆಷ್ಟು ಪದಗಳನ್ನು ಟೈಪಿಸಿದ್ದೇವೆ ಅನ್ನುವುದರ ಮೇಲೆ ಹಾಗೂ ವೇಗದ ಮೇಲೆ ನನ್ನ ಸಂಬಳವು ನಿಗದಿಯಾಗಿತ್ತು.ಒಂದೆರಡು ವಾರಗಳು ಯಾವುದೇ ತೊಂದರೆಯಿಲ್ಲದೇ ನನ್ನ ಟೈಪಿಸುವ ಕೆಲಸ ಜಾರಿಯಲ್ಲಿತ್ತು. ಅನಂತರ ಬೇಜಾರು ಅನ್ನಿಸೋಕೆ ಶುರುವಾಗಿ ಇದೂ ಒಂದು ಕೆಲಸನಾ ಅನ್ನಿಸುವಷ್ಟರಲ್ಲಿ ಮತ್ತೆ ಕಾಲೇಜು ಪ್ರಾರಂಭವಾಗಿತ್ತು. ನಾನೆಷ್ಟು ಪದಗಳನ್ನು , ಹೆಸರುಗಳನ್ನು ಟೈಪಿಸಿದ್ದೆ ಎಂದೇ ನನಗೆ ನೆನಪಿರಲಿಲ್ಲ. ಗಣಿತಕ್ಕೂ ಸಿಕ್ಕಿರಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ನನ್ನ ಕೈಗೆ ಸಿಗಲಿದ್ದ ಮೊತ್ತದ ಕನಿಷ್ಟ ಅಂದಾಜೂ ನನಗಿರಲಿಲ್ಲ.

ಕಾಲೇಜಿನಲ್ಲಿ ತರಗತಿಗಳು ಪ್ರಾರಂಭವಾಗಿ ಬಿಡುವಿನ ಸಂದರ್ಭದಲ್ಲಿ ನನ್ನ ವಿಭಾಗ ಮುಖ್ಯಸ್ಥರು ಕರೆದು ಲೆಟರ್‌ ಒಂದನ್ನು ಕೈಗಿಟ್ಟು “ನಿನಗ್ಯಾವುದೋ ಲೆಟರ್‌ ಬಂದಿದೆ. ಅದೇನು ನೋಡು’ ಅಂತಂದರು. ಕ್ಲಾಸ್‌ನಲ್ಲಿ ತೆರೆದು ನೋಡಿದಾಗ ಅದು ಬರೋಬ್ಬರಿ ಹನ್ನೆರಡು ಸಾವಿರ ರೂಪಾಯಿಗಳ ಒಂದು ಚೆಕ್‌! ಅದೇ ನನ್ನ ಮೊದಲ ಕಾಲೇಜು ದಿನಗಳ ಸಂಪಾದನೆಯಾಗಿತ್ತು. ಇದಕ್ಕಾಗಿ ನಾನು ಪಟ್ಟ ಕಷ್ಟವೆಲ್ಲ ಆ ಚೆಕ್‌ನ್ನು ಕಂಡಾಗ ಮರೆತುಹೋಗಿತ್ತು.

ಅಪರ್ಣಾ ಎ. ಎಸ್‌.
ಪತ್ರಿಕೋದ್ಯಮ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.