ನಿಜವಾದ ಶಿಕ್ಷಣ
Team Udayavani, May 31, 2019, 6:00 AM IST
ಕಾಲ ಏಕೆ ಹೀಗೆ ಬದಲಾಗುತ್ತಿದೆ ! ಮನಸ್ಸು ನಿಯಂತ್ರಣವನ್ನು ಮೀರುತ್ತಿದೆ. ಕನಸಲ್ಲಿ ಕಾಣುವ ಕಲ್ಪನಾಲೋಕ ಮೆಲ್ಲನೆ ದೂರವಾಗಲಾರಂಭಿಸಿದೆ. ನಡೆಯುವ ಹೆಜ್ಜೆಗಳಲ್ಲಿ ದೃಢತೆಯ ಭಾವವಿಲ್ಲ. ಮನಸ್ಸು ಭವಿಷ್ಯವನ್ನು ಚಿಂತಿಸಿ ವಿಚಲಿತ ಪಡುತ್ತಿದೆ.
ಸ್ವಾಮಿ ವಿವೇಕಾನಂದರು ಹೇಳಿದ್ದರು, ಶಿಕ್ಷಣದ ಗುರಿ “ಪುರುಷ ಸಿಂಹಗಳ ನಿರ್ಮಾಣ’ ಎಂದು. ಹಾಗಿದ್ದರೆ, ಶಿಕ್ಷಣ ನಮ್ಮಲ್ಲಿ ಶ್ರದ್ಧೆ- ಆತ್ಮವಿಶ್ವಾಸಗಳನ್ನು ಬಲಪಡಿಸ ಬೇಡವೆ? ಶಿಕ್ಷಣ ನಮ್ಮಲ್ಲಿ ಚಾರಿತ್ರ್ಯ ನಿರ್ಮಾಣ ಮಾಡಬೇಡವೆ? ವಿವೇಕಾನಂದರು ಮುಂದುವರಿದು ಹೇಳುತ್ತಾರೆ, “ನಮ್ಮ ಈಗಿನ ಶಿಕ್ಷಣ ನಮಗೆ ದೌರ್ಬಲ್ಯ ಗಳನ್ನು ಮಾತ್ರ ಕಾಣಿಸುತ್ತಿದೆ. ನಮ್ಮ ಈಗಿನ ಶಿಕ್ಷಣ ನಮಗೆ ಸೋಲುವುದನ್ನು ಕಲಿಸುತ್ತದೆ. ನಮ್ಮ ಈಗಿನ ಶಿಕ್ಷಣ ನಮಗೆ ಯಾವುದನ್ನು ಸಾಧ್ಯವಿಲ್ಲ ಎಂಬುದನ್ನು ಕಲಿಸುತ್ತದೆ. ಪರಮ ಶಕ್ತಿಯ ಪ್ರತಿಪಾದಕರಾದ ನಾವು ನಮ್ಮಿಂದ ಸಾಧ್ಯವಿಲ್ಲ ಎನ್ನುವಂಥ ಕಲ್ಪನೆಯಲ್ಲಿ ಮುಳುಗಿದ್ದೇವೆ. ಯಾವಾಗಲೂ ಭಯ ಮತ್ತು ಭ್ರಮೆಯ ನಡುವೆ ಪುಸ್ತಕದ ಪುಟಗಳನ್ನು ತಿರುವಿಹಾಕಲಾಗುತ್ತದೆ. ಅಸಂಖ್ಯ ತಲ್ಲಣಗಳ ನಡುವೆ ಅವರಿವರ ನಿಯಮಗಳು ತಲೆಗೆ ಹೋಗುತ್ತವೆ. ರಾಮಕೃಷ್ಣ , ಬುದ್ಧ , ಭಗತ್ ಸಿಂಗ್ ಆಜಾದ್, ಗಾಂಧೀಜಿ ಇಂಥ ಮಹಾತ್ಮರ ಉಸಿರು ಈ ಗಾಳಿಯಲ್ಲಿ ಇದೆ. ಆದರೆ, ಅದನ್ನು ಗುರುತಿಸಲಾಗುತ್ತಿಲ್ಲ. ನಾವು ನಮ್ಮನ್ನು ಕಂಡುಕೊಳ್ಳುವುದಕ್ಕೆ ಶಿಕ್ಷಣ ಕಾರಣವಾಗಬೇಕು.
ವಿಷ್ಣುವರ್ಧನ ಶೆಟ್ಟಿ
ಪ್ರಥಮ ಬಿ. ಎ.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ