ನಾವು ಮಂಜೇಶ್ವರಕ್ಕೆ ಹೋದೆವು!


Team Udayavani, Oct 12, 2018, 6:00 AM IST

z-13.jpg

ನಾವು ಶನಿವಾರದಂದು ಮಂಜೇಶ್ವರಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಅಂದು ನಾವು 36 ಮಂದಿ ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರು ಇದ್ದೆವು. ಎಂಟು ಗಂಟೆಗೆ ನಾವು ಉಜಿರೆಯಿಂದ ಹೊರಟೆವು. ಉಜಿರೆಯಿಂದ ಮಂಗಳೂರಿಗೆ ಎರಡೂವರೆ ಗಂಟೆ ಬೇಕಿತ್ತು. ನಾವು ಬಸ್ಸಿನಲ್ಲಿ ಹಾಡುವುದು, ಕುಣಿಯುವುದು- ಹೀಗೆ ಸಮಯವನ್ನು ಕಳೆಯುತ್ತ 11 ಗಂಟೆಗೆ ಮಂಗಳೂರಿಗೆ ತಲುಪಿದೆವು. ಬಸ್ಸಿನಿಂದ ಇಳಿದು ಸ್ವಲ್ಪ ನಡೆದು ನಾವು 70 ಕ್ಕಿಂತ ಹೆಚ್ಚು ವರ್ಷ ಇತಿಹಾಸವಿರುವ ಗ್ರಂಥಾಲಯಕ್ಕೆ ಹೋದೆವು. ಬಹಳ ಸುಂದರವಾದ ಗ್ರಂಥಾಲಯವಾಗಿತ್ತು ಅದು. ಅಲ್ಲಿ ಇದ್ದ ಅಧ್ಯಾಪಕರ‌ ಪರಿಚಯವಾಯಿತು. ಅವರು ಕಿಟೆಲ್‌ ನಿಘಂಟು ಬಗ್ಗೆ ಮಾಹಿತಿ ನೀಡಿದರು. ಹಿಂದಿನ ಕಾಲದಲ್ಲಿ ಕಲ್ಲಿನ ಬರಹ ಮತ್ತು ತಾಳೆಗರಿ ಬರಹ ಹೆಚ್ಚಾಗಿ ಕಂಡುಬರುತ್ತಿತು. ಕಲ್ಲಿನಲ್ಲಿ ಬರೆದು ಅದನ್ನು ಅಚ್ಚು ಮಾಡುತ್ತಿದ್ದರು. ಹೆಚ್ಚಾಗಿ ಚಿತ್ರಗಳ ಬಳಕೆ ಮಾಡುತ್ತಿದ್ದುದರಿಂದ ಇದಕ್ಕೆ ವಿಚಿತ್ರ ವರ್ತಮಾನ ಸಂಘವೆಂದು ಕರೆಯುತ್ತಾರೆ. ಅಲ್ಲಿ ಮಂಗಳೂರು ಸಮಾಚಾರ್‌ ವೃತ್ತಪತ್ರಿಕೆ ನೋಡಿದೆವು. ವೃತ್ತಪತ್ರಿಕೆಯು ವಾರಕ್ಕೊಮ್ಮೆ ಬರುವ ಪತ್ರಿಕೆಯಾಗಿತ್ತು. ಹೀಗೆ ಒಂದು ಗಂಟೆ ಅಲ್ಲಿ ಕಳೆದದ್ದೇ ಗೊತ್ತಾಗಲಿಲ್ಲ. 

ಮಂಜೇಶ್ವರದ ಬಸ್ಸು ಹಿಡಿದು ಬಸ್ಸಿನಿಂದ ಇಳಿದು ಗೋವಿಂದ ಪೈಯವರ ಮನೆಗೆ 10 ನಿಮಿಷದ ಮಾರ್ಗವಿತ್ತು. ಪೈಯವರ ಮನೆಗೆ ತೆರಳಿದ್ದೆವು. ಬಹಳ ಸುಂದರವಾದ ಮನೆಯಾಗಿತ್ತು.  ಅಲ್ಲಿ ಕೂಡ ಒಬ್ಬರು ಸರ್‌ ಅವರ ಪರಿಚಯವಾಯಿತು. ಆ ಮನೆಯ ಒಳಗೆ ಪೈಯವರ ಮೂರ್ತಿ ಇತ್ತು. ಇವರನ್ನು ಕನ್ನಡದ ಮೊದಲ ರಾಷ್ಟ್ರಕವಿ ಎಂದು ಕರೆಯುತ್ತಾರೆ. ಇವರಿಗೆ 22 ಭಾಷೆಗಳು ಬರುತ್ತಿದ್ದವು. ಚಿಕ್ಕ ವಯಸ್ಸಿನಲ್ಲಿ ಕವನಗಳನ್ನು ಬರೆದು ಪ್ರಶಸ್ತಿಗೆ ಪಾತ್ರರಾಗಿದ್ದರು. 

ಇವರ ಮನೆಯಲ್ಲಿ ಬರೆದ ಪುಸ್ತಕಗಳ ಕಾಣಲು ಸಿಗುವುದಿಲ್ಲ. ಯಾಕೆಂದರೆ, ಆ ಪುಸ್ತಕಗಳನ್ನು ಉಡುಪಿಯ ಸಂಶೋಧನಾ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿತ್ತು. ಅಲ್ಲಿ ಇಂತಹ ಕೆಲವೊಂದು ಮಾಹಿತಿಯನ್ನು ಪಡೆದು ನಂತರ ಮನೆಯ ಒಳಗೆ ಹೋದೆವು. ಒಂದು ಕೊಣೆಯಲ್ಲಿ ಯಕ್ಷಗಾನದ ಸಾಮಗ್ರಿಗಳನ್ನು ನೋಡಿದೆವು. ಅದನ್ನು ನೋಡುತ್ತ ನೋಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಕೊನೆಗೆ ಒಂದು ಗ್ರೂಪ್‌ ಫೊಟೊ ತೆಗೆದೆವು. ಇಲ್ಲಿ ನಾವು ಪಡೆದ ಅಮೂಲ್ಯವಾದ ಮಾಹಿತಿ ಹಾಗೂ ಕಳೆದ ಸಮಯದಿಂದ ಪೈಯವರು ಎಷ್ಟು ದೊಡ್ಡ ವಿದ್ವಾಂಸರೆಂದು ತಿಳಿದುಕೊಳ್ಳುವಂತಾಯಿತು. ಇದೊಂದು ಒಳ್ಳೆಯ ಅನುಭವ.
                                            
ನಿತೀಶ್‌ ಚಾರ್ಮಾಡಿ
ಎಸ್‌.ಡಿ.ಎಂ. ಕಾಲೇಜು, ಉಜಿರೆ

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.