ಸೀನಿಯರ್‌ ಮತ್ತು ಜೂನಿಯರ್‌ ಎಂಬ ಭೇದವೇಕೆ?


Team Udayavani, Jun 22, 2018, 6:30 AM IST

admission-open-pgdmaa.jpg

ಕಾಲೇಜು ಶುರುವಾಗಿ ಎರಡು ದಿನ ಕಳೆದವು. ರಜೆಯನ್ನು ಮಜಾದೊಂದಿಗೆ ಮುಗಿಸಿದೆವು. ಈಗ ಎರಡನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ನಾವೀಗ ಹಿರಿಯರು. ಅರ್ಥಾತ್‌ ಸೀನಿಯರ್ಸ್‌. ಈ ಸಲ ನಾವೇ ಅಧಿಕಾರಸ್ಥರು ಎಂಬ ಭಾವನೆ ಇದೆ. ಒಂದು ರೀತಿಯಲ್ಲಿ ಆಳುವ ಸರ್ಕಾರದಂತೆ. ಹೊಸದಾಗಿ ಬರುವ ಜೂನಿಯರ್‌ಗಳನ್ನು ಓರೆಗಣ್ಣಿನಲ್ಲಿ ನೋಡುತ್ತಿದ್ದೇವೆ. ಅವರು ಕಿರಿಯರು ಎಂಬ ಮನೋಭಾವನೆ ಮನಸ್ಸಿನೊಳಗೆ ನೆಲೆಯಾಗಿದೆ.

ನಾವು ಕೂಡ ಜೂನಿಯರ್‌ಗಳಾಗಿದ್ದ ಅನುಭವವನ್ನು ಪಡೆದವರು. ಆಗ ನಮ್ಮ ನಮ್ಮ ಸೀನಿಯರ್‌ಗಳು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದರೋ ಹಾಗೆಯೇ ನಮಗಿಂತ ಕಿರಿಯರನ್ನು ನಡೆಸಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದೇವೆ. ಹಾಗಾಗಿ, ಕಾಲೇಜು ಎಂಬುದು ನಮಗೆ ಪರಿಚಿತ ಸ್ಥಳವಾಗಿ ಈ ವಲಯಕ್ಕೆ ನಾವೇ ಕೇಳುವವರು ಎಂಬ ಭಾವನೆಯನ್ನು ತಳೆದಿದ್ದೇವೆ. ಹೊಸದಾಗಿ ಬಂದವರು ತಮ್ಮ ತರಗತಿಯನ್ನು ಹುಡುಕುತ್ತ ಅಡ್ಡಾದಿಡ್ಡಿ ಹುಡುಕುತ್ತಿರುವಾಗ ನಾವು ನಮ್ಮಲ್ಲಿಯೇ ನಗುತ್ತೇವೆ.

ಶಿಕ್ಷಕರು ಕೂಡ ನಮ್ಮ ಪರವಾಗಿದ್ದಾರೆ ಮತ್ತು ಅವರು ನಮ್ಮನ್ನು ಹೆಚ್ಚು ತಿಳಿದಿದ್ದಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಅವರು ನಮಗೆ ಹೇಳಿದ ಕೆಲಸಗಳನ್ನು ನಾವು ನಿರ್ವಹಿಸಲೇಬೇಕು. ಆದರೆ, ಈಗ ಜೂನಿಯರ್‌ಗಳಿರುವ ಕಾರಣದಿಂದ ನಮ್ಮ ಕೆಲಸಗಳನ್ನು ಅವರಿಗೆ ದಾಟಿಸುತ್ತಿದ್ದೇವೆ.ಸಾಮಾನ್ಯವಾಗಿ ಜೂನಿಯರ್‌ಗಳು ಕಾಲೇಜಿಗೆ ಬರುವಾಗ ಸ್ವಾಗತಿಸುವುದು ವಿದ್ಯಾರ್ಥಿ ಧರ್ಮ. ಆದರೆ, ಈ ಸಂಪ್ರದಾಯವನ್ನು ಹೆಚ್ಚಿನ ಕಡೆಗಳಲ್ಲಿ ಅನುಸರಿಸುವುದಿಲ್ಲ. ಹೊಸದಾಗಿ ಬಂದ ಕಿರಿಯರನ್ನು ನಾನಾ ರೀತಿಯಲ್ಲಿ ಕಾಡುತ್ತಾರೆ. ಇದನ್ನು ರ್ಯಾಗಿಂಗ್‌ ಎಂದು ಕರೆಯುತ್ತಾರೆ.

ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸಬೇಕಾದ ವಿದ್ಯಾರ್ಥಿ ಜೀವನದಲ್ಲಿ ಮನುಷ್ಯ-ಮನುಷ್ಯರು ದ್ವೇಷ ಸಾಧಿಸುವಂಥ ಸಂದರ್ಭ ಒದಗಿಬರುತ್ತಿದೆ! ಜೂನಿಯರ್‌ಗಳು ಗೌರವ ನೀಡಬೇಕೆಂದು ಸೀನಿಯರ್‌ಗಳು ಬಯಸುತ್ತಾರೆ. ಅದು ತಪ್ಪಲ್ಲ. ಆದರೆ, ಜೂನಿಯರ್‌ಗಳು ಗೌರವ ಕೊಟ್ಟರೂ ಅದನ್ನು ಸ್ವೀಕರಿಸದೇ ಅವರ ಮೇಲೆ ಕೆಟ್ಟದಾಗಿ ನಡೆದುಕೊಳ್ಳುವುದು ಸರಿಯಲ್ಲ. ಸೀನಿಯರ್‌ಗಳಾದ ನಾವು ನಮ್ಮ ಕಾಲೇಜಿನಲ್ಲಿ ಜೂನಿಯರ್‌ಗಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡೆವು. ಅವರು ಕೂಡ ಅತ್ಯಂತ ಅಭಿಮಾನದಿಂದ ನಮ್ಮನ್ನು ಕಂಡರು. 

ಜೂನಿಯರ್‌ಗಳು ಕಾಲೇಜಿನ ಮುಖವನ್ನೇ ನೋಡದವರು. ಅವರಿಗೆ ಅನೇಕ ರೀತಿಯ ಕುತೂಹಲಗಳು ಇರುವುದು ಸಹಜ. ಆಗ ಅವರ ಕುತೂಹಲಗಳನ್ನು ತಣಿಸುವಂಥ ಕೆಲಸ ಮಾಡಬೇಕು. ನಾವು ನಮ್ಮ ಕಿರಿಯರನ್ನು ಕರೆದೊಯ್ದು ಕಾಲೇಜಿನ ಪರಿಚಯ ಮಾಡಿಕೊಟ್ಟೆವು.

ಅನೇಕ ಬಾರಿ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬರುವ ಕಿರಿಯರಿಗೆ ಕಾಲೇಜಿನ ಸ್ಥಿತಿಯನ್ನು ನೋಡಿದ ಕೂಡಲೇ ಅವರ ಕನಸುಗಳು ಕಮರಿ ಹೋಗುತ್ತವೆ. ಕಳೆದ ಬಾರಿ ನಾವು ಇದೇ ಕಾಲೇಜಿಗೆ ಬಂದಿದ್ದಾಗ ನಮ್ಮ ಹಿರಿಯರು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡುದರಿಂದ ನಮ್ಮ ಕನಸುಗಳು ಅರಳಿದ್ದವು.

ಕಾಲೇಜು ಲೈಫ್ ಎಂದರೆ ಲವಲವಿಕೆ ಸಮಯ. ಪ್ರಾಯ ಸಹಜವಾದ ಭಾವನೆಗಳು ಅರಳಿರುತ್ತವೆ. ಪ್ರೀತಿ-ಜಗಳಗಳು ಸಾಮಾನ್ಯ. ಆದರೆ, ಜಗಳ ಎಂಬುದು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಕಾಲೇಜಿನ ಜೀವನ ಪ್ರೇರಣೆಯಾಗಬಾರದು.

ಮನೆಯಲ್ಲಿ ಅಣ್ಣ-ತಮ್ಮ, ಅಕ್ಕ-ತಮ್ಮ, ಅಣ್ಣ-ತಂಗಿ ಇಂಥ ಸಂಬಂಧಗಳು ಹೇಗೆ ಇರುತ್ತವೆಯೋ ಹಾಗೆಯೇ ಕಾಲೇಜಿನಲ್ಲಿ ಸೀನಿಯರ್‌-ಜೂನಿಯರ್‌ಗಳ ಸಂಬಂಧ. ಮನೆಯಲ್ಲಿ ಅಕ್ಕನ ಪುಸ್ತಕವನ್ನು ತಮ್ಮ ಬಳಸುತ್ತಾನೆ. ಯಾವುದಾದರೂ ಪಾಠ ಅರ್ಥವಾಗದಿದ್ದರೆ ಆಗ ತಂಗಿ, ಅಣ್ಣನೊಂದಿಗೆ ಆ ಪಾಠದ ವಿವರವನ್ನು ಹೇಳಿಕೊಡುವಂತೆ ಕೇಳುತ್ತಾಳೆ. “ಸುಮ್ಮನೆ ಟ್ಯೂಶನ್‌ಗೆ ಹೋಗುವುದು ಎಂತಕ್ಕೆ ? ಅಣ್ಣನಲ್ಲಿ ಕೇಳಬಾರದೆ?’ ಎಂದು ಅಮ್ಮನೂ ಹೇಳುತ್ತಾರೆ. ಮನೆಯಲ್ಲಿಯೂ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಆಮೇಲೆ, ತಂದೆ-ತಾಯಿಗೆ ದೂರು ಕೊಡುವ ಸಂಪ್ರದಾಯವೂ ಇದೆ. ಇವು ಯಾವುದೂ ತಪ್ಪಲ್ಲ. ಆದರೆ, ಇಂಥ ಕಹಿ ಭಾವನೆಗಳು ತಾತ್ಕಾಲಿಕ ಮಾತ್ರ. ಇವು ಮತ್ತೂಂದು ಕ್ಷಣದಲ್ಲಿ ಮರೆತೇ ಹೋಗುತ್ತವೆ. 

ಮನೆಯಲ್ಲಿ ನಾವು ಹಿರಿಯರಾಗಿ ಕಿರಿಯರನ್ನು ಹೇಗೆ ನಡೆಸುತ್ತೇವೆಯೋ ಹಾಗೆ, ಕಿರಿಯರನ್ನು ಕಾಲೇಜಿನಲ್ಲಿಯೂ ನಡೆಸಿಕೊಳ್ಳಬೇಕು. ನಮ್ಮ ಕಿರಿಯ ತರಗತಿಯಲ್ಲಿ ನಮ್ಮ ತಮ್ಮನೂ ಇರಬಹುದು, ತಂಗಿಯೂ ಇರಬಹುದು. ಇರದಿದ್ದರೆ, ಅಲ್ಲಿ ಇರುವವರನ್ನೇ ತಮ್ಮ-ತಂಗಿಯರೆಂದು ಭಾವಿಸುವುದು ಉತ್ತಮ.

ಬನ್ನಿ  ಜೂನಿಯರ್ , ನಿಮ್ಮೊಂದಿಗೆ ನಾವೂ ಇದ್ದೇವೆ.

– ಅಕ್ಷಯ್‌ ಕುಮಾರ್‌, ಪಲ್ಲಮಜಲು
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ 
ವಿವೇಕಾನಂದ ಕಾಲೇಜ್‌, ಪುತ್ತೂರು 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.