ದ್ವೇಷಿಸುವುದೇಕೆ, ಪ್ರೀತಿಸುವುದ ಬಿಟ್ಟು !


Team Udayavani, Aug 3, 2018, 6:00 AM IST

16.jpg

ಆವತ್ತು ಬೆಳಿಗ್ಗೆ ಬಹಳ ಉತ್ಸಾಹದಿಂದ ಅದೆಲ್ಲಿಗೋ ಹೊರಟಿದ್ದೆ. ಆವತ್ತು ನಾನು ಮಾಡಬೇಕಾದ ಕೆಲಸಗಳ ಪಟ್ಟಿಯಲ್ಲಿ ಅನೇಕ ವಿಷಯಗಳಿದ್ದವು. ಬ್ಯಾಂಕಿಗೆ ಹಣ ಹಾಕುವುದು, ಬಹಳ ದಿನಗಳ ನಂತರ ಹಳೆಯ ಗೆಳೆಯರನ್ನು ಭೇಟಿಯಾಗುವುದು, ಹೀಗೆ ಒಟ್ಟಿನಲ್ಲಿ ನನ್ನ ಆವತ್ತಿನ ದಿನಚರಿ ಆಕರ್ಷಣೀಯವಾಗಿತ್ತು. ಅಷ್ಟರಲ್ಲಿ ಅಮ್ಮನಿಂದ ಒಂದು ಕರೆ. ಯಾರೋ ಸಂಬಂಧಿಕರು ತೀರಿಕೊಂಡಿದ್ದಾರೆ. ಅಲ್ಲಿಗೆ ಹೋಗು ಎಂಬುದು! ಸಾವಿಗೆ ದಿನಚರಿ ಇಲ್ಲ. ಅದು ಹೇಳಿಕೇಳಿ ಬರುವುದಿಲ್ಲ. ಒಟ್ಟಿನಲ್ಲಿ ನನ್ನ ಆವತ್ತಿನ ದಿನಚರಿ ಸಂಪೂರ್ಣ ಬದಲಾಗಿತ್ತು.

ಸಾವಿಗಿರೋ ಶಕ್ತಿ ಅಂಥಾದ್ದು. ನಮ್ಮೆಲ್ಲ ಯೋಜನೆಗಳನ್ನು, ನಮ್ಮೆಲ್ಲ ಕನಸುಗಳನ್ನ ನಾವು ನಿರೀಕ್ಷೆ ಮಾಡದ ಸಾವೊಂದು ನುಚ್ಚುನೂರು ಮಾಡುತ್ತದೆ. ಬಹುಶಃ ನಾವು ಯಾವಾಗ ಸಾಯುತ್ತೇವೆ ಅಂತ ನಿಖರವಾಗಿ ಗೊತ್ತಾಗುವಂತಿದ್ದರೆ, ನಾವು ಕಾಣುವ ಕನಸುಗಳಿಗೆಲ್ಲ ಅರ್ಥವಿರುತ್ತಿತ್ತೋ ಏನೋ. ಮುಂದೊಂದು ದಿನ ಸಾಯುತ್ತೇವೆ ಅಂತ ಗೊತ್ತಿದ್ದೂ ನಾವು ಬದುಕಿನ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತೇವೆ. ಅದು ಬದುಕಿನ ಬಗ್ಗೆ ನಮಗಿರಬಹುದಾದ ನಂಬಿಕೆ ಅಥವಾ ಮೂಢನಂಬಿಕೆ.

ಸಾವಿನ ಅನಂತತೆ ಅಂಥಾದ್ದು. ಅದು ಯಾರನ್ನೂ ಉಳಿಸೋದಿಲ್ಲ. ದೊಡ್ಡವರ ಸಾವುಗಳು ಸ್ವಲ್ಪ ಸುದ್ದಿಯಾಗುತ್ತವೆ ಅನ್ನೋದನ್ನು ಬಿಟ್ಟರೆ ಸಾವು ಎಲ್ಲರಿಗೂ ಒಂದೇ. ಅಲ್ಲಿ ಬೇಧಭಾವ ಇಲ್ಲ. ಸಾವು ಯಾವತ್ತಿಗೂ ಸರಳವಾಗಿರುವುದಿಲ್ಲ. ನಾವು ಮನಸಾರೆ ದ್ವೇಷಿಸುವ ವ್ಯಕ್ತಿ ಸತ್ತಾಗಲೂ ಒಂದು ಕ್ಷಣ ಆ ವಿವರಣೆಯಿಲ್ಲದ ಶೂನ್ಯ ನಮ್ಮನ್ನು ಆವರಿಸಿಕೊಳ್ಳುತ್ತದೆ. ನಮ್ಮೆಲ್ಲರ ಬದುಕು ಒಂದರ್ಥದಲ್ಲಿ ಸಾವಿನತ್ತಲೇ ಚಲಿಸುತ್ತಿದೆ. ಪ್ರತಿಸಾವು ಕೂಡ ಮನದ ಮೂಲೆಯಲ್ಲಿ ಎಲ್ಲೋ ಒಂದು ಕ್ಷಣ ನಮ್ಮನ್ನು ಕಾಡುತ್ತದೆ, ನಮಗೆ ಮನಸ್ಸು ಇರೋದೇ ನಿಜವಾದರೆ…

ನಾನು ಅದುವರೆಗೂ ನೋಡದೇ ಇದ್ದ ಯಾರೋ ಒಬ್ಬರು ನನ್ನನ್ನು ಭೇಟಿಯಾಗಬೇಕೆಂದು ಒಂದೆರಡು ಬಾರಿ ಹೇಳಿದ್ದರಂತೆ. ಆದರೆ, ಕಾಲದ ಆಟವೋ, ನನ್ನ ನಿರ್ಲಕ್ಷ್ಯವೋ ನಾನು ಅವರನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ಅವರ ಸಾವಿನ ಸುದ್ದಿ ಬಂದೆರಗಿತ್ತು.
ನಾನವರನ್ನು ಮೊದಲ ಬಾರಿ ನೋಡಿದ್ದು ಅವರ ಸಾವಿನ ದಿನ. ಇಷ್ಟೇ ಬದುಕು. ಅದು ಭಯಂಕರ ಅನಿರೀಕ್ಷಿತ. ನಾವು ಒಬ್ಬರ ಬಗ್ಗೆ ಏನೇನೋ ಕನಸು ಕಂಡಿರುತ್ತೇವೆ. ಆದರೆ, ನಿನ್ನೆ ಇದ್ದ ಅವರು ಈಗ ಇಲ್ಲ ಅನ್ನುವಾಗ ಒಂದು ವಿಚಿತ್ರ ಮೌನ ಆವರಿಸಿಕೊಳ್ಳುತ್ತದೆ. ಸಾವು ಅಷ್ಟು ಶಕ್ತಿಶಾಲಿ.

ಆದರೆ, ಮುಂದೊಂದು ದಿನ ಸಾಯಲೇಬೇಕಾದ ನಾವು ಒಬ್ಬರ ನೋವಿನಲ್ಲಿ ಏಕೆ ನಮ್ಮ ಸಂತೋಷವನ್ನು ಕಾಣುತ್ತೇವೆ, ಅದೇಕೆ ಬರೀ ಮತ್ತೂಬ್ಬರನ್ನ ದೂರುವುದರಲ್ಲಿಯೇ ಕಾಲ ಕಳೆಯುತ್ತೇವೆ, ಏಕೆ ಕೆಲವೊಮ್ಮೆ ಮತ್ತೂಬ್ಬರ ಸೋಲನ್ನು ಸಂಭ್ರಮಿಸುತ್ತೇವೆ, ಅದೇಕೆ ದ್ವೇಷವನ್ನ ನಂಬುತ್ತೇವೆ? ನಮ್ಮ ದ್ವೇಷ ನಮ್ಮ ಸಾವಿನಲ್ಲಿ ಅಂತ್ಯವಾಗಬಹುದು. ಆದರೆ, ಪ್ರೀತಿ ನಾವು ಸತ್ತ ಮೇಲೂ ಉಳಿಯುತ್ತದೆ. ದ್ವೇಷದಿಂದ ಪಡೆದುಕೊಳ್ಳುವಂಥಾದ್ದು ಏನೂ ಇಲ್ಲ. ನಿಜವಾದ ಪ್ರೀತಿ ಯಾವತ್ತೂ ಸಾಯುವುದಿಲ್ಲ. ಅದೇನೇ ಇರಲಿ, ಸಾವಿನಷ್ಟು ಶಾಶ್ವತ ಬೇರಾವುದೂ ಇಲ್ಲ. ಸಾವು ಮಾತ್ರ ಶಾಶ್ವತ.

ಅಥಿಕ್‌ ಕುಮಾರ್‌, 
ವಾಣಿಜ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.