ಮೊಬೈಲ್‌ ಇಲ್ಲದ ಮೊದಲ ರಾತ್ರಿ


Team Udayavani, Oct 25, 2019, 4:59 AM IST

q-56

ಸುಮಾರು ದಿನಗಳಿಂದ ಆಶಿಸುತ್ತಿದ್ದುದು ಅಂದು ಅನಿರೀಕ್ಷಿತವಾಗಿ ನಡೆದುಹೋಯಿತು. ಅದುವೇ, ಮೊಬೈಲ್‌ ಇಲ್ಲದೆ ಕೆಲ ಸಮಯ ಕಳೆಯುವ ಆಸೆ. ಆಸೆ ನಾನು ನನ್ನ ಇಂದ್ರಿಯಗಳ ಮೇಲೆ ಹಿಡಿತವಿಟ್ಟ ಪರಿಣಾಮವಾಗಿ ತೀರದುದಲ್ಲ, ಬದಲಾಗಿ, ನನ್ನ ತರಗತಿಯ ಗೆಳತಿಯರ ತುಂಟತನದ ಪರಿಣಾಮವಾಗಿ. ಸ್ನಾತಕೋತ್ತರ ಪದವಿಯಂತಹ ಗಂಭೀರ ಸ್ಥಾನದಲ್ಲಿದ್ದರೂ ಮೊಬೈಲ್‌ ತಪ್ಪಿಸಿಡುವುದು, ಬ್ಯಾಗ್‌ ತಪ್ಪಿಸಿಡುವುದು, ಸ್ವಲ್ಪ ಗೋಳಾಟ ಮಾಡಿಸಿ ನಂತರ ಅವರಿಗೆ ಹಿಂದಿರುಗಿಸುವುದು ಪ್ರತಿದಿನದ ಮಕ್ಕಳ ಆಟ. ಆದರೆ, ಆ ದಿನ ಹಾಗೆ ನಡೆಯಲಿಲ್ಲ. ಎಲ್ಲರನ್ನು ಗೋಳಾಡಿಸುವ ನಾನು, ಆ ದಿನ ಗೋಳಾಟ ಮಾಡಿಸಿಕೊಳ್ಳುವ ಸರದಿಯಲ್ಲಿದ್ದೆ. ನಾನು ಕುಳಿತುಕೊಳ್ಳುವ ಸ್ಥಳದಲ್ಲಿಯೇ ಇದ್ದ ಮೊಬೈಲ್‌ ಸ್ವಲ್ಪ ಹೊತ್ತಿನ ನಂತರ ಮಾಯವಾಗಿತ್ತು. ಪ್ರತಿದಿನದ ಮಕ್ಕಳ ಆಟದ ಅರಿವಿದ್ದ ನಾನು ಹೆಚ್ಚು ತಲೆಬಿಸಿ ಮಾಡಿಕೊಳ್ಳಲಿಲ್ಲ. ಯಾರ ಜೊತೆಗೋ ಇರುತ್ತದೆ, ತರಗತಿಯಿಂದ ವಾಪಸ್‌ ಹೋಗುವಾಗ ಖಂಡಿತವಾಗಿ ಕೊಡುತ್ತಾರೆ ಎಂಬ ಅಚಲ ನಂಬಿಕೆಯಲ್ಲಿದ್ದೆ. ಈಗ ಮೊಬೈಲ್‌ ಎಲ್ಲಿದೆ ಎಂದು ವಿಚಾರಿಸಿಕೊಳ್ಳುತ್ತ ಸುತ್ತಾಡಿದರೆ ಗೋಳಾಟ ಜಾಸ್ತಿ ಮಾಡುವರು ಎಂಬ ಸಣ್ಣ ಅಂಜಿಕೆಯಿಂದ ಎಲ್ಲೂ ಯಾರಲ್ಲೂ ವಿಚಾರಿಸದೆ ಅತ್ತಿತ್ತ ತಿರುಗಾಡುತ್ತ ಮುಂದಿನ ವಾರದ ಪ್ರತಿಭಾ ದಿನಾಚರಣೆ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಅರ್ಧದಷ್ಟು ತರಗತಿ ಮಂದಿ ಮನೆಗೆ ಹೊರಟು ನನಗೆ ಹಾಸ್ಟೆಲ್‌ ಸೇರುವ ಸಮಯವು ಸಮೀಪಿಸುತ್ತಿದ್ದರೂ ಇನ್ನೂ ಮೊಬೈಲ್‌ ಕೈಗೆ ಸಿಗದೆ ಅಂಜಿಕೆ ಆರಂಭವಾಯಿತು. ಮೆಲ್ಲಮೆಲ್ಲನೆ ಅಲ್ಲಲ್ಲಿ ಪ್ರತಿಭಾ ದಿನಾಚರಣೆಗೆ ಅಭ್ಯಾಸ ನಡೆಸುತ್ತಿದ್ದ ಸಹಪಾಠಿಗಳ ಬಳಿ ಹೋಗಿ ಕೇಳಲು ಆರಂಭಿಸಿದೆ. ಸಂಶಯ ಇದ್ದವರನ್ನು ಮೊದಲು, ನಂತರ ಎಲ್ಲರನ್ನೂ ವಿಚಾರಿಸಿದೆ. ಎಲ್ಲರೂ, “ನನ್ನ ಬಳಿ ಇಲ್ಲ, ನಾನು ತೆಗೆದಿಲ್ಲ, ಅವರ ಆಣೆ, ಇವರ ಆಣೆ’ಎಂದಾಗ ದಿಗಿಲಾಯಿತು. ಯಾರು ಕದ್ದಿರಲ್ಲಿಕ್ಕಿಲ್ಲ, ಎಲ್ಲಾದರೂ ನಾನೇ ಬೇರೆ ಜಾಗದಲ್ಲಿ ಇಟ್ಟಿರಬಹುದು’ ಎಂದು ಇನ್ನೊಬ್ಬ ಗೆಳತಿ ಜೊತೆ ನನ್ನ ತರಗತಿ ಇಡೀ ಹುಡುಕಾಡಿದೆ. ಎಲ್ಲೂ ಸಿಗಲಿಲ್ಲ. ಸತತ ಹುಡುಕಾಟದ ನಂತರವೂ ಸಿಗಲಿಲ್ಲವಾದ್ದರಿಂದ ಯಾರ ಬಳಿಯಾದರೂ ತಪ್ಪಿ ಬ್ಯಾಗಿನಲ್ಲಿ ಹೋಗಿರಬಹುದು ನಾಳೆ ತಂದು ಕೊಡುವರು ಎಂಬ ತುಂಬಿದ ಭರವಸೆಯಿಂದ ಹಾಸ್ಟೆಲಿಗೆ ತಲುಪಿದೆ.

ಮೊಬೈಲ್‌ ಕೈಯಲ್ಲಿ ಇಲ್ಲದ ಸಮಯವೇ ಅತಿ ಹೊಸತು ಎನಿಸಿತು. ಜೀವನದಲ್ಲಿ ಎಲ್ಲವನ್ನೂ ಒಮ್ಮೆಲೇ ಕಳೆದುಕೊಂಡಂತೆ ಭಾಸವಾಯಿತು. ಆದರೂ ಇಷ್ಟು ದಿನ ಕಾದ “ಮೊಬೈಲ್‌ ರಹಿತ’ ಸಮಯ ಇದೆನಿಸಿತು. ಹಾಸ್ಟೆಲಿನ ಗೆಳೆಯರಿಗೆ ಮೊಬೈಲ್‌ ಕಳೆದುಕೊಂಡ ಕಥೆ ತಿಳಿಸಿ ನಾಳೆ ಸಿಗಬಹುದೆಂಬ ಭರವಸೆಯನ್ನೂ ಪ್ರಕಟಿಸಿ ಮಾತನಾಡಲು ಕುಳಿತೆ. ಆರೇಳು ಮಂದಿ ಸೇರಿ ನಾವು ಪ್ರಸಕ್ತ ರಾಜಕೀಯ ಸ್ಥಿತಿಗತಿಗಳನ್ನು ಚರ್ಚಿಸಿ, ಒಳ್ಳೆಯ ಊಟ ಮಾಡಿ, ಮತ್ತೂಂದು ಅವಧಿಗೆ ನಮ್ಮ ಶಾಲಾ ಜೀವನಗಳನ್ನು ಮೆಲುಕು ಹಾಕಿದೆವು. ಪ್ರತಿದಿನ ವಾಟ್ಸಪ್‌, ಇನ್‌ಸ್ಟಾ ಗ್ರಾಮ್‌ನಲ್ಲಿ ತಡಕಾಡುತ್ತಿದ್ದ ನನಗೆ ಇಂತಹ ಮಾತುಕತೆ ನವೋತ್ಸಾಹವನ್ನು ನೀಡಿತು. ಹೀಗೆ ಮಾತಾಡುತ್ತಿದ್ದಾಗ ನನ್ನ ಸಹಪಾಠಿ ಹೇಗೋ ನನ್ನ ಹಾಸ್ಟೆಲಿನ ಗೆಳೆಯರಿಗೆ ಕರೆಮಾಡಿ ಮೊಬೈಲ್‌ ಎಲ್ಲಿದೆ ಎಂದು ತಿಳಿಸಿದಾಗ ಸಣ್ಣ ಮಟ್ಟಿಗೆ ಹೌಹಾರುವ ಸರದಿ ನನ್ನದಾಗಿತ್ತು. ನಾನು ಯಾರ ಬಳಿ ಅತೀ ಸಂಶಯ ಪಟ್ಟು ಮೊಬೈಲ್‌ ಇರುವಿಕೆಯ ಬಗ್ಗೆ ವಿಚಾರಿಸಿದ್ದೆನೋ, ಯಾರೂ ನನ್ನ ಬಳಿ ಇರಲು ಸಾಧ್ಯವೇ ಇಲ್ಲ ಎಂದಿದ್ದರು ಅವರ ಬಳಿಯೇ ನನ್ನ ಮೊಬೈಲ್‌ ಇರುವುದು ಗೊತ್ತಾಯಿತು. ತಮಾಷೆಗಾಗಿ ಬಚ್ಚಿಟ್ಟದ್ದು ಹಿಂದಿರುಗಿಸಲು ಅವರಿಗೆ ಮರೆತು ಹೋಗಿತ್ತು. ವಿಷಯ ತಿಳಿಸಿದ ಸಹಪಾಠಿಗೆ ಧನ್ಯವಾದ ತಿಳಿಸಿ ಮೊಬೈಲ್‌ ಸಿಕ್ಕಿತೆಂದು ಮನಸ್ಸಿನಲ್ಲೇ ಅಂದುಕೊಂಡು, ಈ ಸ್ವಾರಸ್ಯಕರ ಘಟನೆಯನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕೆಂದು ಈ ಲೇಖನವನ್ನು ಬರೆದು, ನಾಳೆ ಮೊಬೈಲ್‌ ಜೊತೆ ಬರುವ ಗೆಳತಿಗೆ ಹೆದರಿಸಲು ಸುಮ್ಮನೆ ಬೈಯಬೇಕೋ ಅಥವಾ ಮೊಬೈಲ್‌ ಇಲ್ಲದೆ ರಾತ್ರಿ ಸಮಯವನ್ನು ಕಳೆಯುವ ನನ್ನ ಬಹುದಿನಗಳ ಕನಸನ್ನು ಈಡೇರಿಸಿದ ಅವರಿಗೆ ಧನ್ಯವಾದ ಸಮರ್ಪಿಸಬೇಕೋ ಎಂದು ಯೋಚಿಸುತ್ತ, ಮೊದಲ ಬಾರಿ ಪಕ್ಕದಲ್ಲಿ ಮೊಬೈಲ್‌ ಇಲ್ಲದೆ ನಿದ್ರಿಸುವ ತಯಾರಿ ಮಾಡಿದೆ.

ಅನ್ಸಿಲ್‌ ಪ್ರಿನ್ಸಿಸ್ಟನ್‌ ಸೆರಾವೊ
ದ್ವಿತೀಯ ಎಂಎ, ಮಂಗಳೂರು ವಿ. ವಿ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.