ನಾಗರಹೊಳೆಯಲ್ಲಿ 1,920 ಕಿ.ಮೀ. ಫೈರ್‌ಲೈನ್‌ ನಿರ್ಮಾಣ


Team Udayavani, Jan 19, 2019, 1:10 AM IST

17.jpg

ಹುಣಸೂರು: ಮುಂಬರುವ ಬೇಸಿಗೆ-ಬಿರುಗಾಳಿಗೆ ಹರಡಬಹುದಾದ ಬೆಂಕಿ ಅನಾಹುತವನ್ನು ತಡೆ ಯಲು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ಇಲಾಖೆ ಸರ್ವ ಸನ್ನದ್ಧವಾಗಿದ್ದು, ಫೈರ್‌ಲೈನ್‌ ನಿರ್ಮಿಸಿ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಉದ್ಯಾನದ ಎಲ್ಲ 8 ವಲಯಗಳಲ್ಲೂ ಬೆಂಕಿ ರೇಖೆ ನಿರ್ಮಿಸಲು ಬಹುತೇಕ ಕಡೆ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ.

1,920 ಕಿ.ಮೀ. ಬೆಂಕಿ ರೇಖೆ: ನಾಗರಹೊಳೆ, ಕಲ್ಲಹಳ್ಳ, ಆನೆಚೌಕೂರು, ವೀರನಹೊಸಹಳ್ಳಿ, ಮೇಟಿ ಕುಪ್ಪೆ, ಅಂತರಸಂತೆ, ಡಿ.ಬಿ.ಕುಪ್ಪೆ ಹಾಗೂ ಹುಣ ಸೂರು ವಲಯ ಸೇರಿ ಒಟ್ಟಾರೆ 1,920 ಕಿ.ಮೀ. ಬೆಂಕಿರೇಖೆ ನಿರ್ಮಿಸಲಾಗಿದ್ದು, ಮುಖ್ಯರಸ್ತೆಯಲ್ಲಿ 30 ಮೀಟರ್‌, ಇತರೆಡೆಗಳಲ್ಲಿ 10 ಮೀಟರ್‌ ಅಗಲದ ಫೈರ್‌ಲೈನ್‌ ಅಳವಡಿಸಲಾಗಿದೆ. 270 ಫೈರ್‌ ವಾಚರ್‌ ನೇಮಕ: ಇಡೀ ಉದ್ಯಾನಕ್ಕೆ 270 ಮಂದಿ ಫೈರ್‌ವಾಚರ್ಗಳನ್ನಾಗಿ ಅರಣ್ಯದಂಚಿನ ಹಾಡಿಗಳ ಆದಿವಾಸಿಗಳನ್ನು ಮೂರು ತಿಂಗಳ ಕಾಲನೇಮಿಸಿಕೊಳ್ಳಲಾಗಿದೆ. ಇವರಿಗೆ ಇಲಾಖೆ ಮಾರ್ಗಸೂಚಿಯಂತೆ ನಿತ್ಯ ಮಧ್ಯಾಹ್ನದ ಊಟ ಹಾಗೂ 320 ರೂ. ದಿನಗೂಲಿ ನೀಡಲಾಗುತ್ತದೆ.

ಇವರು ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸುವ ಕಾರ್ಯದಲ್ಲಿ ನಿರತರಾಗುವರು. ಪ್ರತಿ ವಲಯಕ್ಕೂ ತಲಾ ನಾಲ್ಕು ಸ್ಪ್ರೆàಯರ್‌, ಬ್ಲೋವರ್‌, ವೀಡ್‌ಕಟರ್‌, ವಾಟರ್‌ ಟ್ಯಾಂಕ್‌ ಇರುವ ವಾಹನ ನೀಡಲಾಗಿದ್ದು, ವೀರನಹೊಸಹಳ್ಳಿಯಲ್ಲಿ 5 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌ ಹಾಗೂ 6 ಮಂದಿ ಸಿಬ್ಬಂದಿ ಹೊಂದಿರುವ ಕ್ಷಿಪ್ರ ಕಾರ್ಯಪಡೆ ವಾಹನವನ್ನು ಸನ್ನದಟಛಿವಾಗಿರಿಸಲಾಗಿದೆ. ಹೆಚ್ಚುವರಿ ವಾಹನ ಸೌಲಭ್ಯ ಕಲ್ಪಿಸಲಾಗಿದೆ.

ಎಲ್ಲ ಸಿಬ್ಬಂದಿಗೂ ವಾಕಿಟಾಕಿ: ಎಲ್ಲಾ ಅರಣ್ಯ ಸಿಬ್ಬಂದಿಗೂ ವಾಕಿಟಾಕಿ ವಿತರಿಸಿದ್ದು, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಣ್ಣ ಅವಘಡ ಸಂಭವಿಸಿದರೂ ತಕ್ಷಣವೇ ಕೇಂದ್ರಕ್ಕೆ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿ ಸಲಾಗಿದೆ. ಅಲ್ಲದೇ 30 ವಾಚ್‌ ಟವರ್‌ ಗಳ ಮೂಲಕ ನಿಗಾವಹಿಸಲಾಗುತ್ತಿದೆ. ಮುನ್ನೆಚ್ಚರಿಕೆ ಯಾಗಿ ನಾಗರಹೊಳೆ, ವೀರನಹೊಸ ಹಳ್ಳಿ, ಅಂತರಸಂತೆ ವಲಯಗಳಲ್ಲಿ ಅಗ್ನಿಶಾಮಕ ವಾಹನ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಮಾನವನ ಅತಿಕ್ರಮಣ ಪ್ರವೇಶ ತಡೆಯಲು ಪ್ರಥಮ ಬಾರಿಗೆ ಕಾಡಂಚಿನಲ್ಲಿ ಪ್ರತಿ ಮೂರು ಕಿ.ಮೀ.ಗೊಬ್ಬರಂತೆ ಫೈರ್‌ ವಾಚರ್‌ ನೇಮಿಸಲಾಗಿದೆ.

2 ಕೋಟಿ ವೆಚ್ಚ: ಉದ್ಯಾನದ ಬೆಂಕಿ ತಡೆ ನಿರ್ವಹಣೆಗಾಗಿ ಒಟ್ಟಾರೆ ಎರಡು ಕೋಟಿ ರೂ. ವೆಚ್ಚ ತಗುಲಲಿದ್ದು, ಬೆಂಕಿ ರೇಖೆ ನಿರ್ಮಾಣ, ಫೈರ್‌ ವಾಚರ್‌ಗಳ ಸಂಬಳ, ಊಟ, ವಾಹನ ಬಾಡಿಗೆ, ಪರಿಕರಗಳ ಖರೀದಿ ಸೇರಿ ಒಟ್ಟು 2 ಕೋಟಿ ರೂ.
ಖರ್ಚಾಗಲಿದೆ.

ಫೈರ್‌ಲೈನ್‌ ನಿರ್ಮಾಣ ಹೇಗೆ?
ಸುಮಾರು 643 ಚ.ಕಿ.ಮೀ. ವಿಸ್ತೀರ್ಣದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನ ಅರಣ್ಯದೊಳಗೆ ಈ ಹಿಂದೆ ನಿರ್ಮಿಸಿಕೊಂಡಿದ್ದ ಮಾರ್ಗಗಳಲ್ಲಿ ಮೊದಲು ಬೆಳೆದಿರುವ ಲ್ಯಾಂಟಾನಾ, ಗಿಡಗಂಟಿಗಳನ್ನು ತೆರವುಗೊಳಿಸಿ, ಒಂದೆಡೆ ರಾಶಿಹಾಕಿ ಸುಡಲಾಗುತ್ತದೆ. ಬಳಿಕ ಮುಖ್ಯರಸ್ತೆಯಲ್ಲಿ 30 ಮೀಟರ್‌, ಇತರೆಡೆಗಳಲ್ಲಿ 10 ಮೀಟರ್‌ ಅಗಲದ ಫೈರ್‌ಲೈನ್‌ ನಿರ್ಮಿಸಲಾಗುತ್ತದೆ. ಇದರಿಂದ ಬೆಂಕಿ ಬಿದ್ದ ವೇಳೆ ಶೀಘ್ರವಾಗಿ ಸಿಬ್ಬಂದಿ ಹಾಗೂ ನೀರಿನ ಟ್ಯಾಂಕ್‌ಗಳನ್ನು ತೆಗೆದುಕೊಂಡು ಹೋಗಲು ಸಹಕಾರಿಯಾಗಲಿದೆ.

ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಯಲು ಇಲಾಖೆ ವಿಶೇಷ ಶ್ರಮವಹಿಸಿ ಸಾಕಷ್ಟು ಮುನ್ನೆಚ್ಚರಿಕೆ
ವಹಿಸಿದೆ. ಇನ್ನು 3 ತಿಂಗಳು ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಣ್ಗಾವಲಿನಲ್ಲಿ ಕಾರ್ಯನಿರ್ವಹಿಸುತ್ತೇವೆ. ಬೆಂಕಿ ಬೀಳದಂತೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರಶಸ್ತಿ ನೀಡಿ
ಪ್ರೋತ್ಸಾಹಿಸಲಾಗುತ್ತಿದೆ.

● ನಾರಾಯಣಸ್ವಾಮಿ, ಹುಲಿಯೋಜನೆ ನಿರ್ದೇಶಕ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.