Mangalore: ಷೇರುಗಳಲ್ಲಿ ಹೂಡಿಕೆ ಹೆಸರಿನಲ್ಲಿ 57.46 ಲಕ್ಷ ರೂ. ವಂಚನೆ
Team Udayavani, Feb 7, 2024, 11:28 PM IST
ಮಂಗಳೂರು: ಷೇರುಗಳಲ್ಲಿ ಹೂಡಿಕೆ ಹೆಸರಿನಲ್ಲಿ ನಾಲ್ವರಿಂದ ಒಟ್ಟು 57.46 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಿಶ್ಚಿತ್ ಡಿ’ಸೋಜಾ, ಲ್ಯಾನ್ಸಲ್ ಡಿ’ಸೋಜಾ, ನಮಿತಾ ಡಿ’ಸೋಜಾ ಮತ್ತು ಅಮರ್ ರಾವ್ ವಂಚನೆಗೊಳಗಾದವರು. ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ಸಂಖ್ಯೆ 7252878942 ರಿಂದ ನಿಶ್ಚಿತ್ ಅವರಿಗೆ ಕರೆ ಮಾಡಿ Pantheon Group, UK ಕಂಪೆನಿಯಲ್ಲಿ ಷೇರುಗಳನ್ನು ಖರೀದಿಸುವಂತೆ ತಿಳಿಸಿ ಆ್ಯಂಡ್ರಾಯಿಡ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡುವಂತೆ ಹೇಳಿ ಲಿಂಕ್ ಕಳುಹಿಸಿದ.
ನಿಶ್ಚಿತ್ ಆ್ಯಪನ್ನು ಡೌನ್ಲೋಡ್ ಮಾಡಿ ಅದರಲ್ಲಿ ಲಾಗಿನ್ ಆಗಿ ಡಿ.18ರಿಂದ ಜ.23ರ ಅವಧಿಯಲ್ಲಿ 32.71 ಲಕ್ಷ ರೂ., ಅವರ ಸ್ನೇಹಿತರಾದ ಲ್ಯಾನ್ಸಲ್ ಡಿ’ಸೋಜಾ 8 ಲಕ್ಷ ರೂ, ನಮಿತಾ ಡಿ’ಸೋಜಾ 12 ಲಕ್ಷ ರೂ ಮತ್ತು ಅಮರ್ ರಾವ್ 4,75,000 ರೂ.ಗಳನ್ನು ಹಂತ ಹಂತವಾಗಿ ಹೂಡಿಕೆ ಮಾಡಿದ್ದರು. ಕೆಲವು ಸಮಯದ ಬಳಿಕ ಹಣವನ್ನು ವಿತ್ಡ್ರಾ ಮಾಡಲು ಯತ್ನಿಸಿದಾಗ ವಿತ್ಡ್ರಾ ಆಗಲಿಲ್ಲ. ಆಗ ಅವರಿಗೆ ಇದೊಂದು ಮೋಸದ ಜಾಲ ಎಂಬುದು ಗೊತ್ತಾಗಿದೆ. ಮಂಗಳೂರು ನಗರದ ಸೆನ್(ಸೈಬರ್, ನಾರ್ಕೊಟಿಕ್ ಮತ್ತು ಆರ್ಥಿಕ ಅಪರಾಧ) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ