ಟರ್ಮ್ ಇನ್ಷೊರೆನ್ಸ್‌…


Team Udayavani, Feb 26, 2018, 3:55 PM IST

terms.jpg

ವಿಮೆ ಮಾಡಿಸಬೇಕು ಅಂದರೆ ಎಲ್ಲರೂಟರ್ಮ್ ಇನ್ಷೊರೆನ್ಸ್‌ ಹಿಂದೆ ಬೀಳುತ್ತಾರೆ. ಇದನ್ನು ನೋಡಿಯೋ ಏನೋ ವಿಮಾ ಕಂಪೆನಿಗಳು ಕೂಡ ಸ್ಪರ್ಧೆಗೆ ಇಳಿದು ಬಿಟ್ಟಿವೆ. ಕಡಿಮೆ ದರದಲ್ಲಿ ಹೆಚ್ಚು ಪ್ರೀಮಿಯಂ ಅಂತ.

ಪ್ರೀಮಿಯಂ ಅನ್ನು ತುಲನಾತ್ಮಕವಾಗಿ ನೋಡಲು, ಹಣಕಾಸು ಸೇವೆ ನೀಡುವ ಸಾಕಷ್ಟು ಕಂಪನಿಗಳು ಹಾಗೂ ಮೊಬೈಲ… ಅಪ್ಲಿಕೇಷನ್‌ಗಳು, ಅತೀ ಕಡಿಮೆ ದರದ ಪ್ರೀಮಿಯಂ ತಿಳಿಸುತ್ತವೆ. ಹೀಗೆ ಕನಿಷ್ಠ ದರದಲ್ಲಿ ಗರಿಷ್ಠ ವಿಮಾ ರಕ್ಷಣೆ ನೀಡುವ ಜೀವ ವಿಮಾ ಕಂಪನಿಯ ಮೂಲಕ ಜನರಿಗೆ ಖರೀದಿಸಲು ಆಕರ್ಷಕವೆನಿಸುತ್ತದೆ.

– ಆದರೆ ಲಾಭಾಂಶದ ಜೊತೆಗೆ ವಿಮಾ ರಕ್ಷಣೆ ನೀಡುವ ಪಾಲಿಸಿಗಳಿಂದ ಪಡೆಯುವ ಸಾಕಷ್ಟು ಸವಲತ್ತುಗಳನ್ನು, ಟರ್ಮ್ ಇನ್ಷೊರೆನ್ಸ್‌ ಪಾಲಿಸಿಗಳು ನೀಡುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಹಾಗೆಯೇ ಜೀವ ವಿಮೆಯು ದೀರ್ಘ‌ಕಾಲದ ಒಪ್ಪಂದವಾದ ಕಾರಣ ಲಾಭಾಂಶ ನೀಡುವ ಪಾಲಿಸಿಗಳನ್ನು ಪಡೆಯುವುದರಿಂದ ನಿರಂತರ ಉಳಿತಾಯದ ಜೊತೆಗೆ ವಿಮಾ ರಕ್ಷಣೆ ಸಿಗುತ್ತದೆ.  ಮೆಚೂÂರಿಟಿ ನಂತರ ವಿಮಾ ಮೊತ್ತ ಹಾಗೂ ಬೋನಸ್‌ನೊಂದಿಗೆ ಹಾಗೂ ಆದಾಯ ತೆರಿಗೆ ವಿನಾಯಿತಿಯೊಂದಿಗೆ ಉತ್ತಮ ಮೊತ್ತವು ಕೈಸೇರುವುದು. ಟರ್ಮ್ ಇನ್ಷೊರೆನ್ಸ್‌ ಪಾಲಿಸಿಯ ಅವಧಿಯಲ್ಲಿ ಮಾತ್ರ ವಿಮಾ ರಕ್ಷಣೆ ಇರುತ್ತದೆ. ಅವಧಿಯ ನಂತರ ಯಾವುದೇ ಮೊತ್ತ ಸಿಗುವುದಿಲ್ಲ.

– ಲಾಭಾಂಶ ನೀಡುವ ವಿಮಾ ಯೋಜನೆಗಳಿಂದ ಹಣಕಾಸು ತೊಂದರೆ ಎನಿಸಿದಾಗ ಸಾಲ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಹಾಗೆಯೇ ಹಣಹಿಂದಿರುಗಿಸುವ (ಮನಿಬ್ಯಾಕ್‌) ಯೋಜನೆಗಳಲ್ಲಿ ನಿಯಮಿತ ಕಾಲಕ್ಕೆ ಹಣ ಪಡೆಯುವುದರ ಜೊತೆಗೆ ಪೂರ್ಣಪ್ರಮಾಣದ ವಿಮಾ ರಕ್ಷಣೆ ಮುಂದುವರೆಯುತ್ತದೆ. ಅಲ್ಲದೇ 3ವರ್ಷಕ್ಕೂ ಮೇಲ್ಪಟ್ಟು ಪ್ರೀಮಿಯಂ ಪಾವತಿಸಿದ್ದರೆ ಮುಂದೆ ತುಂಬಲು ಆಗದಿದ್ದರೆ ಸರಂಡರ್‌ ವ್ಯಾಲ್ಯೂ ದೊರೆಯುತ್ತದೆ. ಆದರೆ ಟರ್ಮ್… ಇನ್ಷೊರೆನ್ಸ… ಪಾಲಿಸಿಗಳಲ್ಲಿ ಈ ಸೌಲಭ್ಯವಿಲ್ಲ.

– ಲಾಭಾಂಶ ನೀಡುವ ವಿಮಾ ಯೋಜನೆಗಳಲ್ಲಿ ಪ್ರೀಮಿಯಂ ಪಾವತಿಸುವ ವಿಧಾನ ಅಂದರೆ ವಾರ್ಷಿಕ, ಅರ್ಧವಾರ್ಷಿಕ ಅಥವಾ ತ್ತೈಮಾಸಿಕವಾಗಿ ಪಾವತಿಸುವ ಪ್ರಿಮಿಯಂಗಳಿಗೆ 30ದಿನಗಳ ಗ್ರೇಸ್‌ ಅವಧಿ ಇರುತ್ತದೆ. ಈ ಅವಧಿ ಮೀರಿಯೂ ತಾವು ಪ್ರಿಮಿಯಂ ಅಲ್ಪ ಬಡ್ಡಿಯೊಂದಿಗೆ ಪಾವತಿಸಲು ಅವಕಾಶವಿದೆ. ಆದರೆ ಟರ್ಮ್… ಇನ್ಷೊರೆನ್ಸ್‌ ಪಾಲಿಸಿಗಳಲ್ಲಿ ಗ್ರೇಸ್‌ ಅವಧಿ ಮುಗಿದ ನಂತರ ಮತ್ತೆ ಎÇÉಾ ವೈದ್ಯಕೀಯ ತಪಾಸಣೆ ಮಾಡಿಸಬೇಕಾಗುತ್ತದೆ. ಹಾಗಾಗಿ ಪಾಲಿಸಿಯನ್ನು ರಿವೈವಲ… ಮಾಡದೇ ಹಾಗೇ ಬಿಡುವವರೇ ಜಾಸ್ತಿ.

– ಲಾಭಾಂಶ ನೀಡುವ ಪಾಲಿಸಿಗಳು ಉಳಿತಾಯದ ವಿಧಾನವನ್ನು ನಿರಂತರವಾಗಿಸುತ್ತವೆ. ಟರ್ಮ್ ಇನ್ಷೊರೆನ್ಸ್‌ ಪಾಲಿಸಿಯಲ್ಲಿ ಉಳಿತಾಯದ ಉದ್ದೇಶವಿಲ್ಲ.

– ಅತೀ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಅತೀ ಹೆಚ್ಚು ವಿಮಾ ರಕ್ಷಣೆ ಕಡಿಮೆ ಪ್ರೀಮಿಯಂ ದರದಲ್ಲಿ ದೊರೆಯುತ್ತದೆ ಎಂದರೆ ಆ ಕಂಪನಿಯ ಲಾಭಾಂಶ ಅಥವಾ ಲೈಫ್ ಫ‌ಂಡ್‌ ಎಷ್ಟಿದೆ ಎಂದು ಗಮನಿಸಬೇಕಾಗುತ್ತದೆ.  ಯಾಕೆಂದರೆ ಬಹಳಷ್ಟು ಜನರಿಂದ ಹಣ ಸಂಗ್ರಹಿಸಿ ವಿಮಾ ರಕ್ಷಣೆಯಾದ ಡೆತ…-ಕ್ಲೇಮ… ನೀಡುವುದು ಕೆಲವೇ ಜನರಿಗೆ. ಹೀಗೆ ಸಂಗ್ರಹಿಸಿದ ಮೊತ್ತದ ಅತೀ ಹೆಚ್ಚು ಹಣವು ಬರೀ ಡೆತ್‌-ಕ್ಲೈಮ… ನೀಡಲು ವಿನಿಯೋಗವಾದಲ್ಲಿ ಆ ಕಂಪನಿಯ ಆರ್ಥಿಕ ಪರಿಸ್ಥಿತಿ ಏನಾಗಬಹುದೆಂದು ನೀವೇ ಊಹಿಸಿ. ಹೀಗೆ ಕಂಪನಿಯ ಹಣಕಾಸು ಪರಿಸ್ಥಿತಿ ಅಧೋಗತಿಗೆ ಬಂದಾಗ ಅಥವಾ ಲೈಫ‌… ಫ‌ಂಡ… ಗೆ ಹಾನಿಯಾದಾಗ, ಆ ಕಂಪನಿಯು ನೀಡಿದ ಭರವಸೆಯನ್ನು ಈಡೇರಿಸುವುದು ಕಷ್ಟ. ಇಲ್ಲದೇ ಇದ್ದರೆ ಡೆತ…-ಕ್ಲೇಮ… ಪಡೆಯುವ ಕುಟುಂಬದವರಿಗೆ ಏನೋ ಸಬೂಬು ಹೇಳಿ ಕ್ಲೇಮ… ಹಣ ನೀಡುವಲ್ಲಿ ನಿರಾಕರಿಸಬಹುದು. ಹಾಗಾಗಿ ನಾವು ವಿಮಾ ರಕ್ಷಣೆ ಪಡೆಯುವಾಗ ಕಡಿಮೆ ದರದ ಪ್ರಿಮಿಯಂನಲ್ಲಿ ದೊರೆಯುತ್ತದೆ ಎಂದು ವಿಮೆ ಮಾಡಿಸುವುದಕ್ಕಿಂತ,  ಆ ಕಂಪನಿಯ ಆರ್ಥಿಕ ಸದೃಢತೆ ಕಡೆಗೆ ಗಮನಹರಿಸಬೇಕು.  ಜೀವ ವಿಮೆಯನ್ನು ಪಡೆಯುವುದು ನಮ್ಮ ಆಪತ್ಕಾಲದಲ್ಲಿ ನಮ್ಮ ಕುಟುಂಬದವರಿಗೆ ಆರ್ಥಿಕ ಸಹಾಯ ಸುಲಭವಾಗಿ ದೊರೆಯಲೆಂದು. ಆದರೆ ಈ ಉದ್ದೇಶ ಈಡೆರದೇ ಇದ್ದಲ್ಲಿ ಎಷ್ಟೇ ದೊಡ್ಡ ವಿಮಾ ರಕ್ಷಣೆ ಪಡೆದರೂ ವ್ಯರ್ಥ. ಹಾಗಾಗಿ ಜೀವ ವಿಮೆ ಪಡೆಯುವಾಗ ಲಾಭಾಂಶ ನೀಡುವ ವಿಮಾ ಯೋಜನೆ ಪಡೆಯುವುದೋ ಅಥವಾ ಟರ್ಮ್… ಇನ್ಷೊರೆನ್ಸ್‌ ಪಡೆಯುವುದೋ ಎನ್ನುವುದುನಿ ‌ಮ್ಮ ವಿವೇಚನೆಗೆ ಬಿಟ್ಟದ್ದು.

– ಜೆ.ಸಿ.ಜಾಧವ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.