88.22 ಕೋ.ರೂ. ನಷ್ಟ: ಬ್ಯಾಂಕ್ ಮುಖ್ಯಸ್ಥರಿಂದ ದೂರು
Team Udayavani, Mar 31, 2023, 6:32 AM IST
ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಯೊಂದರ ಪ್ರಮುಖರು 88.22 ಕೋ.ರೂ. ನಷ್ಟ ಉಂಟುಮಾಡಿದ್ದಾರೆ ಎಂದು ಖಾಸಗಿ ಬ್ಯಾಂಕ್ನ ವಿಜಿಲೆನ್ಸ್ ಆಫೀಸರ್ ಪಿ.ಎಸ್. ಪದ್ಮಾವತಿ ಅವರು ನಗರದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎಂ.ಜಿ.ರಸ್ತೆಯಲ್ಲಿರುವ ಬ್ಯಾಂಕ್ನ ಶಾಖೆಗೆ ಫುಡ್ ಆ್ಯಂಡ್ ಎಕ್ಸ್ಪೋರ್ಟ್ಸ್ ಕಂಪೆನಿಯೊಂದರ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀನಿವಾಸ ಭಟ್, ಡೈರೆಕ್ಟರ್ಗಳಾದ ವೀಣಾ ಎಸ್.ಭಟ್, ಯು.ಎನ್.ಜೆ. ನಂಬೂರಿ ಹಾಗೂ ಇತರರು 2015ರ ಅ.10ರಂದು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಕಂಪೆನಿಯ ದಾಖಲಾತಿ ಹಾಗೂ ಗ್ಯಾರಂಟಿಯನ್ನು ಬ್ಯಾಂಕಿಗೆ ನೀಡಿದ್ದು, ಲೋನ್ ಪೂರ್ವ ಪರಿಶೀಲನೆ ನಡೆಸಿ, ಅ.20ರಂದು 194.83 ಕೋಟಿ ರೂ. ಸಾಲ ಮಂಜೂರು ಮಾಡಲಾಗಿತ್ತು.
ಕಂಪೆನಿಯವರು ಪ್ರತೀ ವರ್ಷ ಸಾಲವನ್ನು ರಿನಿವಲ್ ಮಾಡಿಕೊಂಡು ಸಾಲ ಮರುಪಾವತಿಸಿಕೊಂಡು ಬಂದಿದ್ದಾರೆ. 2021ರ ಜುಲೈನಲ್ಲಿ ಅಡಿಟ್ ಮಾಡುವ ಸಮಯ ಕಂಪೆನಿಯವರು ಬ್ಯಾಂಕ್ ಹಾಗೂ ಸಂಬಂಧಿಸಿದ ಪ್ರಾಧಿಕಾರಕ್ಕೆ ತಿಳಿಸದೆ, ಅನುಮತಿ ಪಡೆಯದೆ ಆರೋಪಿಗಳ ವಶದಲ್ಲಿದ್ದ ಬ್ಯಾಂಕ್ಗೆ ಅಡಮಾನ ಇರಿಸಿದ್ದ ಸ್ಟಾಕನ್ನು ಬ್ಯಾಂಕ್ಗೆ ವಂಚಿಸಿ, ಅಕ್ರಮ ಲಾಭಗಳಿಸುವ ಉದ್ದೇಶದಿಂದ ನಾಶ ಮಾಡಿದ್ದಾರೆ. 2019ರ ಡಿ.1ರಿಂದ 2020 ಜ. 31ರ ನಡುವೆ ಈ ಕೃತ್ಯ ಎಸಗಿದ್ದು, ಇದರಿಂದ ಬ್ಯಾಂಕ್ಗೆ 88.22 ಕೋಟಿ ರೂ. ನಷ್ಟವಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ