ನನ್ನ ಶಿಕ್ಷಕ ವೃತ್ತಿಗೆ ದಾರಿದೀಪವಾದ ನೆಚ್ಚಿನ ಗುರು ಸೀತಾರಾಮ್ ಮಧ್ಯಸ್ತರು


Team Udayavani, Sep 5, 2020, 11:15 AM IST

ನನ್ನ ಶಿಕ್ಷಕ ವೃತ್ತಿಗೆ ದಾರಿದೀಪವಾದ ನೆಚ್ಚಿನ ಗುರು ಸೀತಾರಾಮ್ ಮಧ್ಯಸ್ತರು

ಯಶಸ್ಸಿನ ಹಾದಿ ತುಳಿದ ಎಲ್ಲರ ಹಿಂದೆಯೂ ಒಬ್ಬರಲ್ಲ, ಒಬ್ಬರು ಶಿಕ್ಷಕರ ಪ್ರಭಾವ ಇದ್ದೆ ಇರುತ್ತದೆ. ನಾನು ಸಹ ಇಂದು ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಒಬ್ಬರು ಮಹಾನ್ ಗುರುಗಳ ಪಾತ್ರ ದೊಡ್ಡದಿದೆ. ಶಿಕ್ಷಕರ ದಿನಾಚರಣೆಯ ಈ ಸುದಿನದಂದು ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ. ಶಿಕ್ಷಕ ವೃತ್ತಿಗೆ ದಾರಿದೀಪವಾದ ನನ್ನ ನೆಚ್ಚಿನ ಗುರುಗಳಾದ ಸೀತಾರಾಮ್ ಮಧ್ಯಸ್ತರ ಬಗ್ಗೆ.

ಬಾಲ್ಯದಿಂದಲೂ ಶಿಕ್ಷಕಿಯಾಗುವ ಬಯಕೆ ಹೊತ್ತಿದ್ದ ನನಗೆ ಸರಕಾರಿ ಕೋಟಾದಡಿ ಆಯ್ಕೆಯಾಗಿದ್ದರೂ ಡಿ. ಎಡ್ ಮಾಡಲು ಹಣದ ಅವಶ್ಯಕತೆ ತುಂಬಾ ಇತ್ತು. ಆಗಷ್ಟೇ ದ್ವೀತೀಯ ಪಿಯುಸಿ ಫಲಿತಾಂಶ ಬಂದು ಕೆಲವು ದಿನಗಳು ಕಳೆದಿದ್ದವು ನಾನು ಬ್ಯಾಂಕಿನಲ್ಲಿ ಎಜುಕೇಶನ್ ಲೋನ್ ಬಗ್ಗೆ ವಿಚಾರಿಸಲು ಅಮ್ಮನೊಂದಿಗೆ ಹೋಗಿದ್ದೆ. ಆಗ ಬ್ಯಾಂಕ್ ಮ್ಯಾನೇಜರ್ ನಾವು ಏನಿದ್ದರೂ ಎಂಜಿನಿಯರಿಂಗ್, ಮೆಡಿಕಲ್ ಮಾಡುವವರಿಗೆ ಮಾತ್ರ ಲೋನ್ ಕೊಡುತ್ತೇವೆ. ಡಿ. ಎಡ್ ಮಾಡುವವರಿಗೆಲ್ಲ ಕೊಡುವುದಿಲ್ಲ ಎಂದು ಸಾರಾಸಗಟಾಗಿ ಹೇಳಿಬಿಟ್ಟರು. ಅವರ ಆ ಮಾತನ್ನು ಕೇಳಿ ನನ್ನ ಕಣ್ಣಾಲಿಗಳು ತುಂಬಿ ಹೋಗಿದ್ದವು. ಭಾರವಾದ ಮನಸ್ಸನ್ನು ಹೊತ್ತು ನನ್ನ ಅಮ್ಮನೊಂದಿಗೆ ನನ್ನ ಕಾಲೇಜಿನತ್ತ ಹೆಜ್ಜೆ ಹಾಕಿದೆ ನಾನು ಪಿಯುಸಿಯಲ್ಲಿದ್ದಾಗ ಒಂದು ಇತಿಹಾಸದ ಪರೀಕ್ಷೆಯನ್ನು ಬರೆದಿದ್ದೆ ಅದರ ಅಂಕಪಟ್ಟಿ ಕಾಲೇಜಿಗೆ ಬಂದಿತ್ತು. ಅದನ್ನು ತರಲು ನನಗೇಕೋ ಮನಸಾಗಲಿಲ್ಲ.

ಅಮ್ಮನ ಬಳಿ ನಾನು ಈ ಗೇಟಿನ ಹತ್ತಿರ ನಿಲ್ಲುತ್ತೇನೆ ನೀನು ಹೋಗಿ ನನ್ನ ಅಂಕ ಪಟ್ಟಿ ತೆಗೆದುಕೊಂಡು ಬಾ ಎಂದು ಅಮ್ಮನ ಬಳಿ ಹೇಳಿದೆ. ಅಮ್ಮ ಪ್ರಾಂಶುಪಾಲರಾದ ಸೀತಾರಾಮ್ ಮಧ್ಯಸ್ತ ಅವರ ಬಳಿ ಹೋದಾಗ ಅವರು ನಿಮ್ಮ ಮಗಳು ಏಕೆ ಬಂದಿಲ್ಲ ಎಂದು ಕೇಳಿದರಂತೆ ಆಗ ಅಮ್ಮ ನಡೆದ ವಿಚಾರವನ್ನೆಲ್ಲ ವಿವರಿಸಿ ಹೇಳಿದಾಗ ಆ ನನ್ನ ಗುರುಗಳು ನಾನಿರುವಲ್ಲಿಗೆ ಬಂದು ಹೇಳಿದ ಒಂದೇ ಒಂದು ಮಾತು ನಾನಿರುವವರೆಗೂ ನೀನೆಂದು ಹೆದರಬೇಡ ಮಗು ನಿನಗೆ ಎಜುಕೇಶನ್ ಲೋನ್ ನಾನು ಕೊಡಿಸುತ್ತೇನೆ ಎಂದು ಹೇಳಿ ಮಾರನೆಯ ದಿನ ಬ್ಯಾಂಕ್ ಗೆನನ್ನನ್ನು ಕರೆದುಕೊಂಡು ಹೋಗಿ ನನಗೆ ಲೋನ್ ಕೊಡಿಸಿದರು.

ಬ್ಯಾಂಕ್ ಮ್ಯಾನೇಜರ್ ಶೂರಿಟಿಯ ಬಗ್ಗೆ ಕೇಳಿದಾಗ ನನ್ನ ಗುರುಗಳು ಹೇಳಿದ ಮಾತು “ನನ್ನ ವಿದ್ಯಾರ್ಥಿಯ ಬಗ್ಗೆ ನನಗೆ. ಸಂಪೂರ್ಣ ನಂಬಿಕೆ ಇದೆ ಅವಳ ಸಾಲಕ್ಕೆ ನಾನು ಹೊಣೆ” ಎಂದು ಸಹಿ ಹಾಕಿದರು. ಅವರ ಮಾರ್ಗದರ್ಶನ ಹಾಗೂ ಹಾರೈಕೆ ಯಿಂದ ನಾನು ಛಲಬಿಡದೆ ಓದಿ ಈಗ ಶಿಕ್ಷಕಿಯಾಗಿದ್ದೇನೆ ವಿದ್ಯಾರ್ಥಿಗಳ ಬಗ್ಗೆ ಇಂತಹ ಬದ್ಧತೆಯನ್ನು ಹೊಂದಿದ ನಮ್ಮ ಸೀತಾರಾಮ್ ಮದ್ಯಸ್ತರಂಥಹ ಶಿಕ್ಷಕರು ನಮ್ಮ ಸಮಾಜಕ್ಕೊಂದು ಮಾದರಿ. ಆ ದೇವರು ಅವರಿಗೆ ಒಳ್ಳೆಯ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಶಿಕ್ಷಕರ ದಿನಾಚರಣೆಯ ಈ ಸುಸಂದರ್ಭದಲ್ಲಿ ನನ್ನ ಗುರುವಿಗೊಂದು ನಮನ.

ಪೂರ್ಣಿಮಾ ಶೆಟ್ಟಿ

ಕೋಟೇಶ್ವರ, ಕುಂದಾಪುರ

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ

ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.