ಶಿಕ್ಷಕರ ದಿನಾಚರಣೆ: ಕೋವಿಡ್ ಕಾಲದಲ್ಲಿ ಬಾಗಿದ ಸಸಿಗೆ ಆಧಾರ ಕೋಲಿನಂತೆ ನಿಂತ ಶಿಕ್ಷಕರು
Team Udayavani, Sep 4, 2020, 3:32 PM IST
ಜೀವ ಮುಖ್ಯವೇ? ಜೀವನ ಮುಖ್ಯವೇ? ಬಹುಶಃ ಈ ಪ್ರಶ್ನೆ ಹುಟ್ಟಿಕೊಂಡಿದ್ದು ಕೆಲ ತಿಂಗಳುಗಳ ಹಿಂದೆ ನಡೆದ ಲಾಕ್ ಡೌನ್ ಸಂಧರ್ಭದಲ್ಲಿಯೇ. ಕೋವಿಡ್ ಸೋಂಕಿತರ ಸಂಖ್ಯೆ ಅಂಬೆಗಾಲು ಇಡುತ್ತಿದ್ದಾಗ ಜೀವ ಇದ್ದರೇನೆ ಜೀವನ ಎಂದು ಸಂಪೂರ್ಣ ದೇಶವೇ ಲಾಕ್ ಡೌನ್ ಆದಾಗ ಕೆಲಸವಿಲ್ಲದೆ ಪರದಾಡಿದವರಲ್ಲಿ ಶಿಕ್ಷಕ ವರ್ಗವೂ ಒಂದು.
ಬರಬರುತ್ತಾ ಆರ್ಥಿಕ ಸ್ಥಿತಿ ಹದಗೆಡುವುದನ್ನು ಕಂಡ ಸರಕಾರ ಇಲ್ಲ ಇಲ್ಲಾ ಜೀವಕ್ಕಿಂತ ಜೀವನ ಮುಖ್ಯ ಎಂದು ಲಾಕ್ ಡೌನ್ ಸಡಿಲಿಕೆ ಮಾಡಿದಂತಹ ಸಂದರ್ಭದಲ್ಲಿಯು ಸಹ ಕೆಲಸವಿಲ್ಲದೆ ಒದ್ದಾಡಿದವರೂ ಶಿಕ್ಷಕರೇ.
ಆದ್ರೆ ಇಲ್ಲಿ ಶಿಕ್ಷಕರು ಕೇವಲ ಸಂಬಳಕ್ಕಾಗಿ ದುಡಿಯದೆ ತನ್ನ ಶಿಷ್ಯನ ಜೀವನಕ್ಕೆ ಉತ್ತಮ ಭವಿಷ್ಯ ನಿರ್ಮಾನ ಮಾಡುವ ಶಿಲ್ಪಿಗಳಂತೆ ದುಡಿಯುತ್ತಿರುವ ಶಿಕ್ಷಕರ ತ್ಯಾಗ ಪ್ರಜ್ವಲಿಸುವ ದೀಪದ ತಳಹದಿಯ ಕತ್ತಲಿನಂತಾಗಿದೆ ಅಲ್ಲವೆ?
ಅಯ್ಯೋ! ಶಾಲೆಗಳು ತೆರೆಯುವಂತ್ತಿಲ್ಲ ಮಕ್ಕಳ ಭವಿಷ್ಯ ಮುಂದೇನು? ಎಂದು ಮಕ್ಕಳ ಹೆತ್ತವರಿಗಿಂತಲೂ ಹೆಚ್ಚಾಗಿ ಚಿಂತಿಸಿದವರೂ ನಮ್ಮ ಶಿಕ್ಷಕರೇ. ” ಜೀವವೂ ಮುಖ್ಯ ಜೀವನವೂ ಮುಖ್ಯ” ಎಂದು ಮಕ್ಕಳ ಶಿಕ್ಷಣದ ಜೊತೆ ಜೊತೆಗೆ ಮಕ್ಕಳ ಆರೋಗ್ಯದ ಕಾಳಜಿವಹಿಸಿದ ಮಾತೆಯರು ಎಂದರೆ ತಪ್ಪಾಗಲಾರದು. ಹಾಗಾಗಿ ಬಾಗಿದ ಸಸಿಗೆ ಆಧಾರ ಕೋಲಿನಂತೆ ನಿಂತ ಶಿಕ್ಷಕರು, ಒನ್ ಲೈನ್ ಶಿಕ್ಷಣದ ಮೂಲಕ ಮಕ್ಕಳು ಮನೆಯಲ್ಲೇ ಕುಳಿತು ಪಾಠ-ಪಠ್ಯಗಳನ್ನು ಕಲಿಯಲು ಅನುಕೂಲವಾಗುವಂತೆ ಹಾಡಿದರು, ಕುಣಿದರು, ಕಥೆ ಹೇಳಿದರು ವೀಡಿಯೋ ತರಬೇತಿ ಹೀಗೆ ಎಲ್ಲಾ ವಿಧಧ ಪ್ರಯತ್ನವನ್ನು ಮಾಡಿದರೂ ಸಹ ಎಲ್ಲಾ ವರ್ಗದ ಮಕ್ಕಳಿಗೂ ತಲುಪಿಸಲು ಸಾಧ್ಯವಿಲ್ಲ ಎಂದು ಮಕ್ಕಳು ಇರುವಲ್ಲಿಗೆ ತೆರಳಿ ಸಾಧ್ಯವಾಗುವಷ್ಟರ ಮಟ್ಟಿಗೆ ಮಕ್ಕಳಿಗೆ ಪಠ್ಯ ವಿಷಯವನ್ನು ಅರ್ಥೈಸಲು ಪಟ್ಟ ಪಯತ್ನ ” ಓರೆಗಲ್ಲಿಗೆ ಗಂಧ ತೇಯಿದ್ದು ಸುಂಗಂಧ ಹೊರ ತೆಗೆದಂತೆಯೆ ಸರಿ”. ತನ್ನ ಹೊತ್ತಿಗೆಯ ತುಂಬಾ ಜ್ಞಾನದ ಜೇನನ್ನು ಹೊತ್ತೊಯಿದ ಶಿಕ್ಷಕನ ಮುಖದಲ್ಲಿ ಅದೇ ಮಂದಹಾಸ ಕಣ್ಣಲ್ಲಿ ಅದೇ ಉತ್ಸಾಹ.
ತಾಯಿ ಮಗುವಿನ ಬಾಂದವ್ಯ ಎಷ್ಟು ಪವಿತ್ರವೋ ಹಾಗೆ ಗುರು-ಶಿಷ್ಯರ ಬಂಧವು ಅಷ್ಟೇ ಮಹತ್ವ ಪೂರ್ಣವಾದುದು ಪ್ರತಿಫಲ ಅಪೇಕ್ಷೆಯಿಲ್ಲದೆ ಮಕ್ಕಳ ಭವಿಷ್ಯಕ್ಕಾಗಿ ಅವಿರತವಾಗಿ ಶ್ರಮಿಸುವ ಒಂದು ಜೀವ ಮಕ್ಕಳ ಹೆತ್ತವರಾದರೆ ಮತ್ತೊಂದು ಈ ಶಿಕ್ಷಕರೇ.
ನಿಶಾನ್ ಅಂಚನ್
ಸಮಾಜ ವಿಜ್ಞಾನ ಶಿಕ್ಷಕ. ಹೋಲಿ ಫ್ಯಾಮಿಲಿ ಹೈ ಸ್ಕೂಲ್ ಬಜಪೆ. ಕಾವೂರು ಮುಲ್ಲಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ ಅನುಭವ
ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ
ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ
ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!
ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹರು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್