ಕೇಳದಾಗಿದೆ ಚಿಣ್ಣರ ಕಲರವ….ಶಾಲೆಗಳಿಂದು ಹೂವುಗಳಿಲ್ಲದ ಕೈತೋಟವಾಗಿದೆ

ಅನ್ಯ ಮಾರ್ಗವಿಲ್ಲ. ದಿನಾಲೂ ಮನಸ್ಸು ಭವಿತವ್ಯದ ಭಾವಿ ಪ್ರಜೆಗಳ ದರ್ಶನಕ್ಕೆ ಬಹಳ ಹಂಬಲಿಸುತ್ತದೆ.

Team Udayavani, Sep 5, 2020, 11:30 AM IST

ಕೇಳದಾಗಿದೆ ಚಿಣ್ಣರ ಕಲರವ….ಶಾಲೆಗಳಿಂದು ಹೂವುಗಳಿಲ್ಲದ ಕೈತೋಟವಾಗಿದೆ

ಕೋವಿಡ್ ಮಹಾ ಮಾರಿ ಇಂದು ತನ್ನ ಕ್ರೂರ ಬಾಹುವನ್ನು ಎಲ್ಲೆಡೆ ಪಸರಿಸಿದೆ. ಅದರಲ್ಲೂ ನಮ್ಮ ಶಿಕ್ಷಣ ಕ್ಷೇತ್ರವನ್ನು ಇದು ಬಹಳವಾಗಿ ಕಾಡಿದೆ. ಎಂದೂ ಘಟಿಸದ ಘಟನಾವಳಿಯಿಂದ ಶಿಕ್ಷಕ, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮವಸ್ತ್ರವನ್ನು ತೊಟ್ಟು, ಬೆನ್ನ ಮೇಲೆ ಬ್ಯಾಗನ್ನು ಇಟ್ಟು, ನೂರು ಕನಸುಗಳನ್ನು ಹೊತ್ತು ಬರುವ ಬಾಲ ಭಾಷಿಗರಿಲ್ಲದೆ ಬರಿದೆ ಬಣಗುಡುತ್ತಿರುವ ಶಾಲೆಗಳನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಚಿಣ್ಣರ ಚಿಲಿಪಿಲಿಯ ನಿನಾದವು ಮರೆಯಾಗಿ , ಖಾಲಿ ಕೋಣೆಯ ಒಳಗೆ ಕೇಳುತ್ತಿವುದು ಇಂದು ಬರಿಯ ಮೌನರಾಗ. ಜಾತಿ ಬೇಧವನ್ನು ಮರೆತು, ನಲಿಯುತ್ತಾ ಸಹಪಾಠಿಗಳ ಜೊತೆಗೆ ಬಂದು, ವಿದ್ಯೆಯನ್ನು ಕಲಿಯುವ ಕಣ್ಮಣಿಗಳು ಕಾಣೆಯಾಗಿಹುದು ವ್ಯಥೆಯನ್ನು ತರಿಸಿದೆ.

ಭವ್ಯ ಭವಿಷತ್ತಿಗಾಗಿ ಕನವರಿಸುವ ಕನಸುಗಳನ್ನು ಹೊತ್ತ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಕಾಣದೆ ಕಂಬನಿ ಮಿಡಿಯುತ್ತಿದೆ ಮನಸ್ಸು. ಮಿಸ್, ಮೇಡಂ, ಸರ್ ಗಳೆಂಬ ಕಿವಿಗೆ ಇಂಪು, ಮನಸಿಗೆ ಮುದವನ್ನು ನೀಡುವ ಶಬ್ದಗಳ ಸಂಚಾರವಿಲ್ಲದೆ, ಹೂವುಗಳಿಲ್ಲದ ಕೈತೋಟವಾಗಿದೆ ಶಾಲೆಗಳಿಂದು. ಹಾಲುಗಲ್ಲದ ಹಸುಳೆಗಳ ಗೈರು ಹಾಜರಿಯಲ್ಲಿ ನಿಸ್ತೇಜ, ನಿಶ್ಯಬ್ದವಾಗಿ ನಿಂತ ಸರಸ್ವತಿಯ ದಿವ್ಯ ಆಲಯವನ್ನು ನೋಡಿ ಅರಗಿಸಿಕೊಳ್ಳಲಾಗುತ್ತಿಲ್ಲ.

ತರಗತಿಯ ಕೋಣೆಯಲ್ಲಿ ಕೇಳಿಸದ ಕಂದಮ್ಮರುಗಳ ಕಲರವದಕೇಳಿಸದಾ, ಬೆಂಚು, ಬೋರ್ಡು,ಮತ್ತು ನನ್ನ ಮನಸ್ಸು ಬೇಸರ ಗೊಂಡಿದೆ. ಆಟ, ಪಾಠ, ಸಹಪಠ್ಯ ಚಟುವಟಿಕೆಗಳ ಚೆಲುವೆ ಇಲ್ಲದೆ, ವಾಸ್ತವ್ಯವಿರದ ಕಳೆಗುಂದಿದ ಕುಟೀರವಾಗಿದೆ ನನ್ನ ಮನಸ್ಸು ಮತ್ತು ಶಾಲೆ. ಮಕ್ಕಳ ಅನುಪಸ್ಥಿತಿಯಲ್ಲಿ ಪಾಠದ ಸಾರಾಂಶವನ್ನು ವಿಡಿಯೋ ರೂಪದಲ್ಲಿ ಕಳುಹಿಸುತಿದ್ದು, ಇದು ತರಗತಿಯಲ್ಲಿ ನಡೆಯುವ ಚಟುವಟಿಕೆ ಸಹಿತ ಪಾಠಕ್ಕೆ ವ್ಯತಿರಿಕ್ತವಾಗಿದೆ.

ಆದರೆ ಅನ್ಯ ಮಾರ್ಗವಿಲ್ಲ. ದಿನಾಲೂ ಮನಸ್ಸು ಭವಿತವ್ಯದ ಭಾವಿ ಪ್ರಜೆಗಳ ದರ್ಶನಕ್ಕೆ ಬಹಳ ಹಂಬಲಿಸುತ್ತದೆ. ಮುಗ್ದ ಮನದ ಮುದ್ದು ಮಕ್ಕಳು, ಅವರ ಬಾಲ ಭಾಷೆ, ಶಾಲೆಯ ಮನೋಹರವಾದ ವಾತಾವರಣವನ್ನು ನಾನು ತುಂಬಾ ಕಳೆದುಕೊಂಡಿದ್ದೆನೆ. ಚಿಣ್ಣರ ಚಿಲಿಪಿಲಿಯನ್ನು ಮತ್ತೆ ಕೇಳಲು ಮನಸ್ಸು ಹಪಹಪಿಸುತ್ತಿಹುದು. ಮತ್ತೆ ರಾರಾಜಿಸಲಿ ಭವಿಷತ್ ಬದುಕಿನ ರಾಯಭಾರಿಗಳ ಉತ್ಸಾಹದ ಮೆರವಣಿಗೆ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ.

ರಾಘವೇಂದ್ರ. ಡಿ ಶಿರೂರು
ಶಿಕ್ಷಕರು.

ಟಾಪ್ ನ್ಯೂಸ್

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ‌ ಅನುಭವ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ

ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ

ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.