ಛಲ, ಜನಪ್ರೀತಿ, ಶಿಸ್ತಿನ ಪಾಠ
ಕಾಯಕ ಗುರುವಿಗೆ ನಮೋ ನಮಃ
Team Udayavani, Sep 5, 2019, 5:00 AM IST
ಇಂದು ಶಿಕ್ಷಕರ ದಿನಾಚರಣೆ. ನಮ್ಮ ಜೀವನವೆಂಬ ರಥವನ್ನು ಮುನ್ನಡೆಸಲು ಪಾಠ ಕಲಿಸಿದ ಶಿಕ್ಷಕರಷ್ಟೇ ಮಹತ್ತರವಾದ ಸ್ಥಾನವನ್ನು ಕಾಯಕ ಕಲಿಸಿದ ಗುರು ಕೂಡ ಹೊಂದಿದ್ದಾರೆ. ಅಂತಹ ಗುರುಗಳ ಬಗ್ಗೆ ಆಯ್ದ ಕೆಲವರು ನೆನಪಿಸಿಕೊಂಡದ್ದು ಹೀಗೆ…
ನಮಗೆಲ್ಲ ಶಿಕ್ಷಕರೆಂದರೆ ಭಯವೇ ಹೆಚ್ಚು. ಆದರೆ ಆ ಭಯದಲ್ಲಿಯೂ ಗೌರವ-ಪ್ರೀತಿ. ಅವರು ಹೇಳಿಕೊಟ್ಟ ತರಗತಿಯ ಪಾಠ ಮಾತ್ರವಲ್ಲ, ಜೀವನಪಾಠ ಕೂಡ ನಮಗೆ ಹೆಚ್ಚು ಹಿತವಾಗುತ್ತಿತ್ತು. ನನ್ನ ಸರಸ್ವತಿ ಶಾಲೆಯ ಮುಖ್ಯೋಪಾಧ್ಯಾಯ ಸಂಜೀವ ಮೇಸ್ಟ್ರೆ ಮತ್ತು ಅಧ್ಯಾ ಪಕ ಗೋಪಾಲ ಮೇಸ್ಟ್ರೆ ನನ್ನ ಮೇಲೆಹೆಚ್ಚು ಪ್ರಭಾವ ಬೀರಿದ್ದಾರೆ ಎನ್ನು ತ್ತಾರೆ ಉಡುಪಿಯ ಹೊಟೇಲ್ ಉದ್ಯಮಿ ರಮಾನಂದ ಕೋಟ್ಯಾನ್.
ಈ ಇಬ್ಬರು ಶಿಕ್ಷಕರೂ ತರ ಗತಿಯ ನಾಲ್ಕು ಗೋಡೆಗಳ ಒಳಗೆ ಮಾತ್ರವಲ್ಲದೆ ಹೊರಗೂ ಬೇಕಾಗು ವಂಥ ಪಾಠ ನೀಡಿದ್ದಾರಂತೆ. ತರ ಗತಿಯಲ್ಲಿ ಕತೆಯ ಮೂಲಕವೇ ನಮ್ಮನ್ನು ಸೆಳೆಯುತ್ತಿದ್ದರು. ಶಿಸ್ತಿಗೆ ಹೆಚ್ಚು ಪ್ರಾಧಾನ್ಯ ಅವರದು. ನಾನು ತುಂಬಾ ಬುದ್ಧಿವಂತ ಹುಡುಗ ನೇನಲ್ಲ. ಆದರೂ ಹತ್ತಿರ ಕರೆದು ಪ್ರೀತಿಯಿಂದ ಹೇಳಿಕೊಡುತ್ತಿದ್ದರು. ಸಮಾಜದಲ್ಲಿ ಮುಂದೆ ಬಂದು ಗುರುತಿಸಿಕೊಳ್ಳುವುದಕ್ಕೆ ಛಲ ಬೇಕು, ಜನರ ಪ್ರೀತಿ ಗಳಿಸಬೇಕು ಎಂದು ಹಲವಾರು ಬಾರಿ ಹೇಳಿಕೊಟ್ಟಿದ್ದರು. ಆಗ ಅದು ಅಷ್ಟಾಗಿಅರ್ಥವಾಗುತ್ತಿರಲಿಲ್ಲ. ಆದರೆ ನಾವು ಶಾಲೆ ಬಿಟ್ಟು ಸಮಾಜ ದೊಂದಿಗೆ ಬೆರೆಯಲು ಆರಂಭಿಸಿದಾಗ ಒಂದೊಂದೇ ಹಿತ ಮಾತುಗಳು ನೆನಪಿಗೆ ಬರುತ್ತಿದ್ದವು – ಕೋಟ್ಯಾನ್ ಸ್ಮರಿಸಿಕೊಳ್ಳುತ್ತಾರೆ.
ನನ್ನ ಶಾಲೆ, ಜೀವನದ ಪ್ರತಿ ಹಂತದಲ್ಲಿಯೂ ಹಲವು ಮಂದಿ ಗುರುಗಳ ಪ್ರಭಾವ ಇದೆ. ಅವು ಈಗಲೂ ನನ್ನ ಜೀವನ ರೂಪಿಸುತ್ತಿವೆ ಎನ್ನುತ್ತಾರೆ ರಮಾನಂದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ ಅನುಭವ
ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ
ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ
ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!
ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹರು