ಲಗೇಜ್ ಪತ್ತೆಗೆ ನೈಪುಣ್ಯ ನೆರವು: ಸಾಫ್ಟ್ ವೇರ್ ಎಂಜಿನಿಯರ್ ಕುಮಾರ್ ಪತ್ತೇದಾರಿ ಕಥೆ
Team Udayavani, Apr 1, 2022, 11:40 AM IST
ಹೊಸದಿಲ್ಲಿ: ಇತ್ತೀಚೆಗೆ ಪುಣೆಯಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದ ನಂದನ್ ಕುಮಾರ್ ಎಂಬ ಪ್ರಯಾಣಿಕರೊಬ್ಬರ ಲಗೇಜ್ ಬ್ಯಾಗ್, ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ಬೇರೊಬ್ಬ ಪ್ರಯಾಣಿಕರ ಕೈ ಸೇರಿತ್ತು. ಮನೆಗೆ ಬಂದ ಮೇಲೆ ಇದನ್ನು ಮನಗಂಡ ಕುಮಾರ್, ಇಂಡಿಗೋ ಕಸ್ಟಮರ್ ಕೇರ್ ಸಿಬಂದಿಯ ಸಹಾಯದಿಂದ ಪುನಃ ವಾಪಸ್ ಪಡೆಯಲು ಪ್ರಯತ್ನಿಸಿದ್ದರು. ಅದು ಫಲ ನೀಡಲಿಲ್ಲ. ಪ್ರಯತ್ನ ಬಿಡದ ಅವರು, ತಮ್ಮಲ್ಲಿನ ತಾಂತ್ರಿಕ ನಿಪುಣತೆಯಿಂದ ಲಗೇಜನ್ನು ಹಿಂಪಡೆದಿದ್ದಾರೆ.
ಕುಮಾರ್ ಹಾಗೂ ಸಹ ಪ್ರಯಾಣಿಕರ ಬ್ಯಾಗ್ಗಳು ಒಂದೇ ರೀತಿ ಕಾಣುತ್ತಿದ್ದರಿಂದ ಅವು ಅದಲು ಬದಲಾಗಿದ್ದವು. ಕಸ್ಟಮರ್ ಕೇರ್ ಸಿಬಂದಿಯ ಆಶ್ವಾಸನೆ ಹುಸಿಯಾಯಿತು.
ಹೇಗಾಯ್ತು ಪತ್ತೆ?: ತಮ್ಮ ಬಳಿಯಿದ್ದ ಸಹ ಪ್ರಯಾಣಿಕನ ಬ್ಯಾಗ್ನ ಮೇಲೆ ನಮೂದಾಗಿದ್ದ ಪಿಎನ್ಆರ್ ಸಂಖ್ಯೆ ಬಳಸಿಕೊಂಡು ಇಂಡಿಗೋ ವೆಬ್ಸೈಟ್ನಲ್ಲಿ ಆತನ ಬಗ್ಗೆ ಹೆಚ್ಚುವರಿ ಮಾಹಿತಿಗಾಗಿ ಜಾಲಾಡಿದ್ದಾರೆ. ಅದ್ಯಾವುದೂ ಫಲ ನೀಡದಿದ್ದಾಗ, ಅವರಲ್ಲಿನ ಸಾಫ್ಟ್ವೇರ್ ಕೌಶಲ ಬಳಸಿದ್ದಾರೆ. ಕೀ ಬೋರ್ಡ್ನಲ್ಲಿ “ಎಫ್ 12′ ಕೀ ಒತ್ತಿ, ಇಂಡಿಗೋ ವೆಬ್ಸೈಟ್ನ ಡೆವಲಪರ್ ಕನ್ಸೋಲ್ಗೆ ಹೋಗಿ ಅಲ್ಲಿ ತಮ್ಮೊಂದಿಗೆ ಚೆಕ್ ಇನ್ ಆಗಿದ್ದ ಎಲ್ಲ ಪ್ರಯಾಣಿಕರ ಪಟ್ಟಿಯಲ್ಲಿ ಪತ್ತೆ ಹಚ್ಚಿ ಆ ಸಹ ಪ್ರಯಾಣಿಕರ ಇ-ಮೇಲ್ ಅಡ್ರಸ್, ಫೋನ್ ನಂಬರ್ ಪತ್ತೆ ಹಚ್ಚಿದ್ದಾರೆ. ಅವುಗಳ ಮೂಲಕ ಅವರನ್ನು ಸಂಪರ್ಕಿಸಿದ ಕುಮಾರ್, ಅವರ ಬ್ಯಾಗ್ ತಲುಪಿಸಿ ತಮ್ಮ ಲಗೇಜ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ