ಮನೆಮನ ತಂಪಾಗಿಸಲು ಕೂಲರ್‌, ಟವರ್‌ ಫ್ಯಾನ್‌ಗಳತ್ತ ಜನರ ಚಿತ್ತ


Team Udayavani, Apr 5, 2019, 4:22 PM IST

AC-05
ಬಿಸಿಲಿನ ಧಗೆ ಹೆಚ್ಚಾದಂತೆ ಮನೆಯಲ್ಲೊಂದು ಎಸಿ ಇದ್ದರೆ ಚೆನ್ನಾಗಿ ಇತ್ತು ಎಂಬ ಮಾತು ಎಲ್ಲರ ಮನದಲ್ಲೂ  ತಂಪು ಗಾಳಿಯಂತೆ ಬೀಸುತ್ತಿರುತ್ತದೆ.  ಆದರೆ ಎಸಿ ತುಂಬಾ ದುಬಾರಿ. ಹೀಗಾಗಿ ಎಸಿಗೆ ಪರ್ಯಾಯವಾಗಿ ಏನಿದೇ ಎಂದು ಮಾರುಕಟ್ಟೆಯತ್ತ ತೆರಳಿದರೆ ಸಿಗುವುದು ತಂಪುತಂಪು ನೀಡುವ ಕೂಲರ್‌ ಮತ್ತು ಟವರ್‌
ಫ್ಯಾನ್‌ಗಳು. ಕೈಗೆಟಕುವ ದರದಲ್ಲಿ ಚಿತ್ತಾಕರ್ಷಕ ವಿನ್ಯಾಸದಲ್ಲಿ ಲಭ್ಯವಿರುವ ಇವು ಎಲ್ಲರ ಮನಗೆದ್ದಿವೆ.
ಬಿಸಿಲಿನ ಧಗೆ ಹೆಚ್ಚುತ್ತಿದೆ. ತಂಪಾದ ಗಾಳಿ ಮರುಭೂಮಿಯ ಓಯಸಿಸ್‌ನಂತಾಗಿದೆ. ಮರಗಿಡಗಳೇ ಇಲ್ಲದ ನಗರ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಬಿಸಲಿನ ತಾಪ ಜೋರಾಗಿರುವುದು ಸಾಮಾನ್ಯ ಎಂದರೂ ಈ ಬಾರಿ ಮಾತ್ರ ತೀವ್ರ ಹೆಚ್ಚಳಗೊಂಡಂತಿದೆ. ಕೇವಲ ನಗರದಲ್ಲಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲಿಯೂ ಸುಡು ಬಿಸಿಲಿನ ಪ್ರಖರತೆ ಜೀವ ಹಿಂಡುವಂತಿದೆ.
ಬಿಸಿಲಿನ ಕಾವು ಹೆಚ್ಚಾದಾಗ, ದೇಹ ತಂಪಾಗಿಸಲು ಮೊರೆ ಹೋಗುವುದು  ಫ್ಯಾನ್‌ಗೆ. ಗ್ರಾಮೀಣ ಭಾಗದಲ್ಲಾದರೆ  ಫ್ಯಾನ್‌ ಹಾಕಿ ಸಿಮೆಂಟ್‌ ನೆಲದಲ್ಲಿ ಒಂದಷ್ಟು ಹೊತ್ತು ಮಲಗಿದರೆ ದೇಹ ತಂಪಾಗುತ್ತದೆ. ಆದರೆ ನಗರದ ಟೈಲ್ಸ್‌ ಅಳವಡಿಸಿದ ನೆಲ, ತಾರಸಿ ಕಟ್ಟಡದಲ್ಲಿ ಅಂತಹ ತಂಪೆಲ್ಲಿದೆ? ಆದರೆ ಸುಡು ಬಿಸಲಿನಿಂದ ದೇಹವನ್ನು ಒಂದಷ್ಟು ಹೊತ್ತು ತಂಪು ಮಾಡಿಕೊಳ್ಳೋಣವೆಂದರೆ, ಸಾಮಾನ್ಯ ಫ್ಯಾನ್‌ನಿಂದಲೂ ಬರುವುದು ಬಿಸಿ ಗಾಳಿಯೇ!
ಮೊದಲೆಲ್ಲ ಟೇಬಲ್‌ ಫ್ಯಾನ್‌, ಸೀಲಿಂಗ್‌ ಫ್ಯಾನ್‌ ಇದ್ದರೆ ತಂಪಿಗೆ ಕೊರತೆ ಇರಲಿಲ್ಲ. ಆದರೀಗ, ಫ್ಯಾನ್‌ನಿಂದ ಬರುವ ಬಿಸಿಗಾಳಿ ಮೈಯನ್ನು ಬೆವರಿನಲ್ಲಿ ತೋಯುವಂತೆ ಮಾಡುತ್ತಿದೆ. ಅದಕ್ಕಾಗಿ ಮೊರೆ ಹೋಗುವುದು ದೇಹಕ್ಕೆ ತಂಪು ನೀಡುವ ಕೂಲರ್‌ ಮತ್ತು ಟವರ್‌ ಫ್ಯಾನ್‌ಗಳಿಗೆ.
ಹೆಚ್ಚಿದ ಬೇಡಿಕೆ
ಹೇಳಿಕೇಳಿ ಮಂಗಳೂರು ಅತಿ ತಾಪಮಾನವುಳ್ಳ ನಗರ. ಇಲ್ಲಿ ಬೇಸಗೆ ಮಾತ್ರವಲ್ಲ; ಮಳೆ, ಚಳಿಗಾಲದಲ್ಲಿಯೂ ಸೆಕೆಯ ಅನುಭವ ಆಗುತ್ತಲೇ ಇರುತ್ತದೆ. ಅದಕ್ಕಾಗಿ ಜನ ಫ್ಯಾನ್‌ ಬದಲಾಗಿ ಕೂಲರ್‌ ಅಥವಾ ಟವರ್‌ ಫ್ಯಾನ್‌ನ ಮೊರೆ ಹೋಗಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದೀಚೆಗೆ ಟವರ್‌ ಫ್ಯಾನ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಬೇಸಗೆಯಲ್ಲಂತೂ ಟವರ್‌ ಫ್ಯಾನ್‌ಗೆ ಬೇಡಿಕೆ ಕುದುರಿದೆ ಎನ್ನುತ್ತಾರೆ ನಗರದ ವಿವಿಧ ಎಲೆಕ್ಟ್ರಾನಿಕ್ಸ್‌ ಮಳಿಗೆಗಳ ಸಿಬಂದಿ.
ಅಗ್ಗದ ದರಕ್ಕೆ ಕೂಲರ್‌  
ಸೆಕೆಯಿಂದ ರಕ್ಷಿಸಿಕೊಳ್ಳಲು ಮನೆಯ ರೂಮ್‌ಗೆ ಹವಾನಿಯಂತ್ರಿತ ಉಪಕರಣ ಅಳವಡಿಸುವುದು ಉಳ್ಳವರ ಮನೆಯ ಮಾತು. ಆದರೆ ಮಧ್ಯಮ ವರ್ಗ ಮತ್ತು ಬಡ ವರ್ಗದ ಮನೆ ಮಂದಿಯ ಕತೆಯೇನು?  20- 30 ಸಾವಿರ ರೂ. ಖರ್ಚು ಮಾಡಿ ಹವಾನಿಯಂತ್ರಿತ ಉಪಕರಣವನ್ನು ಅಳವಡಿಸುವುದೆಲ್ಲ ಅವರಿಗೆ ಸಾಧ್ಯವಾಗದ ಮಾತು. ಹೀಗಿದ್ದಾಗ, ಈ ವರ್ಗದವರು ಮಾತ್ರವಲ್ಲ ಅತಿ ಶ್ರೀಮಂತ ವರ್ಗದವರು ಕೂಡ ಮೊರೆ ಹೋಗುವುದು ಕೂಲರ್‌ ಮತ್ತು ಟವರ್‌ ಫ್ಯಾನ್‌ಗೆ. ಎಲ್ಲ ವರ್ಗದ ಮನೆಯವರಿಗೂ ಬಿಸಿಲಿನ ಪ್ರಖರತೆಯಿಂದ ರಕ್ಷಣೆ ನೀಡುವ ಆತ್ಮೀಯ ಸ್ನೇಹಿತನಾಗಿ ಕೂಲರ್‌ ಮತ್ತು ಟವರ್‌ ಫ್ಯಾನ್‌ಗಳು ಮನೆ ತುಂಬಿಕೊಂಡಿವೆ. ಕೂಲರ್‌ ಮತ್ತು ಟವರ್‌ ಫ್ಯಾನ್‌ನಲ್ಲಿ ವಿವಿಧ ಗಾತ್ರದವುಗಳಿದ್ದು, 2,500 ರೂ. ಗಳಿಂದ ಬೆಲೆ ಆರಂಭವಾಗುತ್ತದೆ.
 ಎಸಿಯಷ್ಟೇ ತಂಪು
ಮನೆಯಲ್ಲಿ ಬೇಕಾದಷ್ಟು ನೀರಿದ್ದರಾಯಿತು. ನೀರು ಹಾಕಿದರೆ ಎಸಿಯಷ್ಟೇ ತಂಪಾಗಿಸುವ ಕೂಲರ್‌ಗೆ ಬೆಲೆಯೂ ಕಡಿಮೆ. ಪ್ರತಿ ಕೂಲರ್‌ಗೂ ಎಷ್ಟು ಲೀಟರ್‌ ನೀರು ಸುರಿಯಬೇಕು ಎಂಬ ನಿಯಮವಿದೆ. ಸಣ್ಣ ಕೂಲರ್‌ಗಳಿಗೆ ಕಡಿಮೆ, ಹೆಚ್ಚು ಲೀಟರ್‌ ಸಾಮರ್ಥ್ಯದ ಕೂಲರ್‌ಗಳಿಗೆ ಹೆಚ್ಚು ನೀರು ಹಾಕಿದರೆ ಎಸಿಯಷ್ಟೇ ತಂಪಾಗಿಸುವುದರೊಂದಿಗೆ ನೆಮ್ಮದಿಯ ನಿದ್ದೆಯನ್ನು ನೀಡುತ್ತದೆ. ಟವರ್‌ ಫ್ಯಾನ್‌ಗೆ ನೀರು ಹಾಕಬೇಕಾದ ಅವಶ್ಯವಿಲ್ಲ; ಇದರಲ್ಲಿ ಫ್ಯಾನ್‌ಗಿಂತ ಹೆಚ್ಚು ಗಾಳಿ ಸೋಕಿ, ದೇಹ ತಂಪಾಗುವಂತೆ ಮಾಡುತ್ತದೆ.
ಉತ್ತಮ ಬೇಡಿಕೆ
ಮಂಗಳೂರಿನಲ್ಲಿ ಕಳೆದೆರಡು ವರ್ಷಗಳಿಂದೀಚೆಗೆ ಕೂಲರ್‌ ಮತ್ತು ಟವರ್‌ ಫ್ಯಾನ್‌ಗೆ ಬೇಡಿಕೆ ಜಾಸ್ತಿಯಾಗಿದೆ. ಈ ವರ್ಷ ಉತ್ತಮ ಬೇಡಿಕೆ ಇದೆ. ಈಗಿನ ಸೆಕೆ, ಬಿಸಿಲಿನ ಪ್ರಖರತೆಯಿಂದ ರಕ್ಷಿಸಿಕೊಳ್ಳಲು ಕೂಲರ್‌ನ್ನು ಜನ ಇಷ್ಟ ಪಡುತ್ತಾರೆ ಎನ್ನುತ್ತಾರೆ ನಗರದ ಎಲೆಕ್ಟ್ರಾನಿಕ್ಸ್‌ ಮಳಿಗೊಂದರ ಮ್ಯಾನೇಜರ್‌ ಶಬರೀಶ್‌.
ಕೂಲರ್‌, ಟವರ್‌ ಫ್ಯಾನ್‌  ಖರೀದಿಗೆ ಹೆಚ್ಚಿನ ಒಲವು
ಮಂಗಳೂರಿನಲ್ಲಿ ಕಳೆದೆರಡು ವರ್ಷಗಳಿಂದ, ಅದರಲ್ಲೂ ಈ ವರ್ಷ ಸೆಕೆ ಜಾಸ್ತಿ ಇದೆ. ಅದಕ್ಕಾಗಿ ಜನ ಕೂಲರ್‌, ಟವರ್‌ ಫ್ಯಾನ್‌ ಖರೀದಿಗೆ ಹೆಚ್ಚು ಆಸಕ್ತರಾಗಿದ್ದಾರೆ. ಈಗ ಆಫರ್‌ಗಳೂ ಲಭ್ಯವಿರುವುದರಿಂದ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ ಎಲೆಕ್ಟ್ರಾನಿಕ್ಸ್‌ ಸಂಸ್ಥೆಯೊಂದರ ಸಿಬಂದಿ ನಿಶಾಂತ್‌.
   ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.