ಡಿಜಿಲಾಕರ್ ಬಳಸಿ, ನಿಮ್ಮ ಎಲ್ಲಾ ದಾಖಲೆಪತ್ರಗಳನ್ನು ಸುರಕ್ಷಿತವಾಗಿರಿಸಿ

ಏನಿದು ಡಿಜಿಲಾಕರ್ ಆ್ಯಪ್?

Team Udayavani, May 7, 2021, 6:00 PM IST

DigiLocker is a key initiative under Digital India, the Government of India’s flagship program aimed at transforming India into a digitally empowered society

*ಡಿಜಿಲಾಕರ್ ‘ಡಿಜಿಟಲ್ ಇಂಡಿಯಾ’ ಕಾರ್ಯಕ್ರಮದಡಿ ಒಂದು ಪ್ರಮುಖ ಉಪಕ್ರಮವಾಗಿದೆ.

*ಎಲ್ಲಾ ದಾಖಲೆಗಳ ಡಿಜಿಟಲ್ ಪ್ರತಿಯನ್ನು ರಚಿಸಲು ಇದು ಸಹಕಾರಿಯಾಗಿದೆ

*ಬಳಕೆದಾರರು ವಿಮೆ, ವೈದ್ಯಕೀಯ ವರದಿಗಳು, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಮದುವೆ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು.

 

ಎಂದಾದರು ವಾಹನ ಚಾಲನೆ ಮಾಡುವಾಗ, ನಿಮ್ಮಲ್ಲಿ ಎಲ್ಲಾ ದಾಖಲೆಗಳಿದ್ದರೂ, ಅದನ್ನು ಮನೆಯಲ್ಲಿ ಬಿಟ್ಟು ಬಂದಿರುವ ಕಾರಣಕ್ಕೆ ಪೊಲೀಸರಿಗೆ ದಂಡ ಕಟ್ಟಿದ್ದೀರಾ ? ಎಲ್ಲೋ ದೂರದ ಊರಿಗೆ ಹೋಗಿರುವಾಗ, ನಿಮ್ಮ ಯಾವುದೋ ದಾಖಲೆಪತ್ರ ತತ್‌ ಕ್ಷಣದಲ್ಲಿ ಬೇಕಾಗಿದ್ದರೂ, ಅದನ್ನು ನಿಮ್ಮ ಮನೆಯಲ್ಲೇ ಬಿಟ್ಟಿರುವ ಕಾರಣಕ್ಕೆ, ಆ ಕ್ಷಣ ಅದಿಲ್ಲದೆ ಕಷ್ಟಪಟ್ಟಿದ್ದೀರಾ ? ಹಾಗಾದರೆ, ಈಗ ಅದಕ್ಕೆಲ್ಲಾ ಪರಿಹಾರ ಬಂದಿದೆ. ನಿಮ್ಮ ಸ್ಮಾರ್ಟ್ ಫೋನ್ ನನ್ನು ಸ್ಮಾರ್ಟ್ ಆಗಿ ಬಳಸಲು ನಿಮಗೆ ಗೊತ್ತಿರಬೇಕು ಅಷ್ಟೆ.

ಇಡೀ ಜಗತ್ತು ಡಿಜಿಟಲ್ ಆಗುತ್ತಿದೆ. ಆನ್ಲೈನ್ ಮೂಲಕ ಏನನ್ನೂ ಮಾಡಲು ಸಾಧ್ಯ ಎಂದು ದಿನೇ ದಿನೇ ಸಾಬಿತಾಗುತ್ತಿದೆ. ತಿಂಗಳಿಗೆ 1 ಜಿಬಿ ಡೇಟಾ ಬಳಸುತ್ತಿದ್ದ ಹಲವರಿಗೆ ಇಂದು ದಿನಕ್ಕೆ 1 ಜಿಬಿ ಡೇಟಾ ಸಾಲುತ್ತಿಲ್ಲ. ಜಾಹೀರಾತುಗಳು, ಚಲನಚಿತ್ರಗಳು, ಸಭೆ-ಸಮಾರಂಭಗಳು, ಇನ್ನಿತರ ಈವೆಂಟ್‌ ಗಳಿಂದ ಹಿಡಿದು ಎಲ್ಲವನ್ನೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಅಷ್ಟೇ ಅಲ್ಲದೆ, 2020-21 ನೇ ಸಾಲಿನ ಬಜೆಟ್‌ ನನ್ನು ವಿತ್ತ ಸಚಿವರು ಟ್ಯಾಬ್ಲೆಟ್‌ನಲ್ಲಿ ಪ್ರಸ್ತುತಪಡಿಸಿದ್ದರು. ಅನೇಕ ದೇಶಗಳಂತೆ ಈಗ ಭಾರತವೂ ಡಿಜಿಟಲ್ ಮಾರ್ಗವನ್ನು ಅನುಸರಿಸುತ್ತಿದೆ.

ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ, ಭಾರತ ಸರ್ಕಾರವು ಅನೇಕ ಸೇವೆಗಳನ್ನು ಆನ್ಲೈನ್ ನಲ್ಲೂ ಬಿಡುಗಡೆ ಮಾಡಿದೆ. ಅವುಗಳಲ್ಲಿ ಒಂದು ಡಿಜಿಲಾಕರ್ ಅಪ್ಲಿಕೇಶನ್. ಈ ಆ್ಯಪ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಏನಿದು ಡಿಜಿಲಾಕರ್ ಆ್ಯಪ್ ?

ಭಾರತದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಡಿಜಿಲಾಕರ್ ಅಪ್ಲಿಕೇಶನ್ ಭಾರತೀಯ ಆನ್ಲೈನ್ ಸೇವೆಯನ್ನು ಬಿಡುಗಡೆ ಮಾಡಿತ್ತು. ಇದು ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಬಳಕೆದಾರರಿಗೆ ತಮ್ಮ ಎಲ್ಲಾ ದಾಖಲೆಪತ್ರಗಳನ್ನು (ಡಾಕ್ಯುಮೆಂಟ್ಸ್) ಸಂರಕ್ಷಿಸಿಡಲು ಕ್ಲೌಡ್ ಖಾತೆಯನ್ನು ಒದಗಿಸುತ್ತದೆ. ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ, ಶಾಲೆ- ಕಾಲೇಜುಗಳ ಅಂಕಪಟ್ಟಿ ಮತ್ತು ಹೆಚ್ಚಿನದನ್ನು ಡಿಜಿಟಲ್ ಮಾದರಿಯಲ್ಲಿ ಸೇವ್ ಮಾಡಲು ಅಥವಾ ಸಂರಕ್ಷಿಸಿ ಇಡಲು ಈ ಕ್ಲೌಡ್ ಖಾತೆಯನ್ನು ಬಳಸಬಹುದು. ಈ ಅಪ್ಲಿಕೇಶನ್‌ ನಲ್ಲಿ ಎಲ್ಲಾ ರೀತಿಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಲು ಪ್ರತಿಯೊಬ್ಬ ಖಾತೆದಾರರಿಗೆ 1 ಜಿಬಿ ಕ್ಲೌಡ್ ಸ್ಟೋರೇಜ್ ಲಭ್ಯವಿರುತ್ತದೆ.

ಈ ಆ್ಯಪ್ ನ ಬೀಟಾ ಆವೃತ್ತಿಯನ್ನು ದೇಶದ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು 2015 ರ ಜುಲೈನಲ್ಲಿ ಬಿಡುಗಡೆ ಮಾಡಿದ್ದರು. ಆರಂಭದಲ್ಲಿ ಬಳಕೆದಾರರಿಗೆ ಕೇವಲ 100 ಎಂಬಿ ಸ್ಟೋರೇಜ್ ಅವಕಾಶ ಲಭ್ಯವಿತ್ತು. ಇದೀಗ ಅದನ್ನು 1 ಜಿಬಿಗೆ ಹೆಚ್ಚಿಸಲಾಗಿದೆ.

ಪ್ರತ್ಯೇಕ ದಾಖಲೆಯ ಫೈಲ್ ಗಾತ್ರವು 10 ಎಂಬಿಗಿಂತಲೂ ಅಧಿಕವಾಗಿರಬಾರದು.

ಕೇವಲ ಆಧಾರ್ ಕಾರ್ಡ್ ನನ್ನು ಸೇವ್ ಮಾಡಿಡುವ ಅಪ್ಲಿಕೇಶನ್ ಆಗಿ ಆರಂಭವಾದ ಡಿಜಿಲಾಕರ್, ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳನ್ನೂ ಸೇರಿಸಿತು. ಪ್ರಸ್ತುತ ಈ ಆ್ಯಪ್‌ ನಲ್ಲಿ ಬ್ಯಾಂಕ್ ದಾಖಲೆಗಳು, ವೈದ್ಯಕೀಯ ದಾಖಲೆಗಳು ಇನ್ನಿತರ ಅವಕಾಶವನ್ನು ಬಳಕೆದಾರರಿಗೆ ನೀಡುತ್ತಿದೆ. ಈಗ ಡಿಜಿಲಾಕರ್ ಕೋಟ್ಯಂತರ ಬಳಕೆದಾರರನ್ನು ಹೊಂದಿದ್ದು, ಕೋಟ್ಯಾನುಗಟ್ಟಲೆ ದಾಖಲೆಗಳು ಇದರಲ್ಲಿ ಸಂಗ್ರಹವಾಗಿದೆ.

ಡಿಜಿಲಾಕರ್ ಅಪ್ಲಿಕೇಶನ್ ನನ್ನು ಹೇಗೆ ಬಳಸುವುದು?

ಡಿಜಿಲಾಕರ್ ಬಳಸಲು ಆಧಾರ್ ಸಂಖ್ಯೆಯನ್ನು ಬೇಕಾಗುತ್ತದೆ. ಬಳಕೆದಾರರಾಗಲು, ಮೊದಲಿಗೆ ಡಿಜಿಲಾಕರ್ ಅಪ್ಲಿಕೇಶನ್ ನನ್ನು ಆಂಡ್ರಾಯ್ಡ್ ಪ್ಲೇಸ್ಟೋರ್‌ ನಿಂದ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಡೌನ್‌ ಲೋಡ್ ಮಾಡಬಹುದಾಗಿದೆ. ನಿಮ್ಮ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಸಿಸ್ಟಮ್‌ ಗಳಲ್ಲಿ ಡಿಜಿಲಾಕರ್ ವೆಬ್‌ ಸೈಟ್‌ ಗೆ ಭೇಟಿ ನೀಡಿ, ಅಪ್ಲಿಕೇಶನ್ ಡೌನ್‌ ಲೋಡ್ ಮಾಡಬಹುದು.

ಬಳಿಕ, ನಿಮ್ಮ ಆಧಾರ್ ಸಂಖ್ಯೆ ಹಾಗೂ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ, ಅಪ್ಲಿಕೇಶನ್‌ ಗೆ ಸೈನ್ ಅಪ್ ಆಗಬೇಕು. ಆಗ ಆ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ. ಅದನ್ನು ಅಲ್ಲಿ ನಮೂದಿಸಿದರೆ, ನೀವು ಸೈನ್ ಇನ್ ಆಗುತ್ತೀರಿ. ಅಲ್ಲಿ ನೀವು, ನಿಮಗೆ ಬೇಕಾದ ಯೂಸರ್ ನೇಮ್ ಸಹ ಹಾಕಬಹುದು.

ಸೈನ್-ಇನ್ ಆದ ಬಳಿಕ, ಯಾವುದೇ ಪ್ರಮಾಣಪತ್ರ, ಇನ್ನಿತರ ಕಾರ್ಡ್ಗಳನ್ನು ವಿತರಿಸುವ ಸರ್ಕಾರಿ-ಸರ್ಕಾರೇತರ ಸಂಸ್ಥೆಗಳಿಂದ ತಮ್ಮ ಇ-ಡಾಕ್ಯುಮೆಂಟ್‌ಗಳನ್ನು ಪಡೆಯಬಹುದು. ಅದಲ್ಲದೆ, ಬಳಕೆದಾರರು ಇನ್ನಿತರ ಖಾಸಗೀ ದಾಖಲೆಗಳನ್ನು ಅಪ್‌ಲೋಡ್ ಮಾಡಲೂ ಅವಕಾಶವಿದೆ. ಬಳಕೆದಾರರು ಈ ಯಾವುದೇ ದಾಖಲೆಗಳನ್ನು, ಇತರರೊಂದಿಗೆ ಹಂಚಿಕೊಳ್ಳಬೇಕಾದರೆ, ತಮ್ಮ ಡಾಕ್ಯುಮೆಂಟ್ ಪಕ್ಕದಲ್ಲಿ ಇರುವ ಆಯ್ಕೆಯನ್ನು ಬಳಸಿ, ಆಗ ಸಿಗುವ ಲಿಂಕ್ ಮೂಲಕ ದಾಖಲೆಯನ್ನು ಇತರರಿಗೆ ಕಳುಹಿಸಬಹುದು.

ಆ್ಯಪ್ ಜೊತೆ ನೋಂದಾಯಿಸಿಕೊಂಡಿರುವ ಯಾವುದೇ ಸಂಸ್ಥೆಯ ಪ್ರಮಾಣಪತ್ರ/ ಅಂಕಪಟ್ಟಿ/ಇನ್ನಿತರ ಕಾರ್ಡ್ ಗಳು ಸ್ವಯಂಚಾಲಿತವಾಗಿ ಡಿಜಿಲಾಕರ್‌ ಗೆ ವರ್ಗಾಯಿಸಲಾಗುತ್ತದೆ.

ಡಿಜಿಲಾಕರ್ ಎಷ್ಟು ಮಂದಿ ಬಳಕೆದಾರರನ್ನು ಹೊಂದಿದೆ?

ಮಾರ್ಚ್ 15 ರ ಹೊತ್ತಿಗೆ, 5.86 ಕೋಟಿಗೂ ಹೆಚ್ಚಿನ ಜನರು ಡಿಜಿಲಾಕರ್ ಖಾತೆಯನ್ನು ಹೊಂದಿದ್ದಾರೆ. 400 ಕೋಟಿಗೂ ಅಧಿಕ ಅಧಿಕೃತ ಇ-ಡಾಕ್ಯುಮೆಂಟ್‌ ಗಳನ್ನು ನೀಡಲಾಗಿದೆ. ಒಟ್ಟು 491 ಸಂಸ್ಥೆಗಳ ಡಾಕ್ಯುಮೆಂಟ್‌ ಗಳನ್ನು ಡಿಜಿಲಾಕರ್‌ ನಲ್ಲಿ ಪಡೆಯಬಹುದಾಗಿದೆ.

ಡಿಜಿಲಾಕರ್ ಎಷ್ಟು ಸುರಕ್ಷಿತ?

ಡಿಜಿಲಾಕರ್ ಪ್ಲಾಟ್‌ ಫಾರ್ಮ್ ಸಂಪೂರ್ಣ ಪ್ರಮಾಣಿತ ಭದ್ರತಾ ಕಾರ್ಯವಿಧಾನಗಳನ್ನು ಅನುಸರಿಸುವುದಾಗಿ ಅಭಿವೃದ್ಧಿಪಡಿಸಿದ ಸಂಸ್ಥೆಯು ಹೇಳಿಕೊಂಡಿದೆ. ಪ್ಲಾಟ್‌ ಫಾರ್ಮ್ ನ ಪ್ರಕಾರ, ತಮ್ಮ ಸರ್ವರ್‌ ಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುವ ಮೊದಲು, ಅದರ ಸುರಕ್ಷತೆ ಮತ್ತು ಏನಾದರೂ ದೋಷಗಳ ಬಗ್ಗೆ ಪರಿಶೀಲಿಸಿ, ಪರೀಕ್ಷಿಸಲಾಗುತ್ತದೆ. ಆ್ಯಪ್‌ ನಲ್ಲಿ ನೋಂದಾಯಿಸಿಕೊಳ್ಳುವ ಬಳಕೆದಾರರನ್ನು ದೃಢೀಕರಿಸಲು, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಯನ್ನು ಕಳುಹಿಸಲಾಗುತ್ತದೆ.

ಅದಲ್ಲದೆ, ಡಿಜಿಲಾಕರ್ ಅಪ್ಲಿಕೇಶನ್‌ ನನ್ನು ಮಾನ್ಯತೆ ಪಡೆದ ಲೆಕ್ಕಪರಿಶೋಧಕ ಏಜೆನ್ಸಿಗಳು ಆಡಿಟ್ ಮಾಡುತ್ತವೆ ಮತ್ತು ಸೆಕ್ಯುರಿಟಿ ಆಡಿಟ್ ಪ್ರಮಾಣಪತ್ರವನ್ನು ಆ್ಯಪ್ ನಿಯಮಿತವಾಗಿ ಪಡೆಯುತ್ತಿರುತ್ತದೆ.

ಸ್ಮಾರ್ಟ್ ಫೋನ್ ಒಂದು ಕೈಯಲ್ಲಿದ್ದರೆ, ಎಲ್ಲವೂ ನಮ್ಮ ಕೈಯಲ್ಲಿದ್ದಂತೆ. ಈಗಾಗಲೇ, ಸರ್ಕಾರವೂ ಸಹ ಡಿಜಿಲಾಕರ್ ಮೂಲಕ ಹಂಚಿಕೊಳ್ಳುವ ದಾಖಲೆಗಳನ್ನು ಅಧಿಕೃತ ಎಂದು ಪರಿಗಣಿಸುವಂತೆ ಕೇಳಿಕೊಂಡಿದೆ. ಶಾಲೆ-ಕಾಲೇಜುಗಳ ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ ಇನ್ನಿತರ ಪ್ರಮುಖ ದಾಖಲೆಗಳೆಲ್ಲವೂ ಒಂದೇ ಸೂರಿನಡಿ ಸಿಗುವಾಗ, ನಾವು ಹೊದಲ್ಲೆಲ್ಲಾ ಹತ್ತಾರು ದಾಖಲೆಪತ್ರಗಳನ್ನು ಎತ್ತಿಕೊಂಡು ಹೋಗಲು ಯಾರು ಬಯಸುತ್ತಾರೆ? ಅಂತಹ ಎಲ್ಲಾ ದಾಖಲೆಗಳನ್ನು ನಿಮ್ಮ ಮನೆಯೊಳಗೆ ಸುರಕ್ಷಿತವಾಗಿ ಇರಿಸಿ ಮತ್ತು ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಬಳಸಿ ಅವುಗಳ ಇ-ಪ್ರತಿಗಳನ್ನು ಪಡೆದು, ಎಲ್ಲಿ ಬೇಕಾದರೂ ಬಳಸಿ.

-ಇಂದುಧರ ಹಳೆಯಂಗಡಿ

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.