ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬಂದಿದೆ ಹಾರುವ ಕಾರು: ಇದರ ಗುಣವೈಶಿಷ್ಟ್ಯಗಳೇನು ?
Team Udayavani, Dec 12, 2019, 9:20 AM IST
ನ್ಯೂಯಾರ್ಕ್: ಇಂದು ಜಗತ್ತಿನೆಲ್ಲೆಡೆ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಮಿತಿಮೀರುತ್ತಿದೆ. ಅಪಘಾತದ ಪ್ರಮಾಣಗಳು ಕೂಡ ಹೆಚ್ಚಾಗುತ್ತಿದೆ. ಇವೆಲ್ಲದಕ್ಕೂ ಬ್ರೇಕ್ ಹಾಕಲು ಅಮೆರಿಕದ ಕಾರು ತಯಾರಿಕ ಕಂಪೆನಿಯಾದ ಪಿಎಲ್-ವಿ ಲಿಬರ್ಟಿ ಸಂಸ್ಥೆ ಹಾರುವ ಕಾರನ್ನು ಬಿಡುಗಡೆ ಮಾಡಿದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಕಾರುಪ್ರಿಯರ ಮನಗೆದ್ದಿದೆ.
ಈ ಕಾರನ್ನು ವಿಶ್ವದ ಮೊದಲ ‘ಡ್ರೈವ್ ಅಂಡ್ ಫ್ಲೈ’ ಕಾರು ಎಂದು ಕರೆಯಲಾಗುತ್ತಿದೆ. 102-ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಈ ಕಾರು ಒಂದು ಬಾರಿ ಗಾಳಿಯಲ್ಲಿ 500 ಕಿ.ಮೀ ವರೆಗೆ ಚಲಿಸಬಲ್ಲದು. ಹಾಗೆಯೇ ರಸ್ತೆಯಲ್ಲಿ ಅದು 1200 ಕಿ.ಮೀ ದೂರವನ್ನು ಕ್ರಮಿಸುತ್ತದೆ: ಇತ್ತೀಚೆಗೆ ಪ್ಯಾರಾಮೌಂಟ್ ಮಿಯಾಮಿ ವರ್ಲ್ಡ್ ಸೆಂಟರ್ನಲ್ಲಿ ಈ ಕಾರನ್ನು ಪ್ರದರ್ಶನ ಮಾಡಲಾಗಿದೆ.
ಈ ಕಾರಿನ ಇತರ ವೈಶಿಷ್ಟ್ಯಗಳೇನು ?
ಈ ಹಾರುವ ಕಾರಿಗೆ ಪರ್ಸನಲ್ ಏರ್ ಲ್ಯಾಂಡಿಂಗ್ ವೆಹಿಕಲ್ ಅಥವಾ ಪಿಎಎಲ್-ವಿ ಎಂದು ಹೆಸರಿಡಲಾಗಿದೆ. ವಾಹನವು ಹಿಂಭಾಗದಲ್ಲಿ ಪ್ರೊಪೆಲ್ಲರ್ಗಳನ್ನು (ಫ್ಯಾನ್) ನೀಡಲಾಗಿದೆ. ಇದರ ಸಹಾಯದಿಂದ ಈ ಕಾರು 12,500 ಅಡಿ ಎತ್ತರದವರೆಗೆ ಹಾರಾಟ ನಡೆಸಬಹುದು. ರಸ್ತೆಯಲ್ಲಿ ಈ ಕಾರಿನ ಗರಿಷ್ಠ ವೇಗ 322 ಕಿ.ಮೀ.
ಗ್ಯಾಸೋಲಿನ್ (ಪೆಟ್ರೋಲ್) ನಿಂದ ಈ ಕಾರು ಚಲಿಸುತ್ತದೆ. ಹಾರಾಟದ ವೇಳೆ ಗರಿಷ್ಠ ಗಂಟೆಗೆ 322 ಕಿ.ಮೀ.ವೇಗದ ಮಿತಿ ಅಳವಡಿಸಲಾಗಿದೆ. ಹಾರಾಟದ ವೇಳೆ ಇಬ್ಬರಿಗೆ ಮಾತ್ರ ಕೂರಲು ಅವಕಾಶವಿರಲಿದೆ.ಹೈಸ್ಪೀಡ್ ‘ಡ್ರೈವ್ ಅಂಡ್ ಫ್ಲೈ’ ಕಾರು: 0 ರಿಂದ 100 ವೇಗವನ್ನು ಪಡೆಯಲು ಕೇವಲ ಎಂಟು ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ಅದರ ಬ್ಲೇಡ್ಗಳನ್ನು ಮಡಚಿ ಕಾರಿನ ಪಡೆದುಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಈ ಕಾರು ಕಾರ್ಬನ್ ಫೈಬರ್, ಟೈಟಾನಿಯಂ ಮತ್ತು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಈ ಕಾರಿಗೆ ಬೈಕ್ನಂತಹ ಹ್ಯಾಂಡಲ್ ನೀಡಲಾಗಿರುವುದು ವಿಶೇಷ. ಇದರಿಂದಾಗಿ ರಸ್ತೆ ಮತ್ತು ಹಾರಾಟದ ವೇಳೆ ಸುಲಭವಾಗಿ ನಿಯಂತ್ರಿಸಬಹುದು. ಇದು ಹಾರಾಟ ನಡೆಸಲು 540 ಅಡಿ ರನ್ವೇಯ ಅಗತ್ಯವಿದೆ. ಹಾಗೆಯೇ ಇಳಿಯಲು ಕೇವಲ 100 ಅಡಿ ರನ್ವೇ ಅಗತ್ಯವಿದೆ.
ಈ ನೂತನ ಕಾರು ತಯಾರಕರಾದ ಪಿಎಎಲ್-ವಿ ಇದುವರೆಗೆ 70 ಕಾರುಗಳನ್ನು ಮಾರಾಟ ಮಾಡಿದೆ ಎಂದು ಅಧಿಕೃತವಾಗಿ ಹೇಳಿಕೊಂಡಿದೆ. ಈ ಕಾರಿನ ಬೆಲೆ ಅಂದಾಜು 4.3 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ