ಇನ್ನು ಮುಂದೆ ಗೂಗಲ್ ಕ್ಲಾಸ್ ಸಂಪೂರ್ಣ ನಿಯಂತ್ರಣ ಶಿಕ್ಷಕರ ಕೈಯಲ್ಲಿ.! ಏನಿದು ಹೊಸ ಫೀಚರ್?

ಸಂಪೂರ್ಣ ಆನ್ ಲೈನ್ ತರಗತಿಯನ್ನು ಶಿಕ್ಷಕರು ನಿಯಂತ್ರಿಸಬಹುದಾಗಿದೆ.

Team Udayavani, Feb 20, 2021, 1:53 PM IST

Google Meet rolls out special features for teachers and students

ನವದೆಹಲಿ: ಪ್ರಸಿದ್ಧ ವೀಡಿಯೋ ಸಂವಾದದ ಆ್ಯಪ್ ಆಗಿರುವ ಗೂಗಲ್ ಮೀಟ್ ಶಿಕ್ಷಕರಿಗಾಗಿ ಎಲ್ಲಾ ವಿದ್ಯಾರ್ಥಿಗಳ ಸಂವಾದದ ಆಡಿಯೋವನ್ನು ಮ್ಯೂಟ್ ಮಾಡುವ ಸೌಲಭ್ಯವನ್ನು ಒಳಗೊಂಡಂತೆ ಹಲವು ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ವೀಡಿಯೋ ಸಂವಾದದ ಸಮಯದಲ್ಲಿ ಶಿಕ್ಷಕರು ವಿವಿಧ ರೀತಿ ಕಿರುಕುಳವನ್ನು ಅನುಭವಿಸಿರುವ ಹಾಗೂ ಶ್ವೇತ ಅವರ ಸಂವಾದದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ನಿರ್ಧಾರವನ್ನು ಗೂಗಲ್ ಕೈಗೊಂಡಿದೆ.

ಇದೀಗ ನೂತನವಾಗಿ ನೀಡಿರುವ ಹೊಸ ಫೀಚರ್ ನಲ್ಲಿ ಶಿಕ್ಷಕರಿಗೆ ಹಲವು ಸೌಲಭ್ಯಗಳನ್ನು ನೀಡಲಾಗಿದ್ದು, ಸಂಪೂರ್ಣ ಆನ್ ಲೈನ್ ತರಗತಿಯನ್ನು ಶಿಕ್ಷಕರು ನಿಯಂತ್ರಿಸಬಹುದಾಗಿದೆ.

ಎಲ್ಲಾ ವಿದ್ಯಾರ್ಥಿಗಳ ಸಂವಾದವನ್ನು ಶಿಕ್ಷಕರು ಮ್ಯೂಟ್ ಮಾಡಬಹುದಾದ್ದರಿಂದ ಯಾವುದೇ ಒಂದು ಗಹನವಾದ ಸಂವಾದ ನಡೆಯುವಾಗ ನಡುವೆ ಅನಾವಶ್ಯಕವಾದ ಶಬ್ದಗಳಿಂದ ತರಗತಿಯಲ್ಲಿನ ಏಕಾಗ್ರತೆ ಹಾಳಾಗುವ ಸಾಧ್ಯತೆ ಇರುತ್ತದೆ. ಅಂತಹ ಸನ್ನಿವೇಶವನ್ನು ತಪ್ಪಿಸಲು ಈ ಹೊಸ ಫೀಚರ್ ಸಹಾಯವಾಗಲಿದೆ ಎಂದು ಗೂಗಲ್ ತಿಳಿಸಿದೆ.

ಇದನ್ನೂ ಓದಿ:ರಾಮಮಂದಿರ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್ ಧೂಳಿಪಟವಾಗಲಿದೆ: ಬಿ.ವೈ.ವಿಜಯೇಂದ್ರ

ಹೊಸ ಫೀಚರ್ ನಲ್ಲಿ ಗೂಗಲ್ ಸಂವಾದದಲ್ಲಿ ಸುರಕ್ಷತೆಗೆ ಹೆಚ್ಚಿನ ಒಲವನ್ನು ನೀಡಿದ್ದು, ಶಿಕ್ಷಕರು ಯಾರು ಆನ್ ಲೈನ್ ಕ್ಲಾಸ್ ಗೆ ಅಟೆಂಡ್ ಆಗಬೇಕು ಯಾರು ಆಗಬಾರದು ಎಂಬುವುದನ್ನು ನಿರ್ಧರಿಸಬಹುದಾಗಿದೆ. ಅಲ್ಲದೆ ಯಾರು ತರಗತಿಗೆ ಸೇರಬಾರದು ಅಂತಹ ವ್ಯಕ್ತಿಗಳನ್ನು ಬ್ಲಾಕ್ ಮಾಡುವ ಸೌಲಭ್ಯವನ್ನು ಶಿಕ್ಷಕರಿಗೆ ನೀಡಲಾಗಿದ್ದು, ತರಗತಿಯಲ್ಲಿ ಯಾವ ವಿದ್ಯಾರ್ಥಿ ಸಂವಾದ ನಡೆಸಬಹುದು ಮತ್ತು ಯಾವ ವಿದ್ಯಾರ್ಥಿ ಸಂವಾದಲ್ಲಿ ಚಾಟ್ ಮಾಡಬಹುದು ಎಂಬದನ್ನೂ ಶಿಕ್ಷಕರೇ ನಿಯಂತ್ರಿಸಬಹುದಾಗಿದೆ.

ಈ ಹಿಂದೆ ಶಿಕ್ಷಕರು ಆನ್ ಲೈನ್ ಕ್ಲಾಸ್ ನಿಂದ ನಿರ್ಗಮಿಸಿದ ನಂತರವೂ ವಿದ್ಯಾರ್ಥಿಗಳು ಕ್ಲಾಸ್ ನಲ್ಲಿಯೇ ಇರಬಹುದಾಗಿತ್ತು. ಆದರೆ ಇದೀಗ ಶಿಕ್ಷಕರು ಕ್ಲಾಸ್ ಮುಗಿದ ಬಳಿ ಸಂಪೂರ್ಣ ತರಗತಿಯನ್ನು ಅಂತ್ಯಗೊಳಿಸುವ ಸೌಲಭ್ಯವನ್ನು ನೀಡಲಾಗಿದೆ.

ಮುಂಬರುವ ದಿನಗಳಲ್ಲಿ ಏಕಕಾಲದಲ್ಲಿ ಒಂದಕ್ಕಿಂತಲೂ ಅಧಿಕ ಶಿಕ್ಷಕರು  ಅಥವಾ ಕಾರ್ಯಕ್ರಮ ಸಂಯೋಜಕರು ಸಂಪೂರ್ಣ ಸಂವಾದವನ್ನು ನಿಯಂತ್ರಿಸುವ ಫೀಚರ್ ಅನ್ನು ಗೂಗಲ್ ನೀಡಲಿದೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.