ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌


Team Udayavani, Jun 2, 2023, 9:00 AM IST

thumb-2

ಕೃತಕ ಬುದ್ಧಿಮತ್ತೆ (ಎಐ)ಯಿಂದ ಹೊಸ ಹೊಸ ತಂತ್ರಜ್ಞಾನಗಳು ಹಾಗೂ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡುತ್ತಿರುವ ಗೂಗಲ್‌ ಇದೀಗ ಪ್ರವಾಹ ಮುನ್ಸೂಚನೆಯನ್ನು ನೀಡಬಲ್ಲ “ಫ್ಲಡ್‌ ಹಬ್‌’ ಸೇವೆಯನ್ನು 80 ದೇಶಗಳಿಗೆ ವಿಸ್ತರಿಸುತ್ತಿದೆ. ಏನಿದು ಫ್ಲಡ್‌ ಹಬ್‌? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮೊದಲು
ಗೂಗಲ್‌ ಕೃತಕ ಬುದ್ಧಿಮತ್ತೆ (ಅಐ) ಆಧಾರಿತ ಪ್ರವಾಹ ಮುನ್ಸೂಚನೆಯನ್ನು ನೀಡಬಲ್ಲ ತನ್ನ “ಫ್ಲಡ್‌ ಹಬ್‌’ ಸೇವೆಯನ್ನು 2018ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಿತು. ಅನಂತರದಲ್ಲಿ ಬಾಂಗ್ಲಾದೇಶದಲ್ಲಿ ಪರಿಚಯಿಸಿದರೆ 2022 ರಲ್ಲಿ ಇತರ 18 ರಾಷ್ಟ್ರಗಳಿಗೆ ಈ ಸೇವೆಯನ್ನು ವಿಸ್ತರಿಸಿತು. ಇದೀಗ ವಿಶ್ವದ ಇನ್ನಿತರ 60 ರಾಷ್ಟ್ರ ಗಳಲ್ಲಿ ಫ್ಲಡ್‌ ಹಬ್‌ ಅನ್ನು ಪರಿಚಯಿಸಲಾಗುವುದು ಎಂದು ಗೂಗಲ್‌ ತಿಳಿಸಿದ್ದು, ಈ ಮೂಲಕ ಒಟ್ಟಾರೆ 80 ದೇಶಗಳಲ್ಲಿ ಫ್ಲಡ್‌ ಹಬ್‌ ಕಾರ್ಯ ನಿರ್ವಹಿಸಲಿದೆ.

ಎಲ್ಲೆಲ್ಲಿ?
ಆಫ್ರಿಕಾ, ದಕ್ಷಿಣ ಪೆಸಿಫಿಕ್‌ ಪ್ರದೇಶ, ಯುರೋಪ್‌, ದಕ್ಷಿಣ ಮತ್ತು ಮಧ್ಯ ಅಮೆರಿಕ ದೇಶಗಳ ಜತೆಗೆ ಪ್ರವಾಹಕ್ಕೆ ತುತ್ತಾಗಿರುವ ಅತೀ ಹೆಚ್ಚು ಶೇಕಡಾವಾರು ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸ ಲಿದೆ. ಜಾಗತಿಕವಾಗಿ 460 ಮಿಲಿಯನ್‌ ಜನಸಂಖ್ಯೆಯನ್ನು ಇದು ಒಳಗೊಳ್ಳಲಿದೆ ಎಂದು ಗೂಗಲ್‌ ತಿಳಿಸಿದೆ.

ಏನಿದು ಫ್ಲಡ್‌ ಹಬ್‌?
ಕೃತಕ ಬುದ್ಧಿಮತ್ತೆ ಹಾಗೂ ಕಂಪ್ಯುಟೇಶನಲ್‌ ಪವರ್‌ ಸಹಾಯದಿಂದ ಫ್ಲಡ್‌ ಹಬ್‌, ಎಲ್ಲಿ, ಯಾವಾಗ ಪ್ರವಾಹ ತಲೆದೋರಲಿದೆ ಎಂದು ಮುನ್ಸೂ ಚನೆ ನೀಡುತ್ತದೆ. ಗೂಗಲ್‌ನ ಪ್ರಕಾರ 7 ದಿನಗಳಿಗೂ ಮುನ್ನವೇ ಇದು ಪ್ರವಾಹ ಮುನ್ಸೂಚನೆ ನೀಡಲಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ ?
ಹವಾಮಾನ ಸಂಸ್ಥೆಗಳು ನೀಡುವ ಹವಾಮಾನ ಮುನ್ಸೂಚನೆ ವರದಿ, ಸ್ಯಾಟಲೈಟ್‌ ಚಿತ್ರಗಳನ್ನು ಆಧರಿಸಿ ಫ್ಲಡ್‌ ಹಬ್‌ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನವು ಎರಡು ರೀತಿಯ ಮಾಡೆಲ್‌ಗ‌ಳನ್ನು ಹೊಂದಿದೆ. ಹೈಡ್ರೋಲಾಜಿಕ್‌ (Hydrologic ) ಮಾಡೆಲ್‌ ನದಿಯಲ್ಲಿ ಹರಿಯುತ್ತಿರುವ ನೀರಿನ ಮಟ್ಟವನ್ನು ಅಂದಾಜಿಸಿದರೆ, ಇನಂಡೇಶನ್‌ (Inundation) ಮಾಡೆಲ್‌ ಯಾವೆಲ್ಲ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಲಿವೆ ಹಾಗೂ ಮುಳುಗಡೆಯ ಪ್ರಮಾಣ ಎಷ್ಟಿರಲಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತದೆ.

ವಿವಿಧ ಸಂಸ್ಥೆಗಳ ಸಹಯೋಗ
ಪ್ರವಾಹಗಳಿಗೆ ಹೆಚ್ಚು ಒಳಪಡುವ ಹಾಗೂ ಇಂಟರ್ನೆಟ್‌, ಸ್ಮಾರ್ಟ್‌ಪೋನ್‌ ನಂತಹ ಸೌಲಭ್ಯಗಳನ್ನು ಹೊಂದದೇ ಇರುವ ಪ್ರದೇಶ ಹಾಗೂ ಸಮುದಾಯಗಳಿಗೂ ಈ ತಂತ್ರಜ್ಞಾನದ ನೆರವು ನೀಡಲು ಗೂಗಲ್‌, ಫೆಡರೇಶನ್‌ ಆಫ್ ರೆಡ್‌ಕ್ರಾಸ್‌ ಮತ್ತು ರೆಡ್‌ ಕ್ರೆಸೆಂಟ್‌ ಸೊಸೈಟಿಸ್‌, ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ಹಾಗೂ ಯೇಲ್‌ ವಿಶ್ವವಿದ್ಯಾನಿಲಯದ ಇನ್‌ಕ್ಲುಶನ್‌ ಎಕನಾಮಿಕ್ಸ್‌ ಟೀಮ್‌ ಸ್ವಯಂಸೇವಕರಿಗೆ ತರಬೇತಿ ನೀಡಿ ಅಂತಹ ಪ್ರದೇಶಗಳಿಗೆ ಮಾಹಿತಿ ದೊರಕುವಂತೆ ಮಾಡಲಿದೆ.

– ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ
– ವಾರಕ್ಕೂ ಮುನ್ನವೇ ನೆರೆಯ ಬಗ್ಗೆ ಮಾಹಿತಿ
– ಭಾರತದಲ್ಲಿನ ಪ್ರಯೋಗ ಯಶಸ್ವಿ
– ವಿಶ್ವದ 80 ದೇಶಗಳಿಗೆ ಸೇವೆ ವಿಸ್ತರಣೆ

ಟಾಪ್ ನ್ಯೂಸ್

Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

1—-sad

Viral News; ಗುಜರಾತ್ ಕಡಲಿನಲ್ಲಿ ಕಾಣಿಸಿಕೊಂಡ ಸಿಂಹದ ಚಿತ್ರ: ಅಸಲಿಯತ್ತೇನು?

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

trMangaluru”14 ಮಿನಿಟ್ಸ್‌ ಮಿರಾಕಲ್‌’ ಯೋಜನೆ: ವಂದೇ ಭಾರತ್‌ ರೈಲಿನ ಸ್ವಚ್ಛತೆ

Mangaluru”14 ಮಿನಿಟ್ಸ್‌ ಮಿರಾಕಲ್‌’ ಯೋಜನೆ: ವಂದೇ ಭಾರತ್‌ ರೈಲಿನ ಸ್ವಚ್ಛತೆ

Udupi ಜಿಲ್ಲಾಡಳಿತ-ಲಾರಿ, ಟೆಂಪೋ ಮಾಲಕರ ಸಂಧಾನ ಸಭೆ ವಿಫ‌ಲ

Udupi ಜಿಲ್ಲಾಡಳಿತ-ಲಾರಿ, ಟೆಂಪೋ ಮಾಲಕರ ಸಂಧಾನ ಸಭೆ ವಿಫ‌ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

instagram

AI News; ಇನ್‌ಸ್ಟಾಗ್ರಾಂನಲ್ಲೂ ಎಐ ಎಡಿಟಿಂಗ್‌

space ai

AI News: ಅನ್ಯಗ್ರಹ ಜೀವಿ ಪತ್ತೆಗೆ ಎಐ ಬಳಕೆ

BMW: ಭಾರತದ ಮಾರುಕಟ್ಟೆಗೆ ಐಎಕ್ಸ್‌1 ಎಲೆಕ್ಟ್ರಿಕ್‌ ಎಸ್‌ಯುವಿ BMW: ಭಾರತದ ಮಾರುಕಟ್ಟೆಗೆ ಐಎಕ್ಸ್‌1 ಎಲೆಕ್ಟ್ರಿಕ್‌ ಎಸ್‌ಯುವಿ

BMW: ಭಾರತದ ಮಾರುಕಟ್ಟೆಗೆ ಐಎಕ್ಸ್‌1 ಎಲೆಕ್ಟ್ರಿಕ್‌ ಎಸ್‌ಯುವಿ

Mangaluru ನವದುರ್ಗಾ ಟಿವಿಎಸ್‌: ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

Mangaluru ನವದುರ್ಗಾ ಟಿವಿಎಸ್‌: ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

LAND AI

AI News: ಒತ್ತುವರಿ ಪತ್ತೆಗೆ ಎಐ ಸಾಥ್‌

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

1—-sad

Viral News; ಗುಜರಾತ್ ಕಡಲಿನಲ್ಲಿ ಕಾಣಿಸಿಕೊಂಡ ಸಿಂಹದ ಚಿತ್ರ: ಅಸಲಿಯತ್ತೇನು?

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.