ನಿಖರ ದಾಳಿ ನಡೆಸಿ ಶತ್ರುನಾಶ ಮಾಡುವ ಆತ್ಮಾಹುತಿ ಡ್ರೋನ್‌!

ಭವಿಷ್ಯದ ಯುದ್ಧಗಳಿಗೆ ರೆಡಿಯಾಗುತ್ತಿದೆ ಸೇನೆ; 10 ಸೆಟ್‌ ಪ್ರಿಸಿಷನ್‌ ಕಿಲ್‌ ಸಿಸ್ಟಂ ಖರೀದಿಗೆ ಚಿಂತನೆ

Team Udayavani, Dec 31, 2021, 4:25 PM IST

ನಿಖರ ದಾಳಿ ನಡೆಸಿ ಶತ್ರುನಾಶ ಮಾಡುವ ಆತ್ಮಾಹುತಿ ಡ್ರೋನ್‌!

ಹೊಸದಿಲ್ಲಿ: ಭವಿಷ್ಯದ ಯುದ್ಧಗಳಿಗೆ ಅಗತ್ಯವಾದ 10 ಸೆಟ್‌ ಮಧ್ಯಮ ವ್ಯಾಪ್ತಿಯ ಪ್ರಿಸಿಷನ್‌ ಕಿಲ್‌ ಸಿಸ್ಟಂ(ಎಂಆರ್‌ಪಿಕೆಎಸ್‌)ಗಳನ್ನು ಖರೀದಿಸಲು ಭಾರತೀಯ ಸೇನೆ ಚಿಂತನೆ ನಡೆಸಿದೆ.

ಈ ಸಿಸ್ಟಂನಲ್ಲಿ 120 ಲಾಯಿಟರಿಂಗ್‌ ಮ್ಯುನಿಷನ್‌ಗಳು (ನಿಖರವಾಗಿ ಗುರಿಯಿಡುವ ಸಲುವಾಗಿ ಅಡ್ಡಾಡುವ ಡ್ರೋನ್‌) ಇರಲಿವೆ.

ಈ ವ್ಯವಸ್ಥೆಯು ಸ್ಥಿರವಾದ ಮತ್ತು ಚಲಿಸುವಂಥ ಗುರಿಗಳನ್ನು ಪತ್ತೆಹಚ್ಚಿ ನಾಶ ಮಾಡಬಲ್ಲಂಥ ಛಾತಿಯನ್ನು ಹೊಂದಿದೆ. ಲಾಯಿಟರಿಂಗ್‌ ಮ್ಯುನೀಷನ್‌ಗಳು ಪರಿಣಾಮಕಾರಿಯಾದ ಮಾನವರಹಿತ ಯುದ್ಧ ವಿಮಾನಗಳಾಗಿವೆ. ದೇಶೀಯವಾಗಿಯೇ ಇದನ್ನು ವಿನ್ಯಾಸಗೊಳಿಸುವ ಸಾಧ್ಯತೆಯಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ 10 ಲಾಂಚರ್‌ಗಳು, 30 ಫಾರ್ವರ್ಡ್‌ ಆಬ್ಸರ್ವೇಷನ್‌ ಸ್ಟೇಷನ್‌ಗಳೂ ಇರಲಿವೆ. ಒಮ್ಮೆ ಉಡಾವಣೆ ಮಾಡಿದೊಡನೆ ಇದರಲ್ಲಿರುವ ಡ್ರೋನ್‌ಗಳು ಗಾಳಿಯಲ್ಲಿ ಸಂಚರಿಸಿ, ತನ್ನ ಗುರಿ ಪತ್ತೆಯಾದೊಡನೆ ಅದರ ಚಿತ್ರವನ್ನು ಭೂಮಿಯಲ್ಲಿರುವ ಆಪರೇಟರ್‌ಗೆ ರವಾನಿಸುತ್ತದೆ. ಈ ಡ್ರೋನ್‌ಗಳು ನಿರ್ದಿಷ್ಟ ಟಾರ್ಗೆಟ್‌ ಸಮೀಪದಲ್ಲೇ ಸುತ್ತುತ್ತಾ, ನಿರ್ದೇಶನ ಬಂದೊಡನೆ ನಿಖರ ದಾಳಿ ಮಾಡಿ ನಾಶಪಡಿಸುವ ಜತೆಗೆ ಸ್ವಯಂ ನಾಶವಾಗುತ್ತವೆ.

ಇದನ್ನೂ ಓದಿ:ವರದಕ್ಷಿಣೆ ಇರುವ ಮದುವೆಗೆ ಹೋಗಲ್ಲ: ನಿತೀಶ್‌ ಕುಮಾರ್‌

ವೈಶಿಷ್ಟ್ಯವೇನು?
– ಯಾವುದೇ ಪ್ರತಿಕೂಲ ವಾತಾವರಣದಲ್ಲೂ, ಹಗಲು-ರಾತ್ರಿ ಕಾರ್ಯನಿರ್ವಹಿಸುವ ಸಾಮರ್ಥ್ಯ.
– ಮರುಭೂಮಿ, ಅತ್ಯಂತ ಎತ್ತರದ ಪ್ರದೇಶ, ಬೆಟ್ಟ-ಗುಡ್ಡಗಳು ಸಹಿತ ಎಲ್ಲ ರೀತಿಯ ಭೂಪ್ರದೇಶಗಳಲ್ಲಿನ ಸ್ಥಿರ ಹಾಗೂ ಚಲಿಸುವ ಟಾರ್ಗೆಟ್‌ ಅನ್ನು ಪತ್ತೆಹಚ್ಚಿ ನಾಶಮಾಡುವುದು.
– ಕಮಾಂಡ್‌ ಕಂಟ್ರೋಲ್‌ ಕಂಪ್ಯೂಟರ್‌, ಸಿಗ್ನಲ್‌ ಸೆಂಟರ್‌, ಕಮಾಂಡ್‌ ಪೋಸ್ಟ್‌ಗಳು, ಶಸ್ತ್ರಾಸ್ತ್ರ ಪತ್ತೆ ರೇಡಾರ್‌, ವಾಯು ರಕ್ಷಣ ವ್ಯವಸ್ಥೆ, ಸಂವಹನ ಕೇಂದ್ರ, ಲಾಜಿಸ್ಟಿಕ್ಸ್‌ ಸ್ಟೋರೇಜ್‌ ಡಿಪೋ ಸಹಿತ ಯಾವುದೇ ಟಾರ್ಗೆಟ್‌ ಅನ್ನೂ ಧ್ವಂಸ ಮಾಡುವ ಸಾಮರ್ಥ್ಯ.
– 40 ಕಿ.ಮೀ. ದೂರದ ಗುರಿ ತಲುಪುವ ಸಾಮರ್ಥ್ಯ.
– ಕನಿಷ್ಠ 15 ವರ್ಷಗಳ ಬಾಳಿಕೆ.

ಏನಿದು ಲಾಯಿಟರಿಂಗ್‌ ಮ್ಯುನೀಷನ್‌?
ಇದನ್ನು ಸುಸೈಡ್‌ ಡ್ರೋನ್‌(ಆತ್ಮಾಹುತಿ ಡ್ರೋನ್‌) ಎಂದೂ ಕರೆಯಲಾಗುತ್ತದೆ. ಇಂಥ ಡ್ರೋನ್‌ನಲ್ಲಿ 8 ಕೆಜಿಯಷ್ಟು ಸಿಡಿತಲೆಗಳನ್ನು ಅಳವಡಿಸಿರಲಾಗುತ್ತದೆ. ಇದು ಸ್ವಲ್ಪ ಹೊತ್ತು ಟಾರ್ಗೆಟ್‌ ಇರುವ ಪ್ರದೇಶದ ಸುತ್ತಲೂ ಸುತ್ತಿ, ನಿಖರವಾಗಿ ಗುರಿಯಿಡಲು ಕಾಯುತ್ತಿರುತ್ತದೆ. ಟಾರ್ಗೆಟ್‌ ಖಚಿತವಾದೊಡನೆ ದಾಳಿಯಿಡುತ್ತದೆ. ಬಳಿಕ ಡ್ರೋನ್‌ ಕೂಡ ನಾಶವಾಗುವ ಕಾರಣಕ್ಕೇ ಅದನ್ನು ಆತ್ಮಾಹುತಿ ಡ್ರೋನ್‌ ಎನ್ನುವುದು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.