ಮತ್ತೆ ಗ್ರಾಹಕ ಸ್ನೇಹಿ ಪ್ಲ್ಯಾನ್ ಗಳನ್ನು ಜಾರಿಗೊಳಿಸಿದ ಜಿಯೋ..!
Team Udayavani, Mar 9, 2021, 11:02 AM IST
ನವ ದೆಹಲಿ : ರಿಲಯನ್ಸ್ ಜಿಯೋ ತನ್ನ ಗ್ರಾಹಕರನ್ನು ಸೆಳೆದುಕೊಳ್ಳಲು ಮೇಲಿಂದ ಮೇಲೆ ಹೊಸ ಗರಾಹಕ ಪ್ರಿಯ ಪ್ಲ್ಯಾನ್ ಗಳು ಜಾರಿಗೊಳಿಸುತ್ತಿದೆ. ಈಗ ಮತ್ತೆ ಹೊಸದಾಗಿ ಕೆಲ ಡೇಟಾ ಪ್ಲಾನ್ಗಳನ್ನ ಪರಿಚಯಿಸಿದೆ. ಈ ಹೊಸ ಪ್ಲ್ಯಾನ್ ಗಳು 22 ರೂಪಾಯಿಯಿಂದ ಆರಂಭವಾಗಿ 152 ರೂಪಾಯಿಗಳವರೆಗೂ ಇವೆ. ಜಿಯೋದ ಈ ಹೊಸ ಪ್ಲ್ಯಾನ್ ಗಳಿಂದ ಗ್ರಾಹಕರಿಗೆ ಡೇಟಾ ಲಾಭ ಸಿಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಜಿಯೋ ಹೊಸ ಪ್ಲ್ಯಾನ್ ಗಳು ಹೇಗಿವೆ..?
22 ರೂ ಜಿಯೋ ಪ್ಲ್ಯಾನ್ : 22 ರೂಪಾಯಿಯ ಈ ಹೊಸ ಪ್ಲ್ಯಾನ್ ನಲ್ಲಿ ಜಿಯೋ(Jio) ಗ್ರಾಹಕರಿಗೆ 4ಜಿ ಹೈ ಸ್ಪೀಡ್ 2 ಜಿಬಿ ಇಂಟರ್ ನೆಟ್ ಸೌಲಭ್ಯ ನೀಡಲಿದೆ. 28 ದಿನಗಳ ವ್ಯಾಲಿಡಿಟಿ ಇದು ಹೊಂದಿರಲಿದ್ದು., ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್ ಸ್ಪೀಡ್ 645 ಕೆಬಿಪಿಎಸ್ಗೆ ಇಳಿಯಲಿದೆ ಎಂದು ಕಂಪೆನಿ ಮಾಹಿತಿ ನಿಡಿದೆ.
ಓದಿ : ವಿ.ಎಸ್. ಪಾರ್ಥಸಾರಥಿ ಮಹೀಂದ್ರಾ ಸಮೂಹದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ..!
52 ರೂ. ಜಿಯೋ ಪ್ಲ್ಯಾನ್ : ಈ ಡೇಟಾ ಪ್ಯಾಕ್ ನ ಬೆಲೆ 52 ರೂಪಾಯಿ ಆಗಿದ್ದು, ಇದರಲ್ಲಿ ಗ್ರಾಹಕರು 6 ಜಿಬಿ 4ಜಿ ಹೈಸ್ಪೀಟ್ ಇಂಟರ್ ನೆಟ್ ಡೇಟಾ ಪಡೆಯಲಿದ್ದಾರೆ. ಡೇಟಾ ಮಿತಿ ಮುಗಿಯುತ್ತಿದ್ದಂತೆಯೇ ಇಂಟರ್ ನೆಟ್ ಸ್ಪೀಡ್ ಗೆ 64 ಕೆಬಿಪಿಎಸ್ ಗೆ ಇಳಿಕೆ ಕಾಣಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಯಾಕ್ ನಲ್ಲಿ ಜಿಯೋ ಅಪ್ಲಿಕೇಶನ್ ಗೆ ಚಂದಾದಾರಿಕೆ ಕೂಡ ಸಿಗಲಿದೆ.
72 ರೂ. ಜಿಯೋ ಪ್ಲ್ಯಾನ್ : 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ 72 ಜಿಬಿ ಹೈಸ್ಪೀಡ್ ಇಂಟರ್ ನೆಟ್ ಡೇಟಾ ಸಿಗಲಿದೆ.
102 ರೂ ಜಿಯೋ ಪ್ಲ್ಯಾನ್ : ಈ ಜಿಯೋ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನಿ 1 ಜಿಬಿ ಹೈಸ್ಪೀಡ್ ಇಂಟರ್ ನೆಟ್ ದೊರೆಯಲಿದೆ.
152 ಜಿಯೋ ಪ್ಲ್ಯಾನ್ : ಈ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ 2 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಅಂದರೆ ಒಟ್ಟು 56 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.
ಓದಿ : ಸಿಡಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಿತ್ತು, ನಾನು ನಿರಪರಾಧಿ: ಕಣ್ಣೀರಿಟ್ಟ ರಮೇಶ್ ಜಾರಕಿಹೊಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್