ಪಾನ್ ಇಂಡಿಯಾ ಸಿನಿಮಾದಂತೆ ಪಾನ್ ಇಂಡಿಯಾ ಮಾತಿಗೆ ಸಾಥ್ ನೀಡುತ್ತಿದೆ ಕೂ ಆಪ್‌ನ MLK ಫೀಚರ್


Team Udayavani, Aug 5, 2022, 3:25 PM IST

Koo App’s MLK feature supports Pan India talk

ಸದ್ಯ ಪಾನ್ ಇಂಡಿಯಾ ಸಿನಿಮಾಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ನಿಮ್ಮ ಮಾತು ಕೂಡ ಪಾನ್ ಇಂಡಿಯಾ ಜನರನ್ನು ತಲುಪುತ್ತದೆ ಎಂದಾದರೆ ಎಷ್ಟು ಚಂದ ಅಲ್ಲವಾ? ಹೌದು, ಅದು ಕೂಡ ಈಗ ಸಾಧ್ಯ.

ಇನ್ನೇನು ನಮ್ಮ ದೇಸಿ ಆಟ ಕಬ್ಬಡಿಯ ರಂಗು ಎಲ್ಲೆಡೆ ಹಬ್ಬಲಿದೆ. ಬೆಂಗಳೂರು ಬುಲ್ಸ್ ನಾಯಕ ಪವನ್ ಕುಮಾರ್ ಸೆಹ್ರಾವತ್ ನಮ್ಮ ರಾಜ್ಯದ ತಂಡವನ್ನು ಪ್ರತಿನಿಧಿಸಿದರೂ ಅವರ ಮಾತೃಭಾಷೆ ಹಿಂದಿ. ಸಾಮಾಜಿಕ ಜಾಲತಾಣದಲ್ಲಿ ಅವರ ಮಾತು ಕನ್ನಡದಲ್ಲಿ ನೋಡಿ ಇಲ್ಲಿನ ಅವರ ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಂಭ್ರಮ. ಕನ್ನಡ ಅಷ್ಟೇ ಅಲ್ಲ ಅವರು ಒಂದೇ ಸಮಯದಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಬೆಂಗಾಲಿ, ಅಸ್ಸಾಮಿ, ಪಂಜಾಬಿ ಮತ್ತು ಇಂಗ್ಲೀಶ್ ನಲ್ಲಿ ಸಂವಹನ ನಡೆಸುತ್ತಿದ್ದಾರೆ.

ಇದು ಸಾಧ್ಯವಾಗಿರುವುದು ಕೂ ವೇದಿಕೆಯ ಒಂದು ವಿಶಿಷ್ಟ ಫೀಚರ್ ಬಹು-ಭಾಷಾ ಕೂ (ಎಂಎಲ್ ಕೆ) ಮೂಲಕ. ಈ ಫೀಚರ್ ನಿಂದಾಗಿ ನಿಮ್ಮ ಬರಹ ಒಂಬತ್ತು ಇತರ ಭಾಷೆಗಳಿಗೆ ನೈಜ-ಸಮಯದ ಮೂಲ ಬರಹಕ್ಕೆ ಶೇ 90ರಷ್ಟು ನಿಖರತೆಯಲ್ಲಿ ಅನುವಾದಗೊಳ್ಳುತ್ತದೆ.

ಹೀಗಾಗಿ ಸೆಹ್ರಾವತ್ ಅವರಿಗೆ ಅಸನ್ಸೋಲ್‌ನಿಂದ ಅಹಮದಾಬಾದ್ ಮತ್ತು ಬಟಿಂಡಾದಿಂದ ಬೆಂಗಳೂರಿನವರೆಗೆ ಅಭಿಮಾನಿಗಳಿದ್ದು, ಎಂಎಲ್ ಕೆ ಫೀಚರ್ ನಿಂದಾಗಿ ಅವರು ತಮ್ಮ ತಮ್ಮ ಭಾಷೆಯಲ್ಲಿಯೇ ಸೆಹ್ರಾವತ್ ಅವರ ಕೂ ಗಳನ್ನೂ ಪಡೆಯುತ್ತಿದ್ದಾರೆ. ಸೆಹ್ರಾವತ್ ಅವರು ಕೇವಲ ಒಂದು ಉದಾಹರಣೆ. ಈ ಎಂಎಲ್ ಕೆ ಫೀಚರ್ ಮೂಲಕ ಅನೇಕರು ವಿವಿಧ ಭಾಷೆಯ ಜನರನ್ನು ತಲುಪುತ್ತಿದ್ದಾರೆ.

ಬಹು-ಭಾಷಾ ಡಿಜಿಟಲ್ ಅಭಿವ್ಯಕ್ತಿ: ಭಾರತದಲ್ಲಿ 467 ಮಿಲಿಯನ್ ಜನರು ವಿವಿಧ ಸಾಮಾಜಿಕ ಮಾಧ್ಯಮ ಬಳಸುತ್ತಿದ್ದು, ದಿನಕ್ಕೆ 2.36 ಗಂಟೆಗಳ ಕಾಲ ವೇದಿಕೆಗಳಲ್ಲಿ ಕಳೆಯುತ್ತಿದ್ದಾರೆ. ಆನ್‌ಲೈನ್ ಸಂಭಾಷಣೆಗಳು ಹೆಚ್ಚಾಗಿ ಇಂಗ್ಲೀಶ್ ನಲ್ಲಿಯೇ ಇರುತ್ತದೆ ಆದರೆ, ಶೇ. 90ರಷ್ಟು ಭಾರತೀಯರು ಸ್ಥಳೀಯ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಹೆಚ್ಚಾಗುತ್ತಿರುವ ಬಹು-ಭಾಷಾ ಸಾಮಾಜಿಕ ಮಾಧ್ಯಮಗಳು ಲಕ್ಷಾಂತರ ಮೊದಲ-ಬಾರಿ ಬಳಕೆದಾರರನ್ನು ಆಕರ್ಷಿಸಿದೆ. ಇದು ಸ್ಥಳೀಯ ಭಾಷೆ ಮಾತನಾಡುವವರನ್ನೂ ಒಳಗೊಂಡಿದೆ. ಇವರು ಈ ಮೊದಲು ಆಂಗ್ಲ ಪ್ರಧಾನವಾಗಿದ್ದ ವೇದಿಕೆಗಳಲ್ಲಿ ಕಳೆದುಹೋಗಿದ್ದೆವು ಎಂಬ ಭಾವವನ್ನು ಹೊಂದಿದ್ದವರು. ಈ ಬಳಕೆದಾರರು ಸಾಮಾಜಿಕ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸಲು, ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸಂವಹನ ಮಾಡಲು ಮತ್ತು ತಮ್ಮದೇ ಭಾಷೆಯಲ್ಲಿ ಅಭಿವ್ಯಕ್ತಿಸುವ ಈಗ ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದಾರೆ. ಜೊತೆಗೆ ಒಂದೇ ರೀತಿ ಆಸಕ್ತಿ ಇರುವ ಬೇರೆ ಬೇರೆ ಭಾಷೆಗಳ ಜನರೊಂದಿಗೆ ತಮ್ಮದೇ ಭಾಷೆಯಲ್ಲಿ ಸಂವಹನ ನಡೆಸಲು ಸಹ ಎದುರು ನೋಡುತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಎಂದರೆ ಅದು  ಎಂಎಲ್ ಕೆ ಆಗಿದೆ. ನೀವು ತುಂಬ ಖುಷಿಯಲ್ಲಿ ಮಾತನಾಡುವ ಭಾಷೆಯಲ್ಲಿಯೇ ದೇಶದಾದ್ಯಂತ ಇರುವ ಜನರೊಂದಿಗೆ ಸಂವಹನ ನಡೆಸಬಹುದಾಗಿದೆ. ನೀವು ಪೋಸ್ಟ್ ಮಾಡಬೇಕೆನ್ನುವ ವಿಷಯವನ್ನು ಕೇವಲ ಒಂದು ಕ್ಲಿಕ್ ಮೂಲಕ ಕೂ ವೇದಿಕೆಯಲ್ಲಿನ ಒಟ್ಟು ಒಂಬತ್ತು ಭಾಷೆಗಳಿಗೆ ಅನುವಾದ ಮಾಡಬಹುದಾಗಿದೆ. ದೃಢವಾದ ಭಾಷಾ ತಂತ್ರಜ್ಞಾನಗಳಿಂದ ಬೆಂಬಲಿತವಾಗಿರುವುದರಿಂದ, ಅನುವಾದವು ಮೂಲ ವಿಷಯಕ್ಕೆ ಹೆಚ್ಚು ಹತ್ತಿರವಿರಲಿದೆ ಹಾಗು ಅದರ ಭಾವಾರ್ಥವನ್ನು ಉಳಿಸಿಕೊಂಡಿರಲಿದೆ.

ಇದನ್ನೂ ಓದಿ:ತಂದೆಯಿಂದಲೇ ಅತ್ಯಾಚಾರ: ಗಂಡು ಮಗುವಿಗೆ ಜನ್ಮ ನೀಡಿದ 8ನೇ ತರಗತಿ ವಿದ್ಯಾರ್ಥಿನಿ

ಬೆಂಗಾಲಿ ಮಾತನಾಡುವವರು ತಮಿಳು, ತೆಲುಗು ಮತ್ತು ಕನ್ನಡದವರೊಂದಿಗೆ ಸಂವಹನ ನಡೆಸಲು ಎಂಎಲ್ ಕೆ ಬಳಸಿಕೊಂಡು ತಮ್ಮ ವಿಷಯವನ್ನು ಅವರ ಭಾಷೆಗೆ  ಭಾಷಾಂತರಿಸಬಹುದಾಗಿದೆ. ಇದರಂತೆ ಇತರೆ ಸ್ಥಳೀಯ ಭಾಷೆಯ ಜನರು ತಾವು ಇಚ್ಚಿಸಿದ ಇತರೆ ಭಾಷೆಗಳ ಜನರೊಂದಿಗೆ ಯಾವುದೇ ಅಡೆತಡೆಗಳಿಲ್ಲದೆ ಮಾತನಾಡಬಹುದು.

ಎಂಎಲ್ ಕೆ ಮೂಲಕ ಶೇ. 30 ರಷ್ಟು ಸಂಭಾಷಣೆಗಳು: ಕೂನಲ್ಲಿನ ಸುಮಾರು ಶೇ. 30 ರಷ್ಟು ಸಂಭಾಷಣೆಗಳು ಎಂಎಲ್ ಕೆ ಮೂಲಕ ನಡೆಯುತ್ತಿದೆ. ಹಲವಾರು ಗಣ್ಯ ವ್ಯಕ್ತಿಗಳು (ಸೆಹ್ರಾವತ್‌ ರಂತಹ) ತಮ್ಮ ಮಾತೃಭಾಷೆಯಲ್ಲಿ ಜನಸಾಮಾನ್ಯರೊಂದಿಗೆ ಸಂವಹನ ನಡೆಸಲು ಮತ್ತು ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಈ ಫೀಚರ್ ಅನ್ನು ಬಳಸುತ್ತಿದ್ದಾರೆ. ಈ ಮೂಲಕ ಸೆಹ್ರಾವತ್ ಅವರು 109.2K ಫಾಲ್ಲೋರ್ಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಹುಭಾಷಾ ಜಗತ್ತಿಗೆ: ಭಾರತದಂತೆಯೇ, ಪ್ರಪಂಚದ ಶೇ. 80 ರಷ್ಟು ಮಂದಿ ಸ್ಥಳೀಯ ಭಾಷೆಯನ್ನೇ ಮಾತನಾಡುತ್ತಾರೆ. ಯುರೋಪಿಯನ್, ಆಫ್ರಿಕನ್ ಅಥವಾ ಪ್ಯಾನ್-ಏಷ್ಯನ್ ಭಾಷೆಗಳನ್ನು ಮಾತನಾಡುವವರ ನಡುವೆ ಯಾವುದೇ ಅಡಚಣೆ ಇಲ್ಲದೆ ಸಂವಹನ ಸಾಧಿಸಲು, ಬಹು ಭಾಷಾ ಜಗತ್ತಿನ ಡಿಜಿಟಲ್ ಒಳಗೊಳ್ಳುವಿಕೆಯನ್ನು ಸಾಧಿಸಲು ಈ ಫೀಚರ್ ನೆರವಾಗಲಿದೆ. ವೈವಿಧ್ಯಮಯ ಸಂಸ್ಕೃತಿ ಮತ್ತು ಭೌಗೋಳಿಕತೆಯ ಜನರು ಒಟ್ಟಿಗೆ ಸೇರುವ, ಅವರ ಮನದಾಳವನ್ನು ಹಂಚಿಕೊಳ್ಳುವ ಮತ್ತು ಅವರ ಪರಂಪರೆಯನ್ನು ಸಂಭ್ರಮಿಸುವ ಸಾಮಾಜಿಕ ಮಾಧ್ಯಮವನ್ನು ಒಂದು ವಾಹಕವನಾಗಿ ಈ ಫೀಚರ್ ಬದಲಿಸಬಹುದಾಗಿದೆ.

ಟಾಪ್ ನ್ಯೂಸ್

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್‌: ಮತ್ತೆ ನಕ್ಸಲರ ಸದ್ದು?

Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್‌: ಮತ್ತೆ ನಕ್ಸಲರ ಸದ್ದು?

Narayan Murthy INFOSYS

Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.