ಸಂಸ್ಕೃತ ಕಲಿಯಬೇಕೆ..? ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಈ ಆ್ಯಪ್..!
Team Udayavani, Apr 13, 2021, 3:42 PM IST
ನವ ದೆಹಲಿ : ಭಾರತ ಸಂಸ್ಕ್ಋತಿಯ ನೆಲೆಬೀಡು. ದೇವನಾಗರಿ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆಯ ಜನನವಾಗಿದ್ದು ಭಾರತದ ಪುಣ್ಯ ವೇದ ಭೂಮಿಯಲ್ಲಿ ಎನ್ನುವ ನಂಬಿಕೆ ಇದೆ. ಸಂಸ್ಕೃತವನ್ನು ಉತ್ತೇಜಿಸುವ ಹಾಗೂ ಬಳಸುವ ಮತ್ತು ಉಳಿಸುವ ಜವಾಬ್ದಾರಿ ಭಾರತದಲ್ಲಿ ಜನಸಿದವರ ಎಲ್ಲರಿಗೂ ಇದೆ.
ಸಂಸ್ಕೃತವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಸಂಸ್ಕೃತ ಭಾಷೆ ಕಲಿಯಲು ಬಯಸುವ ಜನರಿಗೆ ಕೇಂದ್ರವು ಇತ್ತೀಚೆಗೆ ‘ಲಿಟಲ್ ಗುರು’ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ನನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅಭಿವೃದ್ಧಿಪಡಿಸಿದ್ದು, ಸಂಸ್ಕೃತವನ್ನು ಕಲಿಯುವುದಕ್ಕೆ ಸುಲಭಗೊಳಿಸುವ ಮತ್ತು ಮನರಂಜನೆಯನ್ನು ನೀಡುವ ಉದ್ದೇಶವನ್ನು ಈ ಆ್ಯಫ್ ಹೋಂದಿದೆ.
ಬೆಂಗಳೂರು ಮೂಲದ ಗ್ಯಾಮ್ ಆ್ಯಫ್ ಸ್ಪೋರ್ಟ್ಸ್ ವಿಜ್ ಅವರು ಈ ಅಪ್ಲಿಕೇಶನ್ ನನ್ನು ನಿರ್ಮಿಸಿದ್ದಾರೆ ಮತ್ತು ಇದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಐ ಸಿ ಸಿ ಆರ್ ಡಿ.ಜಿ. ದಿನೇಶ್ ಕೆ ಪಟ್ನಾಯಕ್ ಅವರು, “ಲಿಟಲ್ ಗುರು ನಾವು ವಿಶ್ವದಾದ್ಯಂತ ಬೋಧನೆಗೆ ಏನು ಮಾಡಬೇಕೆಂದು ಪ್ರಸ್ತಾಪಿಸಿದ್ದೇವೆ ಎಂಬುದರ ಸುಂದರ ಸಂಕೇತವಾಗಿದೆ. ಈ ಅಪ್ಲಿಕೇಶನ್ ವಿದ್ಯಾರ್ಥಿಗಳು, ಶಿಕ್ಷಕರಿಗೆ ಸಹಾಯ ಮಾಡುತ್ತದೆ. ತಮಗೆ ಬೇಕಾದ ಸಮಯದಲ್ಲಿ ಈ ಅಪ್ಲಿಕೇಶನ್ ನ ಮೂಲಕ ಸಂಸ್ಕೃತವನ್ನು ಕಲಿತುಕೊಳ್ಳಬಹುದಾಗಿದೆ. ಎಂದಿದ್ದಾರೆ.
Sanskrit is a versatile, systematic and phonetically accurate language. Learn it through LittleGuru’s gamified techniques that makes learning easy and fun. You can download Little Guru app on Google Play: https://t.co/XsRGChFC8E and App Store: https://t.co/UypPMVBHTO. pic.twitter.com/AWTr57P4pX
— ICCR (@ICCR_Delhi) April 11, 2021
ಸಂಸ್ಕೃತ ಈಗಾಗಲೇ ವಿಶ್ವಾದ್ಯಂತ ವಿಶ್ವವಿದ್ಯಾಲಗಳಲ್ಲಿ ಕಲಿಸಲಾಗುತ್ತಿದ್ದು, ಭಾರತ ಸರ್ಕಾರ ಬಿಡುಗಡೆಗೊಳಿಸಿದ ಈ ಆ್ಯಪ್ ಸಹಾಯದಿಂದ ಅವರಿಗೆ ಮತ್ತಷ್ಟು ಸಹಾಯವಾಗುತ್ತದೆ ಎಂದು ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ