ನವರಾತ್ರಿ ಅಲಂಕಾರ್


Team Udayavani, Sep 30, 2019, 3:05 AM IST

navaratri

ಒಂಭತ್ತು ದಿನಗಳ ನವರಾತ್ರಿ, ಅದು ಕಳೆಯುತ್ತಿದ್ದಂತೆ ದೀಪಾವಳಿ… ಬಳಿಕ ಕ್ರಿಸ್‌ಮಸ್‌… ನಂತರ ಹೊಸ ವರ್ಷದ ಕೊಡುಗೆ… ಹೀಗೆ ಸಾಲು ಸಾಲು ವಿಶೇಷ ದಿನಗಳು ಬರಲಿವೆ. ಇದರ ಲಾಭ ಪಡೆಯಲು ಆಟೋಮೊಬೈಲ್‌ ಉದ್ಯಮ ಸಜ್ಜಾಗಿದೆ. ನವರಾತ್ರಿ ಸಮಯದಲ್ಲಿ, ಆಟೋಮೊಬೈಲ್‌ ಸಂಸ್ಥೆಗಳು 5 ಕಾರುಗಳ ಬಿಡುಗಡೆಗೆ ಸಿದ್ಧವಾಗಿವೆ.

ಆಟೋ ಇಂಡಸ್ಟ್ರಿ ಪಾಲಿಗೆ ಮುಂದಿನ ಮೂರು ತಿಂಗಳು ಪೂರ್ತಿ ಹಬ್ಬದ ಸಡಗರ. ಹಣಕಾಸು ವರ್ಷವನ್ನು ಏಪ್ರಿಲ್‌ 1ರಿಂದ ಮಾರ್ಚ್‌ ಅಂತ್ಯದವರೆಗೆ ಅಳೆಯುತ್ತೇವಾದರೂ, ಆಟೋಮೊಬೈಲ್‌ ಉದ್ಯಮ, ಡಿಸೆಂಬರ್‌ ಅಂತ್ಯದ ವರ್ಷಾಂತ್ಯವನ್ನೇ ಸಡಗರವಾಗಿ ಆಚರಿಸುತ್ತದೆ. ಅದರಲ್ಲೂ ಈಗ ಒಂಭತ್ತು ದಿನಗಳ ನವರಾತ್ರಿ, ಅದು ಕಳೆಯುತ್ತಿದ್ದಂತೆ ದೀಪಾವಳಿ… ಬಳಿಕ ಕ್ರಿಸ್‌ಮಸ್‌…. ನಂತರ ಹೊಸ ವರ್ಷದ ಕೊಡುಗೆ…

ಹೀಗೆ ಸಾಲು ಸಾಲು ಕೊಡುಗೆಗಳ ಭರಪೂರವೇ ಹರಿದು ಬರುತ್ತದೆ. ದಸರಾ ಹೊತ್ತಿನಲ್ಲೇ ಹಲವಾರು ಕಂಪನಿಗಳು ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿವೆ. ಈಗಾಗಲೇ ಆಗಸ್ಟ್-ಸೆಪ್ಟೆಂಬರ್‌ನಲ್ಲೇ ಕೆಲವೊಂದು ಕಾರುಗಳು ಮಾರುಕಟ್ಟೆಗೆ ಪ್ರವೇಶ ಮಾಡಿದ್ದಾವಾದರೂ, ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ಗೂ ಕೆಲವೊಂದು ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಸ್ಕೋಡಾ ಕೋಡಿಯಾಕ್‌ ಸ್ಕೌಟ್‌: ಎಸ್‌ಯುವಿಗಳ ಸಾಲಿನಲ್ಲಿ ನಿಲ್ಲುವ ಈ ಕಾರು ಐಷಾರಾಮಿ ಕಾರುಗಳ ಸಾಲಿಗೆ ಹೊಂದಿಕೊಳ್ಳುತ್ತದೆ. 2 ಲೀಟರ್‌ ಡೀಸೆಲ್‌ ಎಂಜಿನ್‌ ಹೊಂದಿರುವ ಇದು, 1968 ಸಿಸಿ ಸಾಮರ್ಥ್ಯದ ಕಾರು. ದೆಹಲಿಯಲ್ಲೇ ಎಕ್ಸ್ ಶೋ ರೂಂ ದರ 35 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಪ್ರತಿ ಲೀ.ಗೆ 16.25 ಕಿ.ಮೀ. ನೀಡುತ್ತದೆ ಎಂಬುದು ಕಂಪನಿಯ ಹೇಳಿಕೆ.

ಹುಂಡೈ ಎಲಾಂಟ್ರಾ 2019: ಸೆಡಾನ್‌ ಸಾಲಿಗೆ ಸೇರುವ ಈ ಕಾರು, 2018ರಲ್ಲೇ ಬಿಡುಗಡೆಯಾಗಿತ್ತು. ಈಗ 2019ರಲ್ಲಿ ಮತ್ತೆ ಹೊಸ ವಿನ್ಯಾಸ, ಹೊಸ ಫೀಚರ್‌ಗಳ ಜೊತೆಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದರ ದರ 13.82 ಲಕ್ಷ ದಿಂದ 20 ಲಕ್ಷ ರೂ.ಗಳ ವರೆಗೆ ಇರಲಿದೆ. ಈಗಾಗಲೇ ಬುಕ್ಕಿಂಗ್‌ ಓಪನ್‌ ಆಗಿದೆ.

ರಿನಾಲ್ಟ್ ಕ್ವಿಡ್‌ 2019: ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಕಡಿಮೆ ದರದ ಹ್ಯಾಚ್‌ಬ್ಯಾಕ್‌ ಎನ್ನಿಸಿಕೊಂಡಿರುವ ಈ ರಿನಾಲ್ಟ್ ಕ್ವಿಡ್‌ ಕಾರು ಅಕ್ಟೋಬರ್‌ ಮೊದಲ ವಾರದಲ್ಲಿ ಒಂದಷ್ಟು ಪರಿಷ್ಕರಣೆಯೊಂದಿಗೆ ಮತ್ತೆ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಕಾರಿನ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸವನ್ನು ಇನ್ನಷ್ಟು ಸುಧಾರಿಸಲಾಗಿದೆ. 0.8 ಅಥವಾ 1 ಲೀ. ಪೆಟ್ರೋಲ್‌ ಎಂಜಿನ್‌ ಎಂದಿನಂತೆ ಇರಲಿದ್ದು, ಬಿಎಸ್‌6ಗೆ ಅಪ್‌ಗ್ರೇಡ್‌ ಆಗಿ ಬರುವ ಸಾಧ್ಯತೆ ಇದೆ. ಹಾಗೆಯೇ ರಿನಾಲ್ಟ್ ಕ್ವಿಡ್‌ನ‌ ಎಲೆಕ್ಟ್ರಿಕ್‌ ವರ್ಷನ್‌ ನವೆಂಬರ್‌ 1ರಂದು ಅನಾವರಣಗೊಳ್ಳುವ ಸಾಧ್ಯತೆ ಇದೆ. ಆದರೆ, ಮಾರುಕಟ್ಟೆಗೆ ಪ್ರವೇಶಿಸಲು 2022ರ ತನಕ ಕಾಯಬೇಕು.

ಒಟಿಒ- ಹೊಸ ಮಾದರಿ ಇಎಂಐ: “ಆಗಾಗ ಕಾರು ಬದಲಾವಣೆ ಮಾಡಲೇನೋ ಆಸೆ. ಆದರೆ, ಅಯ್ಯೋ ಇಎಂಐ ಹೆಚ್ಚಾಯ್ತು’ ಎಂದು ಕೊರಗುವವರಿಗೊಂದು ಖುಷಿಯ ವಿಚಾರ ಇದು. ಬೆಂಗಳೂರು ಮೂಲದ ಸ್ಟಾರ್ಟ್‌ ಅಪ್‌ ಕಂಪನಿ ಒಟಿಒ ಕ್ಯಾಪಿಟಲ್, ಕಾರು ಮತ್ತು ಬೈಕುಗಳನ್ನು ಲೀಸ್‌ ಮೇಲೆ ಖರೀದಿಸಲು ಇಎಂಇ ಸೌಲಭ್ಯ ನೀಡಲಿದೆ. ಬ್ಯಾಂಕುಗಳಲ್ಲಿ ಸಿಗುವ ಇಎಂಐಗಳಿಗಿಂತ ಶೇ.30ರಷ್ಟು ಕಡಿಮೆ ಎನ್ನುವುದು ಕಂಪನಿಯ ಭರವಸೆ.

ಈಗಾಗಲೇ ಕಾರುಗಳಿಗೆ ಈ ಸೌಲಭ್ಯ ನೀಡಲಾಗುತ್ತಿದ್ದು, ಇತ್ತೀಚೆಗಷ್ಟೇ ಬೈಕುಗಳಿಗೂ ಇಎಂಐ ಸೌಲಭ್ಯವನ್ನು ವಿಸ್ತರಿಸಿದೆ. ಕಾರುಗಳ ವಿಚಾರದಲ್ಲಿ ಹುಂಡೈ, ಜೀಪ್‌, ಸುಜುಕಿ, ಹೊಂಡಾ, ಟಾಟಾ ಮೋಟಾರ್, ಸ್ಕೋಡಾ ಕಂಪನಿಗಳ ಜತೆಗೆ ಪಾರ್ಟ್‌ನರ್‌ಶಿಪ್‌ ಮಾಡಿಕೊಂಡಿದೆ. 30 ನಿಮಿಷದಲ್ಲಿ ಸಾಲಕ್ಕೆ ಅನುಮೋದನೆ ಸಿಕ್ಕಿ, 24 ಗಂಟೆಗಳಲ್ಲಿ ವಾಹನವನ್ನು ಮನೆಗೆ ಕೊಂಡೊಯ್ಯಬಹುದು ಎಂದು ಕಂಪನಿ ಹೇಳುತ್ತಿದೆ. ಕಾರುಗಳಿಗೆ 5 ವರ್ಷದವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಬೈಕುಗಳಿಗಾದರೆ 3 ವರ್ಷದವರೆಗೆ ಸಾಲ ಪಡೆಯಬಹುದು.

ಟಾಟಾ ಟಿಯಾಗೋ 2019: ಮಾರುಕಟ್ಟೆ ಪ್ರವೇಶಿಸಿ ಮೂರು ವರ್ಷ ಕಳೆದಿರುವ ಟಾಟಾ ಟಿಯಾಗೋ ಕಾರು, ಇದೇ ನವೆಂಬರ್‌ನಲ್ಲಿ ಮತ್ತಷ್ಟು ಅಪ್ಡೇಟ್‌ಗಳನ್ನು ಹೊತ್ತು ಮಾರುಕಟ್ಟೆಗೆ ಬರಲಿದೆ. ಎಂಜಿನ್‌ ಸಾಮರ್ಥ್ಯ ಹಳತರಷ್ಟೇ ಇದ್ದರೂ, ಕಾರಿನ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ. ಡಿಜಿಟಲ್‌ ಟಚ್‌ ಸ್ಕ್ರೀನ್‌, ರಿಮೋಟ್‌ ಕಂಟ್ರೋಲ್‌ ಮಿರರ್‌ ಅಡ್ಜಸ್ಟ್ಮೆಂಟ್‌ ಫೀಚರ್‌ ಬರಲಿದೆ. ಬೆಲೆ 4.5- 6.75 ಲಕ್ಷ ರೂ.ಗಳ ತನಕ ಇರಲಿದೆ.

ಮಾರುತಿ ಎಸ್‌-ಪ್ರಸ್ಸೋ: ಇತ್ತೀಚಿಗಷ್ಟೇ ಈ ಕಾರಿನ ಮಾಡೆಲ್‌ನ ಫೋಟೋ ಬಿಡುಗಡೆಯಾಗಿತ್ತು. ಈ ಕಾರು ಸದ್ಯ ಸೆ.30ಕ್ಕೆ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಮಾರುತಿ ಕಂಪನಿಯ ಈ ಕಾರು, ಆಲ್ಟೋ ಮತ್ತು ವ್ಯಾಗನಾರ್‌ನ ಸಮ್ಮಿಲನದಂತಿರುತ್ತದೆ ಎಂದು ಹೇಳಲಾಗುತ್ತಿದೆ. ಬೆಲೆ 4 ಲಕ್ಷ ರೂ.ಗಳಿಂದ ಆರಂಭ ವಾಗಲಿದೆ. ಕಾರನ್ನು, ಮಾರುತಿ ಸಂಸ್ಥೆ ತನ್ನ ಅರೆನಾ ಡೀಲರ್‌ ಶಿಪ್‌ ಮೂಲಕ ಮಾರಾಟ ಮಾಡಲಿದೆ.

* ಸೋಮಶೇಖರ ಸಿ. ಜೆ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.