ಐಫೋನ್‍ ಗೂ ಇಎಂಐ -ಗೋಲ್ಗಪ್ಪಕ್ಕೂ ಇಎಂಐ! ‘ಪೋಸ್ಟ್ ಪೇ’: ಸಾಲ ನೀಡುವ ಡಿಜಿಟಲ್‍ ಆ್ಯಪ್‍


Team Udayavani, Oct 10, 2021, 10:06 AM IST

ಐಫೋನ್‍ ಗೂ ಇಎಂಐ -ಗೋಲ್ಗಪ್ಪಕ್ಕೂ ಇಎಂಐ! ‘ಪೋಸ್ಟ್ ಪೇ’: ಸಾಲ ನೀಡುವ ಡಿಜಿಟಲ್‍ ಆ್ಯಪ್‍

ನವದೆಹಲಿ: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಕಂಪನಿಗಳಲ್ಲಿ ಒಂದಾದ ಭಾರತ್‌ ಪೇ, ತನ್ನ  ಹೊಸ ಉತ್ಪನ್ನ ‘ಪೋಸ್ಟ್‌ಪೇ’ ಪರಿಚಯಿಸುವ ಮೂಲಕ ‘ಈಗ ಖರೀದಿಸಿ ನಂತರ ಪಾವತಿಸಿ ಬಿಎನ್‍ಪಿಎಲ್‍  (ಬೈ ನೌ ಪೇ ಲೇಟರ್‍) ವಿಭಾಗಕ್ಕೆ ಪ್ರವೇಶ ಪಡೆದಿದೆ.

ಪೋಸ್ಟ್ ಪೇ, ಗ್ರಾಹಕರಿಗೆ ಈಗ ಖರೀದಿಸಲು ಮತ್ತು ನಂತರ, ಪಾವತಿಸಲು ಸಾಲ ನೀಡುತ್ತದೆ. ಗ್ರಾಹಕರು ಪೋಸ್ಟ್‌ಪೇ ಆಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಮತ್ತು ಬಡ್ಡಿ ರಹಿತ ಕ್ರೆಡಿಟ್ ಮಿತಿಯನ್ನು ರೂ. 10 ಲಕ್ಷದವರೆಗೂ ನೀಡಿದೆ.

ಈ ಡಿಜಿಟಲ್ ಉತ್ಪನ್ನವು ಗ್ರಾಹಕರಿಗೆ ಆಫ್‌ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡಲು ಮತ್ತು ಇಎಂಐ ಗಳ ಮೂಲಕ ಸುಲಭವಾಗಿ ಮರುಪಾವತಿ ಮಾಡಲು ಅವಕಾಶ ಒದಗಿಸುತ್ತದೆ. ಗ್ರಾಹಕರು ಪೋಸ್ಟ್‌ಪೇ ಆಪ್ ಅನ್ನು ತೆರೆದು, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ವ್ಯಾಪಾರ ಮಳಿಗೆಗಳಲ್ಲಿ ಪೋಸ್ಟ್‌ಪೇ ಕ್ರೆಡಿಟ್ ಬಳಸಿ ಪಾವತಿಸಬಹುದು. ಲಕ್ಷಾಂತರ ಆಫ್‌ಲೈನ್ ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ ಫಾರ್ಮ್‌ಗಳಲ್ಲಿ ಸ್ವೀಕರಿಸಲ್ಪಡುವ ಪೋಸ್ಟ್‌ಪೇ ಕಾರ್ಡ್ ಮೂಲಕ ಪಾವತಿಸಲು ಅವರಿಗೆ ಅವಕಾಶವಿದೆ. ಗ್ರಾಹಕರು ತಮ್ಮ ಮೊದಲ ಮತ್ತು ನಿರ್ದಿಷ್ಟ ಮೈಲಿಗಲ್ಲು ವಹಿವಾಟುಗಳಲ್ಲಿ ಕ್ಯಾಶ್‌ ಬ್ಯಾಕ್‌ಗಳನ್ನು ಪಡೆಯಬಹುದು.

ಇದನ್ನೂ ಓದಿ:ಡ್ರೀಮ್‌ 11 ಆ್ಯಪ್‌ ವಿರುದ್ಧ ಎಫ್ಐಆರ್‌

ಡಿಜಿಟಲ್ ಪಾವತಿ ವಿಧಾನಗಳನ್ನು ಚೆನ್ನಾಗಿ ತಿಳಿದಿರುವ ಹೊಸ ಪೀಳಿಗೆಯ ಗ್ರಾಹಕರಿಗಾಗಿ ಪೋಸ್ಟ್‌ಪೇಯನ್ನು ವಿನ್ಯಾಸಗೊಳಿಸಲಾಗಿದೆ. ಪೋಸ್ಟ್‌ಪೇ ಗ್ರಾಹಕರು ಮಾಡಿದ ಎಲ್ಲಾ ವಹಿವಾಟುಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಮರುಪಾವತಿಗಾಗಿ ಒಂದು ಬಿಲ್ ಅನ್ನು ತಯಾರಿಸುತ್ತದೆ. ಅಲ್ಲದೆ, ಪೋಸ್ಟ್‌ಪೇ ಆ್ಯಪ್ ಅಥವಾ ಪೋಸ್ಟ್‌ಪೇ ಕಾರ್ಡ್ ಮೂಲಕ ಪಾವತಿಗಳ ಮೇಲೆ ಯಾವುದೇ ವಾರ್ಷಿಕ ಶುಲ್ಕ ಅಥವಾ ವಹಿವಾಟು ಶುಲ್ಕಗಳಿರುವುದಿಲ್ಲ.

ಪೋಸ್ಟ್‌ಪೇ ಈ ವರ್ಷ ದುಬೈನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ನ ಜಾಗತಿಕ ಪ್ರಾಯೋಜಕರಾಗಿದ್ದಾರೆ. ಎಲ್ಲಾ ವಹಿವಾಟು ನಡೆಸುವ ಗ್ರಾಹಕರು ಅ. 17 ರಿಂದ 14 ನವೆಂಬರ್ ವರೆಗೆ ನಡೆಯಲಿರುವ ವಿಶ್ವಕಪ್ ಪಂದ್ಯಗಳಿಗೆ 3,500 ಉಚಿತ ಪಾಸ್‌ಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಅ. 24 ರಂದು ಭಾರತ vs ಪಾಕಿಸ್ತಾನ ಪಂದ್ಯದ ಪಾಸ್‌ಗಳನ್ನು ಪುರಸ್ಕರಿಸುವ ಏಕೈಕ ಅಪ್ಲಿಕೇಶನ್ ಪೋಸ್ಟ್‌ಪೇ ಮಾತ್ರ.

ಭಾರತ್ ಪೇ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್ ಮಾತನಾಡಿ, ಪೋಸ್ಟ್ ಪೆ ಮೂಲಕ ನಮ್ಮ ಗುರಿಯೇನೆಂದರೆ ದೈನಂದಿನ ಖರೀದಿಗಳಿಗೂ ಇಎಂಐ ದೊರಕುವಂತೆ ಮಾಡುವುದು. ಇಎಂಐ ಮೂಲಕ ಐಫೋನ್‍ ಹೇಗೋ ಹಾಗೆ ಇಎಂಐ ಮೂಲಕ ಗೋಲ್ಗಪ್ಪ ಎಂಬುದು ನಮ್ಮ ಧ್ಯೇಯವಾಕ್ಯವಾಗಿದೆ ಎಂದರು.

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.