ಗೆಲಾಕ್ಸಿ ಎಂ32 5G ಸ್ಯಾಮ್‍ಸಂಗ್‍ನಲ್ಲಿ ಮಧ್ಯಮ ವರ್ಗದ ಇನ್ನೊಂದು ಆಯ್ಕೆ


Team Udayavani, Sep 28, 2021, 5:30 PM IST

ಗೆಲಾಕ್ಸಿ ಎಂ32, ಸ್ಯಾಮ್‍ಸಂಗ್‍ನಲ್ಲಿ ಮಧ್ಯಮ ವರ್ಗದ ಇನ್ನೊಂದು ಆಯ್ಕೆ

ಮೊಬೈಲ್‍ ಫೋನ್‍ ಬ್ರಾಂಡ್‍ ಗಳಿಗೆ ಭಾರತ ದೊಡ್ಡ ಹಾಗೂ ಪ್ರಮುಖ ಮಾರುಕಟ್ಟೆ. ಹೀಗಾಗಿಯೇ ಪ್ರಮುಖ ಮೊಬೈಲ್‍ ಫೋನ್‍ ತಯಾರಿಕಾ ಕಂಪೆನಿಗಳು ಭಾರತದಲ್ಲಿ ತಮ್ಮ ಹೊಸ ಹೊಸ ಮಾಡೆಲ್‍ಗಳನ್ನು ಹೊರ ತರುತ್ತಲೇ ಇವೆ. ಅದರಲ್ಲೂ ಸ್ಯಾಮ್‍ ಸಂಗ್‍ ಕಂಪೆನಿಯಂತೂ ಒಂದರ ಹಿಂದೆ ಒಂದರಂತೆ ತನ್ನ ಹೊಸ ಮೊಬೈಲ್‍ಗಳನ್ನು ಬಿಡುಗಡೆ ಮಾಡುತ್ತಿದೆ. ಅದು ಇತ್ತೀಚಿಗೆ ಹೊರ ತಂದಿರುವ ಹೊಸ ಮಾಡೆಲ್‍ ಗೆಲಾಕ್ಸಿ ಎಂ32 5ಜಿ.

ಇದರ ದರ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 20,999 ರೂ. ಹಾಗೂ 8ಜಿಬಿ/128 ಜಿಬಿ ಮಾದರಿಗೆ 22,999 ರೂ. ಇದೆ.

ಈ ಮುಂಚೆ ಕಳೆದ ಜುಲೈನಲ್ಲಿ ಗೆಲಾಕ್ಸಿ ಎಂ32 ಮೊಬೈಲ್‍ ಹೊರತರಲಾಗಿತ್ತು. ಅದರಲ್ಲಿ 5ಜಿ ಸವಲತ್ತು ಇರಲಿಲ್ಲ. ಹಾಗಾಗಿ 5ಜಿ ಸೌಲಭ್ಯ ಅಳವಡಿಸಿ ಈ ಮೊಬೈಲ್‍ ಹೊರತರಲಾಗಿದೆ. ಹೆಸರು ಮಾತ್ರ ಹೋಲಿಕೆ ಇದೆ. ಆದರೆ ಹೊರ ವಿನ್ಯಾಸ ಮತ್ತು ಸ್ಪೆಸಿಫಿಕೇಷನ್‍ ಗಳಲ್ಲಿ ಬಹಳ ವ್ಯತ್ಯಾಸ ಇದೆ. ಹೀಗಾಗಿ ಇದಕ್ಕೆ ಹೊಸ ಹೆಸರು ಕೊಟ್ಟಿದ್ದರೂ ಆಗುತ್ತಿತ್ತು!

ಪ್ರೊಸೆಸರ್: ಇದರಲ್ಲಿ ಮೀಡಿಯಾಟೆಕ್‍ ಡೈಮೆನ್ಸಿಟಿ 720 ಎಂಟು ಕೋರ್ ಗಳ ಪ್ರೊಸೆಸರ್ ನೀಡಲಾಗಿದೆ. ಈಗ ಮೊಬೈಲ್‍ ಕಂಪೆನಿಗಳು ಮಧ್ಯಮ ದರ್ಜೆಯ ಫೋನ್‍ಗಳಲ್ಲಿ 5ಜಿ ಗಾಗಿ ಹೆಚ್ಚಾಗಿ ಮೀಡಿಯಾಟೆಕ್‍ ಪ್ರೊಸೆಸರ್ ಅವಲಂಬಿಸಿವೆ. ಸ್ನಾಪ್‍ ಡ್ರಾಗನ್‍ ಗೆ ಹೋಲಿಸಿದರೆ ಮೀಡಿಯಾಟೆಕ್‍ ಪ್ರೊಸೆಸರ್ ದರ ಕಡಿಮೆ ಎಂಬ ಕಾರಣಕ್ಕೆ. ಈ ಪ್ರೊಸೆಸರ್ 5ಜಿಯ 12 ಬ್ಯಾಂಡ್‍ ಗಳನ್ನು ಬೆಂಬಲಿಸುತ್ತದೆ. ಹೀಗಾಗಿ ವಿವಿಧ ನೆಟ್‍ ವರ್ಕ್ ಕಂಪೆನಿಗಳು ಬೇರೆ ಬೇರೆ ಬ್ಯಾಂಡ್‍ ನಲ್ಲಿ ತಮ್ಮ 5ಜಿ ಸವಲತ್ತು ನೀಡಿದರೂ ಇದು ಕೆಲಸ ಮಾಡುತ್ತದೆ. ಹೀಗಾಗಿ ನೈಜ 5ಜಿ ಅನುಭವ ದೊರಕುತ್ತದೆ ಎಂಬುದು ಕಂಪೆನಿಯ ಹೇಳಿಕೆ. ಸದ್ಯಕ್ಕೆ ಭಾರತದಲ್ಲಿ 5ಜಿ ಜಾರಿಗೆ ಬಂದಿಲ್ಲ. 5ಜಿ ಹೊರತುಪಡಿಸಿದರೂ, ಇದೊಂದು ಮಧ್ಯಮ ದರ್ಜೆಯಲ್ಲಿ ವೇಗದ ಪ್ರೊಸೆಸರ್ ಎನ್ನಬಹುದು. ಹಾಗಾಗಿ ಮೊಬೈಲ್‍ ಫೋನ್‍ ಅಡೆತಡೆಯಿಲ್ಲದೆ ಕೆಲಸ ನಿರ್ವಹಿಸುತ್ತದೆ. 2 ವರ್ಷದವರೆಗೆ ಇದಕ್ಕೆ ಆಂಡ್ರಾಯ್ಡ್ ಅಪ್ ಡೇಟ್‍ ಗಳನ್ನು ನೀಡುವುದಾಗಿ ಕಂಪೆನಿ ತಿಳಿಸಿದೆ. ಇದರಲ್ಲಿ ಈಗ ಆಂಡ್ರಾಯ್ಡ್ 11 ಆವೃತ್ತಿ ಇದ್ದು, ಇದಕ್ಕೆ ಸ್ಯಾಮ್ಸಂಗ್‍ ನ ಒನ್‍ ಯೂಐ ಅಳವಡಿಸಲಾಗಿದೆ. ಎರಡು ವರ್ಷ ಅಪ್‍ ಡೇಟ್‍ ನೀಡಿದರೆ ಆಂಡ್ರಾಯ್ಡ್ ಇನ್ನೂ ಎರಡರಿಂದ ಮೂರು ಆವೃತ್ತಿಗಳು ಈ ಫೋನ್‍ ಗೆ ದೊರಕುತ್ತವೆ.

ಪರದೆ ಮತ್ತು ವಿನ್ಯಾಸ: ಇದರಲ್ಲಿ 6.5 ಇಂಚಿನ ಟಿಎಫ್‍ಟಿ ಪರದೆ ಇದೆ. ಪರದೆ ಫುಲ್‍ ಎಚ್‍ಡಿ ಪ್ಲಸ್‍ ಅಲ್ಲ. ಎಚ್‍ಡಿ ಪ್ಲಸ್‍ ಮಾತ್ರ (720*1600). ಪರದೆಯ ರಕ್ಷಣೆಗೆ ಗೊರಿಲ್ಲಾ ಗ್ಲಾಸ್‍5 ಪದರ ಇದೆ. ಸ್ಯಾಮ್‍ ಸಂಗ್‍ ಫೋನ್‍ಗಳಲ್ಲಿ ಸಾಮಾನ್ಯವಾಗಿರುವ ಅಮೋಲೆಡ್‍ ಪರದೆ ಇದರಲ್ಲಿಲ್ಲ. ಆದರೂ ಡಿಸ್‍ಪ್ಲೇ ಗುಣಮಟ್ಟ ಚೆನ್ನಾಗಿದೆ. ಪರದೆಯ ಮೇಲ್ಭಾಗ ಮುಂಬದಿ ಕ್ಯಾಮರಾಕ್ಕೆ ವಾಟರ್‍ ಡ್ರಾಪ್‍ ವಿನ್ಯಾಸ ನೀಡಲಾಗಿದೆ. ಮೊಬೈಲ್‍ ನ ಬಂಪರ್‍ ಮತ್ತು ಹಿಂಬದಿ ದೇಹವನ್ನು ಪ್ಲಾಸ್ಟಿಕ್‍ನಿಂದ ಮಾಡಲಾಗಿದೆ. ಹಿಂಬದಿ ವಿನ್ಯಾಸ ಹಿಂದಿನ ಗೆಲಾಕ್ಸಿ ಎ52 ಮೊಬೈಲ್‍ ಮಾದರಿಯಲ್ಲೇ ಇದೆ. ಅದೇ ರೀತಿಯ ಪ್ಲಾಸ್ಟಿಕ್‍ ಅನ್ನು ಬಳಸಲಾಗಿದೆ. ಹಿಂಬದಿ ವಿನ್ಯಾಸ ಬೇರೆ ಬ್ರಾಂಡ್‍ ಗಳಿಗಿಂತ ವಿಭಿನ್ನವಾಗಿದ್ದು, ಗಮನ ಸೆಳೆಯುತ್ತದೆ. ಸ್ಲಿಮ್‍ ಕೂಡ ದೆ. ಮೊಬೈಲ್‍ 202 ಗ್ರಾಂ ತೂಕವಿದೆ. ಕಪ್ಪು ಮತ್ತು ಆಕಾಶ ನೀಲಿ ಬಣ್ಣದಲ್ಲಿ ದೊರಕುತ್ತದೆ.

ಕ್ಯಾಮರಾ: ನಾಲ್ಕು ಕ್ಯಾಮರಾಗಳಿವೆ. 48 ಮೆ.ಪಿ. ಮುಖ್ಯ ಕ್ಯಾಮರಾ, 8 ಮೆ.ಪಿ. ಅಲ್ಟ್ರಾವೈಡ್‍, 5 ಮೆ.ಪಿ. ಡೆಪ್ತ್ ಹಾಗೂ 2 ಮೆ.ಪಿ. ಮ್ಯಾಕ್ರೋ ಕ್ಯಾಮರಾ ಇದೆ. ಮುಂಬದಿಗೆ 13 ಮೆ.ಪಿ. ಕ್ಯಾಮರಾ ನೀಡಲಾಗಿದೆ. ಸಾಮಾನ್ಯವಾಗಿ ಸ್ಯಾಮ್ಸಂಗ್‍ ಫೋನುಗಳು ಕ್ಯಾಮರಾ ವಿಷಯದಲ್ಲಿ ಅಸಮಾಧಾನವನ್ನೇನೂ ಉಂಟು ಮಾಡುವುದಿಲ್ಲ. ತನ್ನದು ನೈಜ 48 ಮೆ.ಪಿ. ಕ್ಯಾಮರಾ ಎಂದು ಸ್ಯಾಮ್‍ ಸಂಗ್‍ ಹೇಳಿಕೊಳ್ಳುತ್ತದೆ. ಹಾಗೆಯೇ ಇದರಲ್ಲೂ ಕ್ಯಾಮರಾ ಅದರ ದರಪಟ್ಟಿಯಲ್ಲಿ ಉತ್ತಮವಾದ ಫಲಿತಾಂಶವನ್ನೇ ನೀಡುತ್ತದೆ. 13 ಮೆ.ಪಿ.ನ ಮುಂಬದಿ ಸೆಲ್ಫಿ ಕ್ಯಾಮರಾ ಕೂಡ ಪರವಾಗಿಲ್ಲ.

ಬ್ಯಾಟರಿ: 5000 ಎಂಎಎಚ್‍ ನ ಭರ್ಜರಿ ಬ್ಯಾಟರಿ ಇದೆ. ಟೈಪ್‍ ಸಿ ಟೈಪ್‍ 15 ವ್ಯಾಟ್ಸ್ ವೇಗದ ಚಾರ್ಜರ್ ನೀಡಲಾಗಿದೆ. ಚಾರ್ಜರ್ ವಿಷಯದಲ್ಲಿ ಸ್ಯಾಮ್‍ ಸಂಗ್‍ ಕೊಂಚ ಉದಾರತೆ ತೋರಬೇಕಿದೆ. ಅದರ ಪ್ರತಿಸ್ಪರ್ಧಿ ಕಂಪೆನಿಗಳು ಈ ದರಕ್ಕೆ 33 ವ್ಯಾಟ್ಸ್ ವೇಗದ ಚಾರ್ಜರ್ ನೀಡುತ್ತಿವೆ. 15 ವ್ಯಾಟ್ಸ್ ಚಾರ್ಜರ್ 5000 ಎಂಎಎಚ್‍ ಬ್ಯಾಟರಿಯನ್ನು ಚಾರ್ಜ್‍ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಒಮ್ಮೆ ಪೂರ್ತಿ ಚಾರ್ಜ್‍ ಮಾಡಿದರೆ ಸಾಧಾರಣ ಬಳಕೆಗೆ ಒಂದೂವರೆಯಿಂದ ಎರಡು ದಿನ ಬ್ಯಾಟರಿ ಬಾಳಿಕೆ ಬರುತ್ತದೆ.

ಒಟ್ಟಾರೆ ಈ ಫೋನು ಸ್ಯಾಮ್‍ ಸಂಗ್‍ ಪ್ರಿಯರಿಗೆ ದರಕ್ಕೆ ತಕ್ಕ ಮೌಲ್ಯ ನೀಡುತ್ತದೆ. ಅದರ ಪ್ರೀಮಿಯಂ ವಿನ್ಯಾಸ, 5ಜಿ ಸವಲತ್ತು, ಕ್ಯಾಮರಾ, ಬ್ಯಾಟರಿ ವಿಭಾಗಗಳ ಕಾರ್ಯ ನಿರ್ವಹಣೆ ತೃಪ್ತಿದಾಯಕವಾಗಿದೆ. 33 ವ್ಯಾಟ್ಸ್ ವೇಗದ ಚಾರ್ಜರ್, ಮೊಬೈಲ್‍ ಜೊತೆಗೆ ಇತರ ಕಂಪೆನಿಗಳಂತೆ ಸಿಲಿಕಾನ್‍ ಕೇಸ್‍, ಪರದೆ ರಕ್ಷಕ ಗಾರ್ಡ್‍ ಅನ್ನು ಸ್ಯಾಮ್‍ ಸಂಗ್‍ ನೀಡಬೇಕಿತ್ತು.

-ಕೆ.ಎಸ್‍. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.