ಅಡುಗೆ ಮನೆಗೆ ಲಗ್ಗೆಯಿಟ್ಟ ಸ್ಮಾರ್ಟ್ ಪಾಟ್


ಶ್ರೀರಾಜ್ ವಕ್ವಾಡಿ, May 21, 2021, 7:11 PM IST

The smart appliances on this list, big and small, connect to voice … 20 of the Most Clever Smart Kitchen Appliances You Can Buy Online.

ಗೃಹಿಣಿಯರು ತಮ್ಮ ನಿತ್ಯದ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲಿಯೇ ಕಳೆಯುತ್ತಾರೆ. ಹಿಂದೆಲ್ಲಾ ಯಾವುದೇ ಮೆಷಿನರಿಗಳು ಇಲ್ಲದೇ ಒಲೆಯ ಮುಂದೆ ಹೊಗೆ ಎಳೆದುಕೊಂಡು ಕಷ್ಟಪಡಬೇಕಿತ್ತು. ಈಗೀಗ ಪ್ರತಿಯೊಂದು ಕ್ಷೇತ್ರಕ್ಕೂ ಸ್ಮಾರ್ಟ್ ನೆಸ್ ಲಗ್ಗೆಯಿಟ್ಟಿದೆ. ಇದರಿಂದಾಗಿ ಅಡುಗೆ ಮನೆಯನ್ನೂ ಬೆರಳ ತುದಿಯಲ್ಲೇ ನಿರ್ವಹಿಸಬಹುದು. ಗೃಹಿಣಿಯರ ಅಡುಗೆ ಕೆಲಸವನ್ನು ಸುಲಭವಾಗಿಸಲು ಲಭ್ಯವಿರುವ ಸ್ಮಾರ್ಟ್ ತಂತ್ರಜ್ಞಾನಗಳು ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ.

ಅಡುಗೆ ಬಳಕೆಯಾಗುವಂತಹ ಸಲಕರಣೆಗಳು ಆ್ಯಪ್‌ಗೆ ಜೋಡಣೆಯಾದರೆ ಕೆಲಸ ಸಲೀಸಾಗುತ್ತದೆ. ಈ ನಿಟ್ಟಿನಲ್ಲಿ ಇನ್‌ಸ್ಟಂಟ್‌ ಪಾಟ್‌ ನ್ನು ಪರಿಚಯಿಸಲಾಗಿದೆ. ಈ ಪಾಟ್  ಪ್ರೆಶರ್‌ ಕುಕರ್‌, ರೈಸ್‌ ಕುಕರ್‌, ಸ್ಟೀಮರ್‌, ಯೋಗ್ಹರ್ಟ್‌ ಮೇಕರ್‌, ಕೇಕ್‌ ಮೇಕರ್‌ ಹಾಗೂ ವಾರ್ಮರ್‌ ಆಗಿ ಬಳಸಬಹುದು. ಇದರ ಜತೆಗೆ ಮಸಾಲೆಗಳನ್ನು ಕೂಡ  ಹುರಿಯಬಹುದು. ಇನ್‌ ಸ್ಟಂಟ್‌ ಪಾಟ್‌ ವಿಶೇಷವೆಂದರೆ ಇದು ವೈಫೈ ಆಧಾರಿತವಾಗಿ ಚಾಲ್ತಿಯಲ್ಲಿರುತ್ತದೆ ಅಲ್ಲದೇ ಮೊಬೈಲ್ ಆ್ಯಪ್‌ ಗೆ ಜೋಡಣೆಯಾಗಿರುತ್ತದೆ.

ಸ್ಮಾರ್ಟ್ ಪಾಟ್ ನ ವಿಶೇಷತೆಗಳೇನು..?

ಅನ್ನ, ಮಾಂಸ ಸೇರಿದಂತೆ ಯಾವುದೇ ರೀತಿಯ ತರಕಾರಿಗಳನ್ನು ಕಡಿಮೆ ಸಮಯದಲ್ಲಿ ಬೇಯಿಸಲು ನೆರವಾಗುತ್ತದೆ.  ಇದರಿಂದ ಸಮಯದ ಉಳಿತಾಯವಾಗುವುದಲ್ಲದೇ 8 ಬಗೆಯ ಕೆಲಸಗಳನ್ನು ಒಂದೇ ಪಾಟ್ ನಲ್ಲಿ ಮಾಡಬಹುದು.  ಒಂದು ಟಚ್‌ ನಲ್ಲಿ 13 ಬಗೆಯ ಪ್ರೋಗ್ರಾಮ್‌ಗಳಿದ್ದು, ಸ್ವೀಟ್, ಖಾರದೊಂದಿಗೆ ಯಾವುದೇ ರೀತಿಯ ಅಡುಗೆಯನ್ನು ಕೂಡ ಮಾಡಬಹುದು. ಅಲೆಕ್ಸಾ ಮತ್ತು ವೈಫೈಗೆ ಜೋಡಣೆಯಾಗಿರುವ ಕಾರಣ ಎಲ್ಲಿಯೇ ಇದ್ದರೂ ಸ್ಮಾರ್ಟ್‌ ಫೋನ್‌ ಮೂಲಕ ನಿಯಂತ್ರಿಸಬಹುದು. ಅಲೆಕ್ಸಾ ಮೂಲಕವೂ ನಿರ್ದೇಶನಗಳನ್ನು ನೀಡಬಹುದು. ಅಡುಗೆ ಆಗುತ್ತಿರುವ ಬಗ್ಗೆ ಅಪ್‌ಡೇಟ್‌ ಪಡೆಯಬಹುದು. ಈ ಪಾಟ್ ನಲ್ಲಿ  ಒಂದು ಸಾವಿರಕ್ಕೂ ಅಧಿಕ ತಿನಿಸುಗಳನ್ನು ಮೊದಲೇ ಪ್ರೋಗ್ರಾಮ್‌ ಮಾಡಲಾಗಿದೆ.

ಇದನ್ನೂ ಓದಿ : ಸಂಪೂರ್ಣ ಲಾಕ್‌ಡೌನ್‌: ವಾಹನ ಸಂಚಾರ ಸ್ಥಬ್ದ

ಆನ್ಲೈನ್ ನಲ್ಲಿ ಖರೀದಿಸಬಹುದಾದ ಪಾಟ್ ಜೊತೆಗೆ  ಸ್ಟೇನ್‌ ಲೆಸ್‌ ಸ್ಟೀಲ್‌ ಸ್ಟೀಮ್‌ ರ‍್ಯಾಕ್‌, ಸೂಪ್‌ ಸ್ಪೂನ್‌, ಅಳತೆ ಕಪ್‌ ಗಳನ್ನು ನೀಡಲಾಗುತ್ತದೆ. ಇದರ ಕಾರ್ಯನಿರ್ವಹಣೆಗೆ 120ವ್ಯಾಟ್‌– 60ಎಚ್‌ ಝೆಡ್‌ ವಿದ್ಯುತ್‌ ಅಗತ್ಯವಿದೆ. ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಪಾಟ್ ನಲ್ಲಿ ಸೇಫ್ಟಿ ಲಾಕ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.

ಐಒಎಸ್‌ ಮತ್ತು ಆ್ಯಂಡ್ರಾಯ್ಡ್‌ ಸಾಧನಗಳಲ್ಲಿ ಉಚಿತ ಪಾಟ್‌ ಆ್ಯಪ್‌ ಇದ್ದು ನೂರಾರು ತಿನಿಸುಗಳ ತಯಾರಿಯನ್ನು ಅಳವಡಿಸಲಾಗಿದೆ. ಈ ಪಾಟ್ ನಲ್ಲಿ ಒಮ್ಮೆಗೆ ಆರು ಜನರಿಗೆ ಸಾಕಾಗುವಷ್ಟು ಅಡುಗೆ ಮಾಡಬಹುದು.  ಪಾಟ್‌ನ ಒಳಗಿರುವ ಸ್ಟೇನ್‌ಲೆಸ್‌ ಸ್ಟೀಲ್‌ನ ಭಾಗ ಹಲವು ವರ್ಷಗಳ ಕಾಲ ಬಾಳಿಕೆ ಬರುವುದಲ್ಲದೇ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಕೂಡ. ಬ್ಯಾಚುಲರ್ಸ್ ಹಾಗೂ ಕೆಲಸಕ್ಕೆ ಹೋಗುವವರಿಗೆ ತರಾತುರಿಯಲ್ಲಿ ಅಡಿಗೆ ಮಾಡಲು ಇದೊಂದು ಉಪಯುಕ್ತ ಸಾಧನ.

ದುರ್ಗಾ ಭಟ್ ಕೆದುಕೋಡಿ

ಇದನ್ನೂ ಓದಿ : SSLC ಆನ್‌ಲೈನ್‌ ಕಿರು ಪರೀಕ್ಷೆಗೆ ಉತ್ತಮ ಪ್ರತಿಕ್ರಿಯೆ.. ಎಸ್‌.ಮಹೇಶ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.