ಬೇಸಿಕ್‌ನಲ್ಲಿ ಯುಪಿಐ; ಇಂಟರ್ನೆಟ್‌ ಇಲ್ಲದೆಯೂ ವಹಿವಾಟು ನಡೆಸುವ ವ್ಯವಸ್ಥೆ


Team Udayavani, Mar 9, 2022, 11:35 AM IST

ಬೇಸಿಕ್‌ನಲ್ಲಿ ಯುಪಿಐ; ಇಂಟರ್ನೆಟ್‌ ಇಲ್ಲದೆಯೂ ವಹಿವಾಟು ನಡೆಸುವ ವ್ಯವಸ್ಥೆ

ಮುಂಬಯಿ: ಸ್ಮಾರ್ಟ್‌ಫೋನ್‌ ಇರುವವರು ಕಣ್ಣು ಮಿಟುಕಿಸುವಷ್ಟರಲ್ಲಿ ಬಿಲ್‌ ಕಟ್ಟುತ್ತಾರೆ, ಒಬ್ಬರಿಂದೊ ಬ್ಬರಿಗೆ ಹಣ ಪಾವತಿಸುತ್ತಾರೆ. ಆದರೆ ನಮ್ಮಂಥ ಬೇಸಿಕ್‌ ಫೋನ್‌ ಬಳಸುವ ವರಿಗೆ ಇಂಥ ಸೌಲಭ್ಯ ಇಲ್ಲ ವಲ್ಲಾ ಎಂದು ಕೊರಗುತ್ತಿ ದ್ದೀರಾ? ಇನ್ನು ಮುಂದೆ ಬೇಸಿಕ್‌ ಫೋನ್‌ ಬಳಕೆದಾ ರರು ಕೂಡ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ)ಯ ಅನು ಕೂಲತೆಯನ್ನು ಪಡೆಯಬಹುದು.

ಇಂಟರ್ನೆಟ್‌ನ ಅಗತ್ಯವಿಲ್ಲದೇ ಕ್ಷಣ ಮಾತ್ರದಲ್ಲಿ ಹಣ ಪಾವತಿಸುವ “ಯುಪಿಐ 123 ಪೇ’ ಎಂಬ ವ್ಯವಸ್ಥೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ಮಂಗಳವಾರ ಲೋಕಾರ್ಪಣೆ ಮಾಡಿದ್ದಾರೆ. ಇದರಿಂದ ದೇಶದ 40 ಕೋಟಿ ಬೇಸಿಕ್‌ ಫೋನ್‌ ಬಳಕೆ ದಾರರಿಗೆ ನೆರವಾಗಲಿದೆ ಎಂದೂ ಅವರು ಹೇಳಿದ್ದಾರೆ. ಈವರೆಗೆ ಕೇವಲ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಯುಪಿಐ ಮೂಲಕ ಹಣವನ್ನು ಸ್ವೀಕರಿಸುವ ಮತ್ತು ಪಾವತಿ ಸುವ ಅವಕಾಶ ಲಭ್ಯವಿತ್ತು.

ಡಿಜಿ ಸಾಥಿಗೂ ಚಾಲನೆ: ಡಿಜಿಟಲ್‌ ಪಾವತಿಗೆ ನೆರವಾ ಗುವ 24/7 ಸಹಾಯವಾಣಿ “ಡಿಜಿ ಸಾಥಿ’ಗೂ ಚಾಲನೆ ನೀಡಲಾಗಿದೆ. ಇದರ ಮೂಲಕ ಗ್ರಾಹಕರು ಡಿಜಿಟಲ್‌ ಪಾವತಿಗೆ ಸಂಬಂಧಿಸಿದ ಎಲ್ಲ ಸಂದೇಹ ಗಳಿಗೂ ಪರಿಹಾರ ಪಡೆಯಬಹುದು.

www.digisaathi.infoಗೆ ಭೇಟಿ ನೀಡಬಹುದು ಅಥವಾ 14431 ಮತ್ತು 1800 891 3333 ಗೆ ಕರೆ ಮಾಡಬಹುದು.

ಗ್ರಾಹಕರು ಏನು ಮಾಡಬೇಕು? ಆರಂಭದಲ್ಲಿ ಇಂಗ್ಲಿಷ್‌, ಹಿಂದಿಯಲ್ಲಿ ಮಾತ್ರ ಈ ಸೇವೆ ಲಭ್ಯವಿರಲಿದೆ. ಯುಪಿಐ 123 ಪೇ ಸೌಲಭ್ಯವನ್ನು ಪಡೆಯಬೇ ಕೆಂದರೆ ಮೊದಲು ಬಳಕೆದಾರರು ತಮ್ಮ ಬೇಸಿಕ್‌ ಫೋನ್‌ಗಳಿಗೆ ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡ ಬೇಕು. ಬಳಿಕ ತಮ್ಮ ಡೆಬಿಟ್‌ ಕಾರ್ಡ್‌ ಬಳಸಿ ಕೊಂಡು ಯುಪಿಐ ಪಿನ್‌ ಸೆಟ್‌ ಮಾಡಬೇಕು. ಒಮ್ಮೆ ಯುಪಿಐ ಪಿನ್‌ ರಚನೆಯಾದರೆ ನಿಮ್ಮ ಬೇಸಿಕ್‌ ಫೋನ್‌ನಿಂದಲೇ ಯಾವುದೇ ವಹಿವಾಟು ನಡೆಸಬಹುದು.

ಬಳಕೆ ಹೇಗೆ?
ಬೇಸಿಕ್‌ ಫೋನ್‌ ಬಳಕೆದಾರರು ನಾಲ್ಕು ಪರ್ಯಾಯ ತಂತ್ರಜ್ಞಾನಗಳನ್ನು ಆಧರಿಸಿ ವಹಿವಾಟುಗಳನ್ನು ನಡೆಸಬಹುದು. ಅವೆಂದರೆ ಐವಿಆರ್‌(ಇಂಟರ್ಯಾಕ್ಟಿವ್‌ ವಾಯ್ಸ ರೆಸ್ಪಾನ್ಸ್‌) ಸಂಖ್ಯೆಗೆ ಕರೆ ಮಾಡುವ ಮೂಲಕ ಹಣ ಪಾವತಿಸುವುದು. ಹಣ ರವಾನೆ ಮಾಡಬೇಕೆಂದರೆ ಅದು ಯಾರಿಗೆ ತಲುಪಬೇಕೋ ಅವರ ಫೋನ್‌ ನಂಬರ್‌ ನಮೂದಿಸಿ, ಎಷ್ಟು ಮೊತ್ತ ಎಂದು ಬರೆದು, ಯುಪಿಐ ಪಿನ್‌ ಅನ್ನು ನಮೂದಿಸಬೇಕು.

ಬೇಸಿಕ್‌ ಫೋನ್‌ಗಳಲ್ಲಿ ಆ್ಯಪ್‌ಗ್ಳನ್ನು ಬಳಸಿಕೊಂಡು ವ್ಯವಹರಿಸುವುದು: ಇದರಲ್ಲಿ “ಸ್ಕ್ಯಾನ್‌ ಮಾಡಿ ಪಾವತಿಸುವ ಆಯ್ಕೆ’ ಹೊರತುಪಡಿಸಿ ಉಳಿದೆಲ್ಲ ಯುಪಿಐ ಫೀಚರ್‌ಗಳೂ ಇರುತ್ತವೆ.

ಮಿಸ್ಡ್ ಕಾಲ್‌ ಕೊಟ್ಟು ಸೇವೆ ಪಡೆಯು ವುದು: ಯಾವುದಾದರೂ ಮಳಿಗೆಗೆ ಹಣ ಪಾವತಿಸಬೇಕೆಂದಿದ್ದರೆ, ಆ ಮಳಿಗೆಯ ಹೊರಗೆ ಪ್ರಕಟಿಸಲಾದ ಸಂಖ್ಯೆಗೆ ನೀವು ಮಿಸ್ಡ್ ಕಾಲ್‌ ಕೊಡಬೇಕು. ತತ್‌ಕ್ಷಣ ಅತ್ತ ಕಡೆ ಯಿಂದ ಮರಳಿ ನಿಮಗೆ ಕರೆ ಬರುತ್ತದೆ. ಹಣ ಪಾವತಿಯ ಕುರಿತು ದೃಢೀಕರಣ ಕೇಳಲಾಗುತ್ತದೆ ಮತ್ತು ಯುಪಿಐ ಪಿನ್‌ ನಮೂದಿಸುವಂತೆ ಸೂಚಿಸಲಾಗುತ್ತದೆ. ಪಿನ್‌ ಹಾಕಿದೊಡನೆ ಹಣ ಪಾವತಿಯಾಗುತ್ತದೆ.ಧ್ವನಿ-ಆಧರಿತ ಪಾವತಿ. ಇಲ್ಲಿ ಧ್ವನಿಯ ತರಂಗಗಳ ಬಳಸಿ ಇತರರಿಗೆ ಸಂಪರ್ಕ ರಹಿತ ಪಾವತಿಯನ್ನು ಮಾಡಬಹುದು.

ಯಾವುದಕ್ಕೆ ಬಳಸಬಹುದು?
ಈ ವ್ಯವಸ್ಥೆ ಮೂಲಕ ಯಾರಿಗೇ ಆದರೂ ಹಣ ರವಾನೆ ಮಾಡಬಹುದು, ನೀರು, ವಿದ್ಯುತ್‌ ಸೇರಿ ಇತರ ಬಿಲ್‌ಗ‌ಳ ಪಾವತಿ, ಫಾಸ್ಟ್‌ಟ್ಯಾಗ್‌ ರೀಚಾರ್ಜ್‌, ಮೊಬೈಲ್‌ ಬಿಲ್‌ ಪಾವತಿ ಮಾಡಬಹುದು. ಖಾತೆಯಲ್ಲಿರುವ ಬ್ಯಾಲೆನ್ಸ್‌ ಎಷ್ಟೆಂದು ನೋಡಬಹುದು. ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡುವುದು, ಯುಪಿಐ ಪಿನ್‌ಗಳನ್ನು ಸೆಟ್‌ ಮಾಡುವುದು ಅಥವಾ ಬದಲಾಯಿಸುವ ಕೆಲಸವನ್ನೂ ಮಾಡಬಹುದು.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.