ಹೊಸ ದಾಖಲೆ ಬರೆದ ವಾಟ್ಸ್ಆ್ಯಪ್
ಹೊಸ ವರ್ಷದ ಮುನ್ನಾದಿನ 140 ಕೋಟಿಗೂ ಹೆಚ್ಚು ಧ್ವನಿ ಮತ್ತು ವೀಡಿಯೋ ಕರೆ!
Team Udayavani, Jan 5, 2021, 6:15 AM IST
ಹೊಸ ವರ್ಷದ ಮುನ್ನಾ ದಿನದಂದು ಅಂದರೆ ಡಿ. 31ರಂದು ಪ್ರಪಂಚದಾದ್ಯಂತದ ವಾಟ್ಸ್ಆ್ಯಪ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಹೊಸ ವರ್ಷದ ಮುನ್ನಾದಿನದಂದು ವಾಟ್ಸ್ಆ್ಯಪ್ ಬಳಕೆದಾರರು 140 ಕೋಟಿಗೂ ಹೆಚ್ಚು ಧ್ವನಿ ಮತ್ತು ವೀಡಿಯೋ ಕರೆಗಳನ್ನು ಮಾಡಿದ್ದಾರೆ ಎಂದು ಫೇಸ್ಬುಕ್ ತಿಳಿಸಿದೆ.
ಇದು ಒಂದು ದಿನದಲ್ಲಿ ಮಾಡಿದ ಕರೆಗಳ ದಾಖಲೆಯ ಸಂಖ್ಯೆಯೂ ಹೌದು. ವಿಶ್ವಾದ್ಯಂತ 200 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ ಜಗತ್ತಿನ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿದೆ. ಇದು 2019 ಮತ್ತು 2020ರಲ್ಲಿ ಮತ್ತಷ್ಟು ಬೆಳೆದಿದೆ.
ಕಳೆದ ವರ್ಷಕ್ಕಿಂತ ಶೇ. 50ರಷ್ಟು ಹೆಚ್ಚಳ
ಡಿ. 31ರಂದು ದಾಖಲಾದ ಅತೀ ಹೆಚ್ಚಿನ ಕರೆ ಸಂಖ್ಯೆಯು ಈ ಹಿಂದಿನ ವರ್ಷಕ್ಕಿಂತ ಶೇ. 50ರಷ್ಟು ಹೆಚ್ಚಾಗಿದೆ. ಇದಕ್ಕೆ ಕೋವಿಡ್ ಸಂದರ್ಭ ಹೇರಲಾದ ಲಾಕ್ಡೌನ್ ಕಾರಣ ಎಂದು ಸಂಸ್ಥೆ ಹೇಳಿದೆ. ಲಾಕ್ಡೌನ್ ಪ್ರಯುಕ್ತ ಜನರು ಮನೆಯಲ್ಲೇ ಇದ್ದುದರಿಂದ ಸಂಪರ್ಕಕ್ಕಾಗಿ ಸಾಮಾಜಿಕ ಜಾಲತಾಣವನ್ನು ಹೆಚ್ಚು ಆಶ್ರಯಿಸಿದ್ದಾರೆ. ಹೆಚ್ಚಿನ ಬಳಕೆದಾರರು ಉದ್ಯೋಗದ ಕಾರಣ ಮತ್ತು ತಮ್ಮ ಪ್ರೀತಿಪಾತ್ರರ ಜತೆ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲು ವೀಡಿಯೋ ಮತ್ತು ಧ್ವನಿ ಕರೆಗಳನ್ನು ಬಳಸಿದ್ದಾರೆ.
ಕೋವಿಡ್ 19ರ ಮೊದಲು ಅಂದರೆ 2019 ರಲ್ಲಿಯೂ ಬಳಕೆಯ ಅವಧಿ ಮತ್ತು ಪ್ರಮಾಣ ಹೆಚ್ಚಳವಾಗಿತ್ತು. ಆದರೆ 2020ರಲ್ಲಿ ಮಾತ್ರ ಭಾರೀ ಬೇಡಿಕೆಯನ್ನೇ ಪಡೆದಿದೆ. ಸಾಮಾನ್ಯವಾಗಿ ಹೊಸ ವರ್ಷದ ಮುನ್ನಾದಿನದಂದು ಮಧ್ಯರಾತ್ರಿಯಲ್ಲಿ ಮೆಸೇಜಿಂಗ್, ಫೋಟೋ ಅಪ್ಲೋಡ್ಗಳ ಸಂಖ್ಯೆ ಹೆಚ್ಚೇ ಇರುತ್ತಿದ್ದವು.
ಫೇಸ್ಬುಕ್ ಇನ್ಸ್ಟಾಗ್ರಾಂನಲ್ಲಿ 5.5 ಕೋಟಿ ಲೈವ್!
ಹೊಸ ವರ್ಷದ ಮುನ್ನಾ ದಿನದಂದು, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ 55 ದಶಲಕ್ಷಕ್ಕೂ ಹೆಚ್ಚು ನೇರ ಪ್ರಸಾರಗಳು ನಡೆದಿವೆ. ಅಮೆರಿಕದಲ್ಲಿ ಹೊಸ ವರ್ಷದ ಮುನ್ನಾದಿನ ಅತೀ ಹೆಚ್ಚು ಫೇಸ್ಬುಕ್ ಗ್ರೂಪ್ ವೀಡಿಯೋ ಕರೆಗಳು ದಾಖಲಾಗಿವೆ. ಮೆಸೇಂಜರ್ ವೀಡಿಯೋ ಕರೆಯಲ್ಲಿ 3 ಮತ್ತು ಅದಕ್ಕಿಂತ ಹೆಚ್ಚಿನ ಜನರು ಇದ್ದರೆ ಅದನ್ನು ಗ್ರೂಪ್ ಕಾಲ್ ಎಂದು ಕರೆಯಲಾಗುತ್ತದೆ. ಗುಂಪು ವೀಡಿಯೋ ಕರೆಗಳು ಸಾಮಾನ್ಯ ದಿನಗಳಿಗಿಂತ ಸುಮಾರು 2 ಪಟ್ಟು ಹೆಚ್ಚಾಗಿತ್ತು ಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ