ತರಂಗಾಂತರಂಗ: ಮಂಕಿ ಮ್ಯಾನ್ ಜ್ಯೋತಿರಾಜು ಹಿಂದಿನ ಜನ್ಮದಲ್ಲಿ ವಾನರ ಸೇನೆಯ ನಾಯಕನಾಗಿದ್ದ ಕಥೆ
Team Udayavani, Aug 14, 2020, 4:05 PM IST
ಜನ್ಮ ಜನ್ಮಾಂತರದ ಬಂಧ, ಋಣಾನುಬಂಧ, ಏಳೇಳು ಜನ್ಮಗಳ ಬಂಧ… ಇಂತಹ ಹಲವಾರು ಪದಬಳಕೆಗಳನ್ನು ಜನರ ಆಡುಮಾತಿನಲ್ಲಿ ನಾವು ಪ್ರತಿನಿತ್ಯವೆಂಬಂತೆ ಕೇಳುತ್ತಲೇ ಇರುತ್ತೇವೆ. ದೇಹ ಮಾತ್ರವೇ ನಶಿಸುತ್ತದೆ, ಆತ್ಮಕ್ಕೆ ಸಾವಿಲ್ಲ ಎಂಬ ನಂಬಿಕೆಯೂ ಇದೆ. ಪುನರ್ಜನ್ಮ ಎಂಬುದು ಸಾಮಾನ್ಯರಿಗೆ ಭಯಮಿಶ್ರಿತ ಕುತೂಹಲದ, ತತ್ವಜ್ಞಾನಿಗಳಿಗೆ ಶೋಧನೆಯ, ವಿಜ್ಞಾನಿಗಳಿಗೆ ಅನ್ವೇಷಣೆಯ ಮತ್ತು ನಾಸ್ತಿಕರಿಗೆ ‘ಹಾಗೇನಿಲ್ಲ ಬಿಡಿ’ ಎಂಬ ಕುತೂಹಲದ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಪುನರ್ಜನ್ಮ ವಿಷಯದ ಕುರಿತಾಗಿ ಒಂದಷ್ಟು ವಿಚಾರಗಳನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನ ನಮ್ಮದು.
ಈ ಹಿಂದೆ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದುಕೊಂಡಿದ್ದ ಈ ಲೇಖನದ ಯಥಾವತ್ ರೂಪ ಇದೀಗ ನಿಮ್ಮ ಮುಂದೆ…
– ಡಾ| ಎನ್. ಗೋಪಾಲಕೃಷ್ಣ
ಮಂಕಿಮ್ಯಾನ್ ಎಂದೇ ಪ್ರಸಿದ್ಧನಾಗಿರುವ ತಮಿಳುನಾಡಿನ ಜ್ಯೋತಿರಾಜು ಎಂಬ ಯುವಕ ಚಿತ್ರದುರ್ಗದಲ್ಲಿದ್ದಾನೆ.
ಅಲ್ಲಿನ ಪ್ರಸಿದ್ಧ ಕೋಟೆಯ ಗೋಡೆಗಳನ್ನು ಕೋತಿಗಳಿಗಿಂತಲೂ ವೇಗವಾಗಿ ಹತ್ತಿ , ಇಳಿಯುತ್ತಾನೆ. ಚಿತ್ರದುರ್ಗಕ್ಕೆ ಬರುವ ಪ್ರವಾಸಿಗಳಿಗೆ ಸಾಹಸ ತೋರಿಸುವ ಅಪರೂಪದ ವ್ಯಕ್ತಿಯಾದ್ದಾನೆ, ಜ್ಯೋತಿರಾಜು.
ರಾಜುವಿಗೆ ಪ್ರತಿ ಭಾರಿಯೂ ಭಾರೀ ಬಂಡೆಗಳ ಮೆಲೆಂದ ಇದ್ದಕ್ಕಿದ್ದಂತೆ ಜಾರಿಬಿದ್ದಂತೆ, ಅಂಗಾಂಗಳು ಜಜ್ಜಿಹೋದಂತೆ ಕನಸು ಬೀಳುತ್ತಿತ್ತು. ತೀವ್ರ ಖಿನ್ನತೆಗೆ ಒಳಗಾದ ಈತ ಕೆಲಸ ಹುಡುಕಿಕೊಂಡು ತಮಿಳುನಾಡಿನಿಂದ ಚಿತ್ರದುರ್ಗಕ್ಕೆ ಬಂದ.
ಇಲ್ಲಿ ಹೊಟ್ಟೆಪಾಡಿಗೆ ಕೂಲಿ ಕೆಲಸವೇನೋ ದೊರೆಯಿತು. ಆದರೆ ಇಲ್ಲಿಯೂ ಅದೇ ರೀತಿಯ ಕನಸುಗಳು ಬೀಳತೊಡಗಿದವು. ಇದರಿಂದ ಹತಾಶನಾದ ರಾಜು ದೊಡ್ಡ ಬಂಡೆಯೊಂದನ್ನು ಹತ್ತಿ, ಅಲ್ಲಿಂದ ಕೆಳಗೆ ಹಾರಿ, ಪ್ರಾಣ ಕಳೆದುಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದ.
ಒಂದು ಭಾರೀ ಬಂಡೆಯನ್ನು ಏರಿ ನೋಡಿದಾಗ ಅವನಿಗೆ ಅಚ್ಚರಿಯಾಯಿತು. ತಾನು ಕನಸಿನಲ್ಲಿ ಕಾಣುತ್ತಿದ್ದ ಬಂಡೆ ಅದೇ ಆಗಿತ್ತು! ಅಲ್ಲಿ ಓಡಾಡುತ್ತಿದ್ದ ಪ್ರವಾಸಿಗರು ಬಂಡೆಯ ಮೇಲಿರುವ ವ್ಯಕ್ತಿಯನ್ನು ಕಂಡು ಆಶ್ಚರ್ಯಪಟ್ಟರು.
ಇದನ್ನೂ ಓದಿ: ತರಂಗಾಂತರಂಗ: ಪುನರ್ಜನ್ಮ- ಹುಟ್ಟು, ಸಾವು, ಮರುಹುಟ್ಟು ; ಇವುಗಳ ಗುಟ್ಟೇನು?
ಕೆಳಗೆ ಇಳಿದು ಬಂದ ರಾಜುವಿಗೆ ಅಂದಿನಿಂದ ರಾತ್ರಿ ವಿಚಿತ್ರ ಕನಸು ಬೀಳುವುದು ನಿಂತುಹೋಯಿತಂತೆ. ಬಳಿಕ ಅವನು ಚಿತ್ರದುರ್ಗದ ಬೆಟ್ಟವನ್ನು ಏರಿ, ಇಳಿಯುವ ಕೆಲಸವನ್ನೇ ನಿತ್ಯದ ಉದ್ಯೋಗನ್ನಾಗಿ ಮಾಡಿಕೊಂಡು ಪ್ರವಾಸಿಗರನ್ನು ಆಕರ್ಷಿಸಲಾರಂಭಿಸಿದ.
ರಾಜುವಿನ ಹಿಂದಿನ ಜನ್ಮ ಏನಾಗಿದ್ದಿತೆಂದು ಆಧ್ಯಾತ್ಮಿಕ ಸಾಧಕರು ಪತ್ತೆ ಮಾಡಿದ್ದಾರೆ. ಗತಜನ್ಮದಲ್ಲಿ ರಾಜು ಇದೇ ಚಿತ್ರದುರ್ಗದ ಕೋಟೆಯಲ್ಲಿದ್ದ ಇಲ್ಲಿನ ಮಂಗಳಿಗೆ ನಾಯಕನಾಗಿದ್ದ. ಅಕಸ್ಮಾತ್ ಹಾವೊಂದು ಕಚ್ಚಿದ್ದರಿಂದ ಸತ್ತು ಹೋಗಿದ್ದ.
ಈಗ ಮನುಷ್ಯನಾಗಿ ಮರುಜನ್ಮ ತಾಳಿ ಚಿತ್ರದುರ್ಗಕ್ಕೆ ಬಂದಿದ್ದಾನೆ. ಇಲ್ಲಿರುವ ಕೋತಿಗಳೆಲ್ಲ ಇವನ ಸ್ನೇಹಿತರೇ ಆಗಿಬಿಟ್ಟಿವೆ. ರಾಜು ಕೂಡ ತನ್ನ ಪ್ರವಾಸಿಗರಿಂದ ಸಿಗುವ ಹಣದ ಹೆಚ್ಚಿನ ಭಾಗವನ್ನು ಕೋತಿಗಳಿಗಾಗಿಯೇ ಖರ್ಚು ಮಾಡುತ್ತಿದ್ದಾನೆ.
ಇದನ್ನೂ ಓದಿ: ಪುರಾಣಗಳಲ್ಲಿ ಪುನರ್ಜನ್ಮದ ಉಲ್ಲೇಖ : ಅಭಿಮನ್ಯುವಿಗೆ ಗರ್ಭಾವಸ್ಥೆಯಲ್ಲೇ ಚಕ್ರವ್ಯೂಹದ ಪಾಠ!
ಇದನ್ನೂ ಓದಿ: ‘ನನಗೆ ಸಾವಿರಾರು ಜನ್ಮಗಳಾಗಿವೆ ; ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು ಅದರಲ್ಲಿ ನಿವ್ಯಾರು?’
ಇದನ್ನೂ ಓದಿ: ಮನದಲ್ಲಿದ್ದ ತೀವ್ರ ಬಯಕೆಯೇ ಜಿಂಕೆಯ ಜನ್ಮ ತಾಳಲು ಕಾರಣವಾದ ‘ಜಡ ಭರತ’ನ ರೋಚಕ ಕಥೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ
ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ
ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ
ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ
ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ