‘ನನಗೆ ಸಾವಿರಾರು ಜನ್ಮಗಳಾಗಿವೆ ; ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು ಅದರಲ್ಲಿ ನಿವ್ಯಾರು?’

ಪುತ್ರ ಸಾವಿನ ಶೋಕದಿಂದ ಗೋಳಾಡುತ್ತಿದ್ದ ರಾಜ ಚಿತ್ರಕೇತು, ರಾಣಿ ಕೃತದ್ಯುತಿ ‘ಆತ್ಮ’ ಕೇಳುವ ಪ್ರಶ್ನೆಗಳಿಗೆ ನಿರುತ್ತರಾಗುತ್ತಾರೆ...!

Team Udayavani, Jul 29, 2020, 6:57 PM IST

‘ನನಗೆ ಸಾವಿರಾರು ಜನ್ಮಗಳಾಗಿವೆ ; ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು ಅದರಲ್ಲಿ ನಿವ್ಯಾರು?’

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾಗವತದಲ್ಲಿ ಬರುವ ಚಿತ್ರಕೇತು ಮಹಾರಾಜನ ಕಥೆಯಲ್ಲಿ ಅವನಿಗೆ ಹಲವು ಜನ ರಾಣಿಯರಿದ್ದರೂ ತನ್ನ ಅನಂತರ ರಾಜ್ಯವನ್ನಾಳಬಲ್ಲ ಒಬ್ಬ ಪುತ್ರನ ಸಂತಾನವಾಗಲಿಲ್ಲ.

ಆಂಗೀರಸ ಮುನಿಯು ಒಮ್ಮೆ ಮಹಾರಾಜನಿಗೆ ಆಶೀರ್ವದಿಸಿ, ‘ಮಹಾರಾಜ, ನಿನಗೆ ಒಬ್ಬ ಪುತ್ರ ಜನಿಸುತ್ತಾನೆ. ಅವನಿಂದಲೇ ನಿನಿಗೆ ಸುಖ-ದುಃಖ ಎರಡೂ ಉಂಟಾಗುತ್ತವೆ’ ಎಂದು ಹೇಳಿ ನಿರ್ಗಮಿಸುತ್ತಾನೆ.

ಸುಪ್ರೀತನಾದ ಮಹಾರಾಜ ಹೀಗೆಂದುಕೊಂಡನಂತೆ- ‘ನನಗೆ ಮಗನ ಜನನವಾಗುವುದರಿಂದ ಸಂತೋಷ ಉಂಟಾಗುತ್ತದೆ ಎಂಬುದು ಮುನಿವರ್ಯರ ಮಾತಿನ ತಾತ್ಪರ್ಯವಿರಬೇಕು. ಒಬ್ಬನೇ ಮಗನಾದ ಕಾರಣ, ಮುದ್ದಿನಿಂದ ಬೆಳೆಯುವ ಅವನು ಹೆಮ್ಮೆಯುಳ್ಳವನೂ, ಅವಿಧೇಯನೂ ಆಗಬಹುದೇನೋ, ಇರಲಿ. ಮಕ್ಕಳೇ ಇಲ್ಲದವ ನಾನು. ಮಕ್ಕಳೇ ಇಲ್ಲದಿರುವುದಕ್ಕಿಂತ ಅವಿದೇಯ ಮಗ ಎಷ್ಟೋ ವಾಸಿ’.

ಚಿತ್ರಕೇತುವಿನ ರಾಣಿ ಕೃತದ್ಯುತಿ ಗರ್ಭಿಣಿಯಾಗಿ, ಮುಂದೆ ಗಂಡು ಮಗುವಿಗೆ ಜನ್ಮನೀಡುತ್ತಾಳೆ. ಸಂತೋಷದಿಂದಿದ್ದ ರಾಜ – ರಾಣಿಯನ್ನು ಸಹಿಸಲಾರದ ರಾಜನ ಇತರು ರಾಣಿಯರು ಮಗುವನ್ನು ಕೊಂದುಬಿಡುತ್ತಾರೆ.

ಸತ್ತ ಮಗನ ಮುಂದೆ ಕುಳಿತು ಗೋಳಿಡುತ್ತಿದ್ದ ಆಜ ಆಂಗೀರಸ ಮುನಿಯನ್ನು ಕುರಿತು, ಒಂದೇ ಒಂದು ಬಾರಿ ತನ್ನ ಮಗನ ಆತ್ಮವನ್ನು ಕರೆಸುವಂತೆ ಬೇಡುತ್ತಾನೆ. ಒಮ್ಮೆ ಬಂದರೆ ತನ್ನ ಪ್ರೀತಿಯ ಪಾಶದಿಂದ ಬಂಧಿಸಿಡಬಲ್ಲೆ. ಎಂಬ ವಿಶ್ವಾಸ ಅವನದು!

ಆಗ ಅಲ್ಲಿಗೆ ಬಂಂದ ನಾರದ ಮುನಿಯು ತಮ್ಮ ಶಕ್ತಿಯಿಂದ ಸತ್ತ ಮಗುವಿನ ಪ್ರಾಣ ಮರಳುವಂತೆ ಮಾಡುತ್ತಾರೆ.
ಆಗ ರಾಜ- ರಾಣಿಯರು ತಮ್ಮ ಪ್ರೇಮವನ್ನು ನಾನಾ ರೀತಿಯಲ್ಲಿ ವಿವರಿಸುತ್ತಾರೆ. ‘ಕಂದಾ, ನಾವು ನಿನ್ನ ತಂದೆ – ತಾಯಿ, ನೀನಿಲ್ಲದೆ ಬದುಕಲಾರೆವು, ನೀನು ನಮ್ಮವ ಮರಳಿ ಬಾ’ ಎಂದು ಗೋಳಿಡುತ್ತಾರೆ.

ಆಗ ಆ ಆತ್ಮ ಹೇಳುವ ಮಾತುಗಳು, ಅದನ್ನು ತಿಳಿಯಬಲ್ಲವರ ಬದುಕಿನ ಗತಿಯನ್ನೇ ಬದಲಾಯಿಸಬಲ್ಲಷ್ಟು ಸತ್ವಯುತವಾಗಿವೆ.

ಇದನ್ನೂ ಓದಿ: ತರಂಗಾಂತರಂಗ: ಪುನರ್ಜನ್ಮ- ಹುಟ್ಟು, ಸಾವು, ಮರುಹುಟ್ಟು ; ಇವುಗಳ ಗುಟ್ಟೇನು?

ಅದು ಹೇಳುತ್ತದೆ: ‘ಯಾರು ತಂದೆ? ಯಾರು ತಾಯಿ? ನನಗೆ ಸಾವಿರಾರು ಜನ್ಮಗಳಾಗಿವೆ. ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು. ಅದರಲ್ಲಿ ನಿವ್ಯಾರು? ಇನ್ನು ನಾನು ನಿಮ್ಮವ ಎನ್ನುತ್ತಿರುವಿರಿ. ನಿಮ್ಮಿಂದ ನಾನು ಪಡೆದ ದೇಹವನ್ನು ನಿಮ್ಮಲ್ಲಿಯೇ ಬಿಟ್ಟು ಬಂದಿದ್ದೇನೆ.

ಇದನ್ನೂ ಓದಿ: ಪುರಾಣಗಳಲ್ಲಿ ಪುನರ್ಜನ್ಮದ ಉಲ್ಲೇಖ : ಅಭಿಮನ್ಯುವಿಗೆ ಗರ್ಭಾವಸ್ಥೆಯಲ್ಲೇ ಚಕ್ರವ್ಯೂಹದ ಪಾಠ!

ಅದು ಕೇವಲ ಒಂದು ಮನೆಯಾಗಿತ್ತು. ಅದನ್ನು ಸ್ವಲ್ಪವೇ ಕಾಲದ ಉಪಯೋಗಕ್ಕೆಂದು ನಿಮ್ಮಿಂದ ಪಡೆದಿದ್ದೆ. ಶೋಕಿಸಬೇಡಿ. ಈ ಜೀವಕ್ಕೆ ಯಾರೂ ಇಲ್ಲ. ಇರುವುದು ಅದು ಮಾಡಿರಬಹುದಾದ ಕರ್ಮಫ‌ಲ ಮಾತ್ರ. ಆದುದರಿಂದ ಮೋಹ ಬಿಡಿ.’ ಆಗ ರಾಜನಿಗೂ ಆತನ ರಾಣಿಯರಿಗೂ ಆದ್ಯಾತ್ಮಿಕ ಜ್ಞಾನದ ಅರಿವಾಗಿ ತಮ್ಮ ಮೋಹವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಸತ್ಯವನ್ನು ಒಪ್ಪಿಕೊಳ್ಳುತ್ತಾರೆ.

ಇದನ್ನೂ ಓದಿ: ಮನದಲ್ಲಿದ್ದ ತೀವ್ರ ಬಯಕೆಯೇ ಜಿಂಕೆಯ ಜನ್ಮ ತಾಳಲು ಕಾರಣವಾದ ‘ಜಡ ಭರತ’ನ ರೋಚಕ ಕಥೆ!

(ಮುಂದುವರಿಯುತ್ತದೆ…)

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food-Punjab

ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.