500 ರನ್‌ ಕನವರಿಕೆಯಲ್ಲಿ…


Team Udayavani, May 30, 2019, 6:00 AM IST

x-10

ಇಂಗ್ಲೆಂಡಿನ ಟ್ರ್ಯಾಕ್‌ಗಳೆಲ್ಲ ಬ್ಯಾಟಿಂಗ್‌ ಸ್ವರ್ಗವಾಗಿ ಗೋಚರಿಸುತ್ತಿವೆ. 350 ರನ್‌ ನಿರಾಯಾಸವಾಗಿ ಹರಿದು ಬರುತ್ತಿದೆ. ಹೀಗಾಗಿ ಈ ವಿಶ್ವಕಪ್‌ನಲ್ಲಿ 500 ರನ್‌ ಯಾಕೆ ದಾಖಲಾಗಬಾರದು? ಹಾಗೆಯೇ ಸರ್ವಾಧಿಕ ವೈಯಕ್ತಿಕ ರನ್ನಿನ ವಿಶ್ವದಾಖಲೆ ಯಾಕೆ ನಿರ್ಮಾಣವಾಗಬಾರದು? ಈ ಎರಡು ಕೌತುಕಗಳತ್ತ ವಿಶ್ವಕಪ್‌ ಗಿರಕಿ ಹೊಡೆಯುತ್ತಿದೆ.

ಟಿ20 ಕ್ರಿಕೆಟ್‌ ಮುನ್ನೆಲೆಗೆ ಬಂದ ಮೇಲೆ ಕ್ರಿಕೆಟ್‌ ಎನ್ನುವುದು ಸಂಪೂರ್ಣವಾಗಿ ಬ್ಯಾಟ್ಸ್‌ಮನ್‌ಗಳ ಆಟವಾಗಿದೆ. ಕಲಾತ್ಮಕ ಆಟಕ್ಕಿಂತ ಎಷ್ಟೇ ಉತ್ತಮ ಎಸೆತವನ್ನೂ ಬೌಂಡರಿ ಗೆರೆಯಾಚೆಗೆ ನಿರ್ದಯವಾಗಿ ಚಚ್ಚುವ ಆಟಗಾರರಿಗೆ ಕೋಟಿ ಲೆಕ್ಕದಲ್ಲಿ ಬೆಲೆ ಬರುತ್ತಿದೆ. ಇಂತಹ ದೈತ್ಯ ಪ್ರತಿಭೆಗಳಿಗೇ ತಂಡಗಳು ವಿಶೇಷ ಮಣೆ ಹಾಕುತ್ತಿವೆ.

ಈ ಬಾರಿಯ ವಿಶ್ವಕಪ್‌ ಕುತೂಹಲವೂ ಇದೇ ಆಗಿದೆ. ಇಂಗ್ಲೆಂಡಿನ ಟ್ರ್ಯಾಕ್‌ಗಳೆಲ್ಲ ಬ್ಯಾಟಿಂಗ್‌ ಸ್ವರ್ಗವಾಗಿ ಗೋಚರಿಸುತ್ತಿವೆ. 350 ರನ್‌ ನಿರಾಯಾಸವಾಗಿ ಹರಿದು ಬರುತ್ತಿದೆ. ಹೀಗಾಗಿ ಈ ವಿಶ್ವಕಪ್‌ನಲ್ಲಿ 500 ರನ್‌ ಯಾಕೆ ದಾಖಲಾಗಬಾರದು? ಹಾಗೆಯೇ ಸರ್ವಾಧಿಕ ವೈಯಕ್ತಿಕ ರನ್ನಿನ ವಿಶ್ವದಾಖಲೆ ಯಾಕೆ ನಿರ್ಮಾಣವಾಗಬಾರದು? ಈ ಎರಡು ಕೌತುಕಗಳತ್ತ ವಿಶ್ವಕಪ್‌ ಗಿರಕಿ ಹೊಡೆಯುತ್ತಿದೆ.

ಕಳೆದ ಸಲ ಅವಳಿ ದ್ವಿಶತಕ
ವಿಶ್ವಕಪ್‌ ಇತಿಹಾಸದ ಎರಡೂ ದ್ವಿಶತಕಗಳು 2015ರ ಆವೃತ್ತಿಯಲ್ಲೇ ದಾಖಲಾಗಿವೆ. ಮಾರ್ಟಿನ್‌ ಗಪ್ಟಿಲ್‌ ಅಜೇಯ 237 ಹಾಗೂ ಕ್ರಿಸ್‌ ಗೇಲ್‌ 215 ರನ್‌ ಬಾರಿಸಿದ್ದಾರೆ.
ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ 2015ರಲ್ಲಿ ಅಫ್ಘಾನಿಸ್ಥಾನದ ವಿರುದ್ಧ ಗಳಿಸಿದ 417 ರನ್‌ ಈ ವರೆಗಿನ ಗರಿಷ್ಠ ತಂಡ ಗಳಿಕೆ. ಈ ಪಂದ್ಯವನ್ನು ಬೃಹತ್‌ ಅಂತರದಿಂದ (275 ರನ್‌) ಗೆದ್ದ ದಾಖಲೆಯೂ ಕಾಂಗರೂ ಪಾಲಾಯಿತು. ಭಾರತ 2007ರಲ್ಲಿ 413 ರನ್‌ ಬಾರಿಸಿತ್ತು. ದಕ್ಷಿಣ ಆಫ್ರಿಕಾ ಎರಡು ಸಲ 400ರ ಗಡಿ ದಾಟಿದೆ (411, 408).

ಭಾರತದ ರೋಹಿತ್‌ ಶರ್ಮ ಏಕದಿನದಲ್ಲಿ 3 ದ್ವಿಶತಕಗಳ ಒಡೆಯರಾಗಿದ್ದಾರೆ. 267 ಗರಿಷ್ಠ ವೈಯಕ್ತಿಕ ರನ್‌. ರೋಹಿತ್‌ ಅವರ ಈ ದಾಖಲೆಯನ್ನು ವಿಶ್ವಕಪ್‌ನಲ್ಲಿ ಮೀರಿಸಬಹುದೇ? ಈ ದಾಖಲೆಯನ್ನು ಅವರೇ ಮುರಿಯಬಲ್ಲರೇ? ಕುತೂಹಲ ಮೂಡಿದೆ. ಕೊಹ್ಲಿ, ಗೇಲ್‌, ಬೇರ್‌ಸ್ಟೊ, ಗಪ್ಟಿಲ್‌, ರಸೆಲ್‌, ಡಿ ಕಾಕ್‌ ಮೊದಲಾದರಿಂದಲೂ ಸ್ಫೋಟಕ ಇನ್ನಿಂಗ್ಸ್‌ಗಳ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

481 ರನ್‌ ವಿಶ್ವದಾಖಲೆ ಉಳಿದೀತೇ?
ಏಕದಿನ ಇತಿಹಾಸದಲ್ಲಿ ಈವರೆಗೆ 20 ಬಾರಿ ತಂಡಗಳು 400 ರನ್‌ ಗಡಿ ದಾಟಿವೆ. ದಕ್ಷಿಣ ಆಫ್ರಿಕಾ 6 ಸಲ, ಭಾರತ 4 ಸಲ (ಗರಿಷ್ಠ 418) ಈ ಸಾಧನೆ ಮಾಡಿವೆ. 2018ರಲ್ಲಿ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯ ಎದುರು 6 ವಿಕೆಟಿಗೆ 481 ರನ್‌ ಪೇರಿಸಿದ್ದು ವಿಶ್ವದಾಖಲೆ. ಇದಕ್ಕೆ ಇನ್ನು ಕೇವಲ 19 ರನ್‌ ಸೇರಿದರೆ 500ರ ಗಡಿ ತಲುಪಬಹುದು. ಈ ವಿಶ್ವಕಪ್‌ ಇಂಥದೊಂದು ಅದ್ಭುತ ಇನ್ನಿಂಗ್ಸಿಗೆ ಸಾಕ್ಷಿಯಾದೀತೇ ಎಂಬ ನಿರೀಕ್ಷೆ ಕ್ರಿಕೆಟ್‌ ಅಭಿಮಾನಿಗಳದ್ದು. ಪ್ರಚಂಡ ಫಾರ್ಮ್ನಲ್ಲಿರುವ ಇಂಗ್ಲೆಂಡಿಗೆ ಹೆಚ್ಚಿನ ಅವಕಾಶ ಇದೆ ಎಂಬುದೊಂದು ಲೆಕ್ಕಾಚಾರ. ಸಮಸ್ಯೆಯೆಂದರೆ, ಚೆನ್ನಾಗಿ ದಂಡಿಸಿಕೊಳ್ಳುವ ದುರ್ಬಲ ತಂಡಗಳ, ಲೆಕ್ಕದ ಭರ್ತಿಯ ತಂಡಗಳ ಗೈರು!

ಸಿಕ್ಸರ್‌ ಸುರಿಮಳೆಯ ನಿರೀಕ್ಷೆ
ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ಗೇಲ್‌ 16 ಸಿಕ್ಸರ್‌ ಹೊಡೆದಿದ್ದಾರೆ. ಎಬಿಡಿ ಅವರೊಂದಿಗೆ 37 ಸಿಕ್ಸರ್‌ಗಳ ಜಂಟಿ ದಾಖಲೆ ಹೊಂದಿರುವ ಗೇಲ್‌ ಈ ಬಾರಿ ಅದನ್ನು ಮೀರಿ ಮುನ್ನುಗ್ಗುವ ಹುಮ್ಮಸ್ಸಿನಲ್ಲಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ ಇಂಗ್ಲಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ ಒಂದೇ ಪಂದ್ಯದಲ್ಲಿ 23 ಸಿಕ್ಸರ್‌ ಸಿಡಿಸಿತು. 9 ದಿನಗಳ ಬಳಿಕ ಇಂಗ್ಲೆಂಡ್‌ 24 ಸಿಕ್ಸರ್‌ ಬಾರಿಸಿ ನೂತನ ದಾಖಲೆ ಸ್ಥಾಪಿಸಿತು. ಈ ದಾಖಲೆ ವಿಶ್ವಕಪ್‌ನಲ್ಲಿ ಪತನಗೊಂಡೀತೇ? 16 ಎಸೆತಗಳಲ್ಲಿ ಅರ್ಧ ಶತಕ, 35 ಎಸೆತಗಳಲ್ಲಿ ಶತಕ ಬಾರಿಸಿದವರಿದ್ದಾರೆ. ದಾಖಲೆಗಳಿರುವುದೇ ಮುರಿಯುವುದಕ್ಕೆ ಎನ್ನುವ ಸ್ಥಿತಿಯಲ್ಲಿ ಈ ಬಾರಿ ನಿರೀಕ್ಷೆ ಹೆಚ್ಚಿದೆ. 2019ರ ವಿಶ್ವಕಪ್‌ನಲ್ಲಿ ಬಲಾಡ್ಯ ತಂಡಗಳೇ ಕಣದಲ್ಲಿವೆ. ಅವುಗಳ ಎದುರಿಗೂ ಯಾವುದಾದರೂ ಒಂದು ತಂಡ 500 ರನ್‌ ಗುಡ್ಡೆ ಹಾಕಿದರೆ ಅದು ನಿಜಕ್ಕೂ ಅಸಾಮಾನ್ಯ ಸಾಧನೆ ಆಗಲಿದೆ.

ಟಾಪ್ ನ್ಯೂಸ್

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.