ಆರ್ಸಿಬಿಯಿಂದ ಬೆಂಗಳೂರು ಹೆಸರು ತೆಗೆಯಿರಿ: ಕೆಎಸ್ಸಿಎಗೆ ಪತ್ರ
Team Udayavani, Apr 2, 2019, 6:00 AM IST
ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡ ಕಳಪೆ ನಿರ್ವಹಣೆ ನೀಡಿ ಸೋಲುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಕೇಳಿ ಬರುತ್ತಿದೆ.
ರಾಜ್ಯದಲ್ಲಿ ಇದೀಗ ಟೀಕೆಗಳ ತೀವ್ರತೆ ಹೆಚ್ಚಾಗಿದ್ದು ಸಾಮಾಜಿಕ ಕಾರ್ಯಕರ್ತರೊಬ್ಬರು ಆರ್ಸಿಬಿ ಯಿಂದ “ಬೆಂಗಳೂರು’ಹೆಸರನ್ನು ತೆಗೆಯಬೇಕು ಎಂದು ಕೆಎಸ್ಸಿಎ (ರಾಜ್ಯ ಕ್ರಿಕೆಟ್ ಸಂಸ್ಥೆ)ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. “ರಾಜ್ಯದಿಂದ ವಿಶ್ವಕ್ಕೆ ಹಲವಾರು ಕ್ರಿಕೆಟಿಗರನ್ನು ಪರಿಚಯಿಸಲಾಗಿದೆ. ಸಾಧಕರ ಗಣಿಯಾಗಿರುವ ರಾಜ್ಯದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದರೂ ಅವರನ್ನೆಲ್ಲ ಬಿಟ್ಟು ಆರ್ಸಿಬಿ ಫ್ರಾಂಚೈಸಿ ಬೇರೆ ರಾಜ್ಯದ ಆಟಗಾರರಿಗೆ ಮಣೆ ಹಾಕಿದೆ. ಇದೀಗ ಸತತ ಸೋಲು ಅನುಭವಿಸಿದೆ. ಇದರಿಂದ ರಾಜ್ಯ ಕ್ರಿಕೆಟಿಗರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ “ಬೆಂಗಳೂರು’ ಹೆಸರನ್ನು ಆರ್ಸಿಬಿಯಿಂದ ತೆಗೆಯಬೇಕು ಎಂದು ಸಾಯಿದತ್ತ ಎನ್ನುವವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ