ಮತದಾನದಲ್ಲಿ ತಪ್ಪದೇ ಭಾಗವಹಿಸಬೇಕು;ನಾವು ಯಾಕೆ ಮತ ಹಾಕಬೇಕು ?


Team Udayavani, Mar 25, 2019, 1:03 PM IST

vote

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ. ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

ಮತದಾನದಲ್ಲಿ ತಪ್ಪದೇ ಭಾಗವಹಿಸಬೇಕು
ಎಲ್ಲರೂ ತಪ್ಪದೇ ಮತದಾನ ಮಾಡುವುದು ಸಂವಿಧಾನದ ಆಶಯಕ್ಕೆ ತಲೆಬಾಗಿದಂತೆ. ನಾವು ಭಾರತೀಯರು ಎಂದು ಗುರುತಿಸಿಕೊಳ್ಳಲು ಎಷ್ಟು ಹೆಮ್ಮೆ ಪಡುತ್ತೆವೆಯೋ, ಅಷ್ಟೇ ಅಚಲ ನಂಬಿಕೆಯಿಂದ ಚುನಾವಣೆಯಲ್ಲಿ ಭಾಗಿಯಾಗಬೇಕು. ಭ್ರಷ್ಟಾಚಾರಿಗಳ ಹುಟ್ಟು ಅಡಗಿಸಲು, ಸಮರ್ಥರ ಕೈಯಲ್ಲಿ ಆಡಳಿತದ ಚುಕ್ಕಾಣಿ ನೀಡಲು ನಾವು ಯುವ ಜನತೆ ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಬೇಕು.
ನೂರುನ್ನಿಸಾ, ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು, ಕಾಪು

ಚುನಾವಣೆ ಒಂದು ಅವಕಾಶ
ನಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಹಿಂದೇಟು, ಸೋಮಾರಿತನ ತೋರಿಸಿದರೆ ನಮ್ಮಷ್ಟು ಮೂರ್ಖರು ಬೇರೆ ಇಲ್ಲ. ಸಂವಿಧಾನ ನಮಗೆ ನೀಡಿದ ಹಕ್ಕನ್ನು ಬಳಸಬೇಕು. ದೇಶದ ಅಭಿವೃದ್ಧಿ, ಜನರ ಆಶೋತ್ತರ ಈಡೇರಿಸುವ ಅಭ್ಯರ್ಥಿ ಆಯ್ಕೆ ಮಾಡುವ ಈ ಪ್ರಜಾಸತ್ತಾತ್ಮಕತೆಯನ್ನು ಜೀವಂತವಾಗಿಡುವ ಚುನಾವಣೆ ಒಂದು ಅವಕಾಶವಾಗಿದೆ.
ನಾಗಾರ್ಜುನ ಕೆ.ಆರ್‌.,ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು, ಕಾಪು

ಪ್ರಜಾಪ್ರಭುತ್ವ ಜೀವಂತವಾಗಿಡುವ ಅವಕಾಶ
ನಮ್ಮ ದೇಶದಲ್ಲಿ ಅಕ್ಷರಸ್ಥರು, ನಗರವಾಸಿಗಳಿಂತ ಹಳ್ಳಿ ಪ್ರದೇಶದ ಕಡಿಮೆ ಶಿಕ್ಷಣ ಪಡೆದ ಜನರೇ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವುದು ಕಂಡು ಬರುತ್ತಿದೆ. ವಿದ್ಯಾವಂತರು ಮತ ಚಲಾಯಿಸಲು ಸೋಮಾರಿತನ ತೋರುವುದು ಅಕ್ಷಮ್ಯ. ನಿಜವಾದ ಅರ್ಥದಲ್ಲಿ ಭಾರತದ ಪ್ರಜೆಗಳಾಗಿ ಇರಬೇಕಾದರೆ ಮತವನ್ನು ತಪ್ಪದೇ ಚಲಾಯಿಸಬೇಕು. ಎಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ಮತದಾನ ನಡೆಯುತ್ತದೆಯೋ ಅಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂದರ್ಥ.
ರಂಜಿತ್‌, ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು ಕಾಪು

ದೇಶದ ಸಮಗ್ರತೆಗೆ ನನ್ನ ಮತ
ನಾನು ಮೊದಲ ಬಾರಿಗೆ ಮತ ಚಲಾಯಿಸುವ ಒಬ್ಬ ಪ್ರಜ್ಞಾವಂತ ಮತದಾರ. ದೇಶದ ಸಮಗ್ರತೆಯನ್ನು ಕಾಯ್ದುಕೊಳ್ಳುವುದರೊಂದಿಗೆ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಲ್ಲ ಸರಕಾರದ ರಚನೆ ಪ್ರತಿಯೊಬ್ಬ ಮತದಾರನ ಕೈಯಲ್ಲಿದೆ. ದೇಶದ ಬಗ್ಗೆ ಚಿಂತಿಸಬಲ್ಲ ಯುವ ಮತದಾರರು ಕಡ್ಡಾಯ ಮತದಾನ ಮಾಡಿ ಸದೃಢ ಸರಕಾರ ರಚನೆಯಾಗುವಂತೆ ನೋಡಿಕೊಳ್ಳಬೇಕು.
ಆಶಿಷ್‌ ಪಾಟ್ಕರ್‌, ಎಂ.ಎಸ್‌.ಆರ್‌.ಎಸ್‌. ಕಾಲೇಜು, ಶಿರ್ವ

ಮತದಿಂದ ಭವಿಷ್ಯ ನಿರ್ಧಾರ
ನಾನು ಮೊದಲ ಬಾರಿಗೆ ಮತ ಚಲಾಯಿಸುವ ಸಂಭ್ರಮದಲ್ಲಿದ್ದೇನೆ. ದೇಶದ ಭವಿಷ್ಯವನ್ನು ಯೋಗ್ಯರ ಕೈಯಲ್ಲಿ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.ಚುನಾವಣೆ ಪ್ರಜಾಪ್ರಭುತ್ವದ ಉತ್ಸವ. ನಮ್ಮ ಒಂದು ಮತದಾನ ದೇಶದ ಮುಂದಿನ ಐದು ವರ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ಯೋಚಿಸಿ ಮತದಾನ ಮಾಡಬೇಕು. ತಪ್ಪದೆ ಮತದಾನ ಮಾಡಿ ಮಾಡಿ, ಇತರರನ್ನು ಮತದಾನ ಮಾಡುವಂತೆ ಪ್ರೇರೇಪಿಸಿ.
-ನಿಶ್ಮಿತಾ ರಾವ್‌, ಎಂ.ಎಸ್‌.ಆರ್‌.ಎಸ್‌.ಕಾಲೇಜು, ಶಿರ್ವ

ಉತ್ತಮ ಭವಿಷ್ಯಕ್ಕೆ ಭಾಷ್ಯ
ಮತದಾನ ಒಂದು ಪವಿತ್ರ ಹಕ್ಕು. ಇದೊಂದು ನನಗೆ ಸಂವಿಧಾನ ನೀಡಿದ ಸುವರ್ಣ ಅವಕಾಶ. ನನ್ನ ದೇಶವಾಸಿಗಳ ಹಿತ ಕಾಯಲು ಹಕ್ಕನ್ನು ಚಲಾಯಿಸುವುದು ನನಗೆ ಅತೀ ಮುಖ್ಯವಾಗಿದೆ. ದೇಶದ ಭವಿಷ್ಯ ನಿರ್ಧರಿಸುವ ಅಧಿಕಾರ ನಮ್ಮದೇ ಆಗಿರುತ್ತದೆ. ಅಭಿವೃದ್ಧಿಗೆ ಸಾಕ್ಷಿಯಾಗೋಣ. ಮತ ಚಲಾಯಿಸಿ ಭವಿಷ್ಯಕ್ಕೆ ಭಾಷ್ಯ ಬರೆಯೋಣ.
ಶೇಕ್‌ ಮುಹಮ್ಮದ್‌ ಸ್ವಾಲಿ, ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು ಕಾಪು.

ಮತದಾನ ನಮ್ಮ ಹಕ್ಕು
ದೇಶದ ಅಭಿವೃದ್ಧಿ ಮಾಡುವಂತಹ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಾವು ಮತಚಲಾಯಿಸಬೇಕು. ಇದು ಸಂವಿಧಾನ ನಮಗೆ ನೀಡಿರುವ ಪರಮೋತ್ಛ ಹಕ್ಕು. ನಮ್ಮ ಕರ್ತವ್ಯ ಕೂಡ. ಪ್ರಸ್ತುತ ಕಾಲಘಟ್ಟದಲ್ಲಿ ಜಾತಿ, ಧರ್ಮ ಸಂಘರ್ಷ ನಡೆಯುತ್ತಿದ್ದು ಇದನ್ನು ಮುಂದಿಡದೇ ದೇಶದ ಬಗ್ಗೆ ಕಾಳಜಿಇರುವಂತಹ ಸಭ್ಯ, ಸ್ವತ್ಛ ವ್ಯಕ್ತಿಯನ್ನು ಗೆಲ್ಲಿಸುವ ಸಲುವಾಗಿ ನಾವು ಮತದಾನ ಮಾಡಬೇಕು.
ಕಾರ್ತಿಕ್‌ ಪ್ರಭು, ಭಂಡಾರ್‌ಕಾರ್ಸ್‌ ಕಾಲೇಜು, ಕುಂದಾಪುರ

ಮತದಾನದ ರಾಯಭಾರಿಗಳಾಗುತ್ತೇವೆ
5 ವರ್ಷಗಳ ಕಾಲ ಅಧಿಕಾರ ನಡೆಸಲು ಅವಕಾಶವಾದರೆ, ಯಾರಿಗೆ ಮತ ಹಾಕಬೇಕು ಎನ್ನುವುದು ನಮಗಿರುವ ಅಧಿಕಾರ. ಅದರಲ್ಲೂ ಯುವಕರ ಜವಾಬ್ದಾರಿ ಮಹತ್ವದ್ದಾಗಿದೆ. ನಾವೇ ಮತದಾನದ ರಾಯಭಾರಿಗಳಾಗಿ, ಹಿರಿಯರನ್ನು ಕೂಡ ಮತದಾನ ಮಾಡಿಸಬೇಕಿದೆ. ನಾಡಿನ ಅಭಿವೃದ್ಧಿ, ಶಿಕ್ಷಣ, ಉದ್ಯೋಗ ರಂಗಕ್ಕೆ ಯಾವ ರೀತಿಯಲ್ಲಿ ಪ್ರಯೋಜನವಾಗುತ್ತಾರೆ ಅನ್ನುವುದನ್ನು ನೋಡಿಕೊಂಡು ಅಂತಹವರನ್ನು ಗೆಲ್ಲಿಸಬೇಕು.
ಶೀಲಾ ನಾವುಂದ, ಶಂಕರನಾರಾಯಣ ಕಾಲೇಜು

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

VOTE1

ನಮ್ಮ ಮತ ಉತ್ತಮ ನಾಯಕನಿಗೆ; ಪಕ್ಷಕ್ಕಲ್ಲ

vote

ಮತದಾನಕ್ಕೆ ಹಿಂದೇಟು ಹಾಕದಿರಿ

vote-1

ಮತ ಚಲಾಯಿಸಿ, ದೇಶ ಬದಲಿಸಿ;ನಾವು ಯಾಕೆ ಮತ ಹಾಕಬೇಕು?

vote

ನಮ್ಮ ಆಡಳಿತವನ್ನು ನಾವೇ ರೂಪಿಸೋಣ

vote

ಸದೃಢ ಭಾರತ, ರಾಷ್ಟ್ರ ರಕ್ಷಣೆಗಾಗಿ ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.