ನಿರ್ವಹಣೆೆ ಇಲ್ಲದ ಬಸ್ರೂರು ಕಲ್ಸಂಕ ಚರಂಡಿ
Team Udayavani, Jun 16, 2019, 5:19 AM IST
ಬಸ್ರೂರು: ಮಳೆಗಾಲ ಆರಂಭವಾಗಿದೆ. ಆದರೆ ಕೆಲವು ಗ್ರಾ.ಪಂ. ವ್ಯಾಪ್ತಿಯಲ್ಲಿ ಇನ್ನೂ ಚರಂಡಿ ನಿರ್ವಹಣೆಯ ಕುರಿತಂತೆ ಗಮನ ವಹಿಸಿಲ್ಲ. ತ್ಯಾಜ್ಯವನ್ನು ತೆಗೆಯದೆ ನೀರು ಸರಾಗವಾಗಿ ಹರಿದು ಹೋಗದ ಸ್ಥಿತಿ ನಿರ್ಮಾಣವಾಗಿದೆ.
ಬಳ್ಕೂರು ಗ್ರಾ.ಪಂ. ವ್ಯಾಪ್ತಿಯ ಬಸ್ರೂರು ಕಲ್ಸಂಕದಿಂದ ಮುಂದಿನ ಸುಮಾರು 200 ಮೀ. ಉದ್ದ ವಾರಾಹಿ ನದಿ ಪಾತ್ರದ ರಸ್ತೆ ಬದಿಯಲ್ಲಿ ಕೊಳೆ ತುಂಬಿಕೊಂಡಿದೆ. ಇಲ್ಲೀಗ ಮಳೆ ಬಂದಿದ್ದು ಚರಂಡಿಯಲ್ಲಿ ನೀರು ಹರಿದು ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸದಾ ವಾಹನ ಓಡಾಡುವ ಈ ಪರಿಸರದಲ್ಲಿ ಗುಲ್ವಾಡಿ ವೆಂಟೆಡ್ ಡ್ಯಾಂ ಸಮೀಪದ ಕೊಳಚೆ ತುಂಬಿದ ಚರಂಡಿಯನ್ನು ಸ್ಥಳೀಯಾಡಳಿತ ತತ್ಕ್ಷಣ ಸ್ವಚ್ಛ ಮಾಡಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.