ಬಸ್ರೂರು: ಹಲವರ ಕೆರೆ ಹೂಳೆತ್ತುವಿಕೆ ಆರಂಭ
Team Udayavani, May 31, 2019, 6:10 AM IST
ಬಸ್ರೂರು: ಐತಿಹಾಸಿಕ ನಗರ ಬಸ್ರೂರಿನಲ್ಲಿ ಏಳು ಕೆರೆಗಳಿದ್ದು, ಏಳೂ ಕೆರೆಗಳು ಹೂಳು ತುಂಬಿ ನಿಷ್ಟ್ರಯೋಜಕವಾಗಿದೆ.
ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿ ನರಸಿಂಹ ಪ್ರಭು ಮತ್ತು ಅವರ ಮಕ್ಕಳು ದೇವಸ್ಥಾನದ ಹತ್ತಿರವಿರುವ ಹಲವರ ಕೆರೆಯನ್ನು ಸ್ವಚ್ಛ್ಛಗೊಳಿಸುವ ಕಾರ್ಯವನ್ನು ನಡೆಸಿದ್ದಾರೆ.
ಹೂಳೆತ್ತುವ ಕಾರ್ಯಕ್ಕೆ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆಯವರ ಸೂಚನೆಯಂತೆ ಗುರುವಾರ ಸಾರ್ವಜನಿಕರು ಕೆರೆಯ ಹೂಳೆತ್ತುವ ಕಾರ್ಯದಲ್ಲಿ ಪಾಲ್ಗೊಂಡರು.
ಹಲವರ ಕೆರೆಯಂತೆ, ಉಳಿದ ಆರೂ ಕೆರೆಗಳ ಹೂಳೆತ್ತಿದರೆ ಜನತೆಯ ಉಪಯೋಗಕ್ಕೆ ಯೋಗ್ಯವಾಗಬಹುದು ಎನ್ನುವ ಮಾತು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.