ಕುಗ್ಗಿದ ತಾಪಂ; ಹಿಗ್ಗಿದ ಜಿಪಂ!

­ಜಿಲ್ಲೆಯಲ್ಲಿನ್ನು 40 ಜಿಪಂ ಕ್ಷೇತ್ರಗಳು­! ತಾಪಂ ಕ್ಷೇತ್ರಗಳ ಸಂಖ್ಯೆ ಗಣನೀಯ ಇಳಿಕೆ

Team Udayavani, Feb 14, 2021, 3:41 PM IST

BGk Zp

ಬಾಗಲಕೋಟೆ: ಬಸವನಾಡು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ವಿಸ್ತಾರವಾಗಿದೆ. ಆದರೆ, ತಾಪಂ ಕ್ಷೇತ್ರಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ.

ಹೌದು, 2016ರ ಜಿಪಂ ಚುನಾವಣೆ ವೇಳೆ ಒಟ್ಟು 36 ಕ್ಷೇತ್ರಗಳಿದ್ದವು. ಅದಕ್ಕೂ ಮುಂಚೆ 2011ರಲ್ಲಿ 32 ಕ್ಷೇತ್ರಗಳನ್ನು ಬಾಗಲಕೋಟೆ ಜಿಪಂ ಹೊಂದಿತ್ತು. ಇದೀಗ 2021ರಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ 4 ಹೆಚ್ಚಳವಾಗಿದ್ದು, ಬರೋಬ್ಬರಿ 40 ಸದಸ್ಯರು ಜಿಪಂಗೆ ಆಯ್ಕೆಯಾಗಲಿದ್ದಾರೆ.

ಕುಗ್ಗಿದ ತಾಪಂ ಕ್ಷೇತ್ರಗಳು: 2016ಕ್ಕೂ ಮುಂಚೆ ಜಿಲ್ಲೆಯಲ್ಲಿ ಆರು ತಾಲೂಕುಗಳಿದ್ದವು. ಆಗ ತಾಪಂ ಕ್ಷೇತ್ರಗಳು 130 ಇದ್ದವು. ಇದೀಗ ಅವುಗಳನ್ನು 110ಕ್ಕೆ ಕಡಿತ ಮಾಡಲಾಗಿದೆ. ಜಿಪಂ ಕ್ಷೇತ್ರಗಳನ್ನು ಹೆಚ್ಚಿಸಿ, ತಾಪಂ ಕ್ಷೇತ್ರಗಳನ್ನು 110ಕ್ಕೆ ಇಳಿಸಿ, ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡುವುದೇ ಜಿಲ್ಲೆಯ ಅಧಿಕಾರಿಗಳಿಗೆ ಸವಾಲಾಗಿದೆ ಎನ್ನಲಾಗಿದೆ.

ಗಲಕೋಟೆ ತಾಲೂಕಿನಲ್ಲಿ ಈ ಮೊದಲು 18 ತಾಪಂ ಕ್ಷೇತ್ರಗಳಿದ್ದವು. ಈಗ ಅವು 13ಕ್ಕೆ ಇಳಿದಿವೆ. ಇನ್ನು ಹುನಗುಂದ ಮತ್ತು ಇಳಕಲ್ಲ ಸೇರಿ ಒಟ್ಟು 21 ಕ್ಷೇತ್ರಗಳಿರುವುದನ್ನು ಪ್ರತ್ಯೇಕ ತಾಲೂಕು ಆದ ಬಳಿಕ ಹುನಗುಂದಕ್ಕೆ 9 ಮತ್ತು ಇಳಕಲ್ಲಗೆ 9 ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿದೆ.

ಬಾದಾಮಿ (ಗುಳೇದಗುಡ್ಡ ಸೇರಿ) ಈ ಮೊದಲು ಒಟ್ಟು 25 ತಾ.ಪಂ. ಕ್ಷೇತ್ರಗಳಿದ್ದವು. ಅದರಲ್ಲಿ ಬಾದಾಮಿಗೆ ಈ ಬಾರಿ 16 ಕ್ಷೇತ್ರ ಹಂಚಿಕೆಯಾಗಿದ್ದರೆ, ಗುಳೇದಗುಡ್ಡಕ್ಕೆ 11 ಕ್ಷೇತ್ರ ವಿಂಗಡಿಸಲು ಚುನಾವಣೆ ಆಯೋಗ ನಿರ್ದೇಶನ ನೀಡಿದೆ. ಜಮಖಂಡಿ (ರಬಕವಿ-ಬನಹಟ್ಟಿ ಸೇರಿ) ತಾಲೂಕಿನಲ್ಲಿ ಮೊದಲು

29 ತಾಪಂ ಕ್ಷೇತ್ರಗಳಿದ್ದವು. ಅದರಲ್ಲಿ ಈ ಬಾರಿ ಜಮಖಂಡಿಗೆ 16, ರಬಕವಿ-ಬನಹಟ್ಟಿ ತಾಪಂ 11 ಕ್ಷೇತ್ರ ಹೊಂದಲಿದೆ. ಇನ್ನು ಮುಧೋಳ ತಾಲೂಕಿನಲ್ಲಿ ಮೊದಲು 22 ತಾಪಂ ಕ್ಷೇತ್ರಗಳಿದ್ದವು. ಮಹಾಲಿಂಗಪುರ ಭಾಗ ರಬಕವಿ-ಬನಹಟ್ಟಿ ತಾಲೂಕಿಗೆ ಸೇರಿದ್ದರಿಂದ ಇಲ್ಲಿಯೂ ಕ್ಷೇತ್ರಗಳ ಕಡಿತವಾಗಿವೆ. ಮುಧೋಳ ತಾಲೂಕಿನಲ್ಲಿ ಈ ಬಾರಿ 13 ತಾಪಂ ಕ್ಷೇತ್ರ ರಚನೆ ಮಾಡಬೇಕಿದೆ. ಬೀಳಗಿ ತಾಪಂನಲ್ಲಿ ಮೊದಲು 15 ಕ್ಷೇತ್ರಗಳಿರುವುದನ್ನು ಈ ಬಾರಿ 13ಕ್ಕೆ ಇಳಿಸಲಾಗಿದೆ.

ಹಿಗ್ಗಿದ ಜಿಪಂ ಕ್ಷೇತ್ರಗಳು: ಜಿಪಂ, ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಚುನಾವಣೆ ಆಯೋಗ ಸ್ಪಷ್ಟ ನಿರ್ದೇಶನ ನೀಡಿದ್ದು, ಆಯಾ ಜಿಪಂ ಕ್ಷೇತ್ರವಿಂಗಡಿಸುವಾಗ, ಗ್ರಾಪಂ ಪೂರ್ಣ ಕ್ಷೇತ್ರವನ್ನು ಒಳಗೊಂಡಿರಬೇಕು. ಅಲ್ಲದೇ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ವಿಂಗಡಿಸಲು ಸೂಚಿಸಿದ್ದು, ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರಗಳು ಹೆಚ್ಚಾಗಿವೆ. 36 ಕ್ಷೇತ್ರಗಳು 40ಕ್ಕೆ ಏರಿಕೆಯಾಗಿದ್ದು, ಬಾಗಲಕೋಟೆ-5, ಹುಗನುಂದ-3, ಬಾದಾಮಿ-6, ಗುಳೇದಗುಡ್ಡ-2, ಇಳಕಲ್ಲ-4, ಜಮಖಂಡಿ-6, ಮುಧೋಳ-5, ಬೀಳಗಿ-5, ರಬಕವಿ-ಬನಹಟ್ಟಿ-4 ಸೇರಿ ಒಟ್ಟು 40 ಜಿಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬೇಕಿದೆ.

ಇದನ್ನೂ ಓದಿ :ಸಿಎಂ ಗಾದಿಗೆ ಕಾಂಗ್ರೆಸ್‌ನಲ್ಲಿ ಮ್ಯೂಸಿಕಲ್‌ ಚೇರ್‌ ಆಟ

ತೇರದಾಳಕ್ಕೆ ಸಿಗದ ಮಾನ್ಯತೆ: ಜಿಲ್ಲೆಯಲ್ಲಿ ಈ ಮೊದಲು ಇದ್ದ 6 ತಾಲೂಕುಗಳು, ಈಗ 9ಕ್ಕೇರಿವೆ. ತೇರದಾಳ ಹೊಸ ತಾಲೂಕು ಘೋಷಣೆಯಾದರೂ, ಅದಕ್ಕೆ ಭೌಗೋಳಿಕ ಕ್ಷೇತ್ರದ ಗಡಿ ನಿಶ್ಚಿಯಿ ಅಂತಿಮಗೊಳಿಸುವ ಕಾರ್ಯ ಮಾಡುವಲ್ಲಿ ಸರ್ಕಾರ ನಿರಾಸಕ್ತಿ ವಹಿಸುತ್ತಿದೆ ಎಂಬ ಅಸಮಾಧಾನ ತೇರದಾಳ ತಾಲೂಕು ಹೋರಾಟ ಸಮಿತಿ ವ್ಯಕ್ತಪಡಿಸಿದೆ. ಚುನಾವಣೆ ಆಯೋಗ ನೀಡಿದ ನಿರ್ದೇಶನದಲ್ಲಿ ತೇರದಾಳ ತಾಲೂಕಿಗೆ ಮಾನ್ಯತೆ ಸಿಕ್ಕಿಲ್ಲ. ಆಯೋಗ ಉಲ್ಲೇಖೀಸಿದ ತಾಲೂಕುಗಳಲ್ಲಿ 9 ಮಾತ್ರ ನೀಡಿದ್ದು, ತೇರದಾಳ ಅನ್ನು ಆಡಳಿತಾತ್ಮಕವಾಗಿ ಅನುಷ್ಠಾನಗೊಳಿಸಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಬಾರಿ ಬಾದಾಮಿಯಿಂದ ಬೇರ್ಪಟ್ಟ ಗುಳೇದಗುಡ್ಡ, ಹುನಗುಂದದಿಂದ ಬೇರ್ಪಟ್ಟ ಇಳಕಲ್ಲ ಹಾಗೂ ಜಮಖಂಡಿಯಿಂದ ಬೇರ್ಪಟ್ಟ ರಬಕವಿ-ಬನಹಟ್ಟಿ ತಾಲೂಕಿನಲ್ಲಿ (ಈಗಾಗಲೇ ತಾಪಂ ಕಚೇರಿ ಆರಂಭಗೊಂಡಿದ್ದು, ಅಧ್ಯಕ್ಷ-ಉಪಾಧ್ಯಕ್ಷರೂ ಆಯ್ಕೆಯಾಗಿದ್ದಾರೆ) ಹೊಸ ಕ್ಷೇತ್ರಗಳ ಪುನರ್‌ ವಿಂಗಡಣೆ ನಡೆಯಲಿದೆ.

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.