ರೈತ ಸಂಘಟನೆಗಳನ್ನುಒಗ್ಗೂಡಿಸುವ ಯತ್ನ
Team Udayavani, Jun 29, 2022, 6:46 PM IST
ಚಿಕ್ಕಮಗಳೂರು: ರಾಜ್ಯಾದ್ಯಂತ ವಿಂಗಡಣೆಯಾಗಿರುವರಾಜ್ಯ ರೈತ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನಮಾಡುವುದಾಗಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಾರಣಾಂತಗಳಿಂದರೈತಸಂಘ ವಿಂಗಡಣೆಯಾಗಿದೆ. ಎಲ್ಲಾಸಂಘಟನೆಗಳನ್ನು ಒಂದು ವೇದಿಕೆಗೆ ತಂದುರೈತ ಸಂಘವನ್ನು ಮೊದಲ ಸ್ಥಿತಿಗೆ ತರುವಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಹೇಳಿದರು.
ಹಿಂದಿನ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ಅವರ ಮೇಲೆ ಭ್ರಷ್ಟಚಾರದ ಆರೋಪ ಕೇಳಿಬಂದ ತಕ್ಷಣತುರ್ತುಸಭೆ ನಡೆಸಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದಕೆಳಗಿಳಿಸಲಾಗಿದೆ. ತಮ್ಮನ್ನು ಸರ್ವಾನುಮತದಿಂದರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದರು.
ಕೋಡಿಹಳ್ಳಿ ಚಂದ್ರಶೇಖರ್ ಅವರು ಅನೇಕ ಬಾರಿಸಂಘದ ಲೆಕ್ಕಪತ್ರಗಳನ್ನು ಕೇಳಿದಾಗ ಅವರು ಸಮರ್ಪಕಉತ್ತರ ನೀಡುತ್ತಿರಲಿಲ್ಲ, ಸರ್ವಾ ಧಿಕಾರಿಯಂತೆವರ್ತಿಸುತ್ತಿದ್ದರು. ಅವರ ನಡೆಯಿಂದ ಅನೇಕರುಸಂಘಟನೆ ತೊರೆದಿದ್ದಾರೆ ಎಂದು ತಿಳಿಸಿದರು.