ಫ್ರಾನ್ಸ್ : ನಿಕೋಟಿನ್ ನಿರ್ಬಂಧ
Team Udayavani, Apr 29, 2020, 3:07 PM IST
ಫ್ರಾನ್ಸ್ : ಸಿಗರೇಟ್ನಲ್ಲಿರುವ ನಿಕೋಟಿನ್ ಅಂಶವು ಜನರಲ್ಲಿ ಕೋವಿಡ್ ಸೋಂಕು ಪ್ರತಿರೋಧಕವಾಗಿ ಕೆಲಸ ಮಾಡುತ್ತದೆ ಎಂದು ಫ್ರಾನ್ಸ್ ಸಂಶೋಧಕರು ತಿಳಿಸಿದ್ದರು. ಈ ಬೆನ್ನಲ್ಲೇ ಸರಕಾರವು ನಿಕೋಟಿನ್ ಉತ್ಪನ್ನಗಳ ಮಾರಾಟದ ಮೇಲೆ ನಿರ್ಬಂಧ ಹೇರಿದೆ.
ದೇಶದಲ್ಲಿನ ಲಾಕ್ಡೌನ್ ಸಡಿಲಗೊಳ್ಳುವವರೆಗೂ ನಿಕೋಟಿನ್ ಮಾರಾಟದ ಮೇಲೆ ನಿಬಂಧನೆ ಹೇರಿರುವ ಸರಕಾರ ಕೇವಲ ಒಂದು ತಿಂಗಳ ಅಗತ್ಯದಷ್ಟು ಮಾತ್ರ ಮಾರಾಟ ನಡೆಸುವಂತೆ ಸೂಚಿಸಿದೆ. ಅದೂ ಪರಿಸ್ಥಿತಿ ಮತ್ತು ಸಂದರ್ಭವನ್ನು ಪರಿಶೀಲಿಸಿ ನಿಕೋಟಿನ್ ಅಂಶ ಇರುವ ಔಷಧ ಪದಾರ್ಥಗಳನ್ನು ನೀಡಬೇಕೆಂದು ತಿಳಿಸಿದೆ.
ದುರ್ಬಳಕೆಯ ಸಾಧ್ಯತೆ
ನಿಕೋಟಿನ್ ಸೋಂಕು ತಗುಲದಂತೆ ತಡೆಯುತ್ತದೆ ಎಂಬ ಮಾಹಿತಿ ದುರ್ಬಳಕೆ ಆಗುವ ಸಾಧ್ಯತೆ ಇದೆ. ಜನರ ತಪ್ಪು ಗ್ರಹಿಕೆಗೂ ಕಾರಣವಾಗಬಹುದು. ಪರಿಣಾಮವಾಗಿ ಇನ್ನಿತರ ಆರೋಗ್ಯ ಸಮಸ್ಯೆಗಳು ಎದುರಾಗಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರಕಾರ ಸುತ್ತೋಲೆ ಹೊರಡಿಸಿದೆ.
2 ವಿಭಿನ್ನ ವರದಿ
ಪ್ಯಾರಿಸ್ನ ಉನ್ನತ ಆಸ್ಪತ್ರೆಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಸುಮಾರು 500 ಕೋವಿಡ್-19 ರೋಗಿಗಳನ್ನು ಪರೀಕ್ಷಿಸಿದ್ದು, ಶೇ.5ರಷ್ಟು ಮಾತ್ರ ಧೂಮಪಾನಿಗಳು ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ಕಳೆದ ತಿಂಗಳು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಇದೇ ರೀತಿಯ ಸಂಶೋಧನೆ ವರದಿ ಪ್ರಕಟವಾಗಿದ್ದು, ಚೀನದ 1,000(ಶೇ.26) ಜನಸಂಖ್ಯೆಯ ಪೈಕಿ ಶೇ12.6 ರಷ್ಟು ಧೂಮಪಾನ ವ್ಯಸನಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು ಎಂದಿದೆ.
ಈ ಎಲ್ಲ ಅಂಶವನ್ನು ಮನದಲ್ಲಿರಿಸಿಕೊಂಡು ಫ್ರಾನ್ಸ್ ಈ ನಿರ್ಧಾರ ಕೈಗೊಂಡಿದ್ದು, ಸಂಪೂರ್ಣವಾಗಿ ಸಂಶೋಧನ ಮಾಹಿತಿ ಹೊರ ಬರುವವರೆಗೂ ನಿಕೋಟಿನ್ ಮಾರಾಟದ ಮೇಲೆ ಮಿತಿ ಇರಲಿದೆ ಎಂದು ಹೇಳಿದೆ.
ಫ್ರಾನ್ಸ್ನಲ್ಲಿ ಪ್ರತಿ ವರ್ಷ ತಂಬಾಕಿನಿಂದಾಗಿ 70 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಇದನ್ನೂ ಗಮನಿಸುವುದು ಒಳಿತು ಎಂದಿರುವ ಫ್ರಾನ್ಸ್ ಆರೋಗ್ಯ ಸಚಿವ ಆಲಿವಿಯರ್ವೊರಾನ್, ಕೋವಿಡ್ ಹತ್ತಿಕ್ಕಲು ನಿಕೋಟಿನ್ ಉತ್ಪನ್ನಗಳನ್ನು ಖರೀದಿಸಬೇಡಿ. ಆದಷ್ಟು ಅವುಗಳಿಂದ ದೂರ ಇರಿ. ಅದೇ ಒಳಿತು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್