ಗುಡ್ನೈಟ್ ಮೆಸೇಜಿನ ಗುಂಡಿನ ದಾಳಿ
Team Udayavani, Apr 2, 2019, 6:00 AM IST
ನನ್ನ ಬಳಿ ಹಣವಿಲ್ಲದೇ ಇದ್ದರೂ, ವಾಟ್ಸಾಪ್ಗಾಗಿಯೇ ಮೊಬೈಲನ್ನು ಖರೀದಿಸಿದವಳು ನಾನು. ನನ್ನ ಗೆಳತಿಯರು ಈ ಆ್ಯಪ್ನಲ್ಲಿಯೇ ದಿನವಿಡೀ ಮುಳುಗಿರುತ್ತಿದ್ದರಿಂದ ನನಗೂ ಆ ಆಸೆ ಹುಟ್ಟಿ, ವಾಟ್ಸಾಪ್ ದೇಶದ ಪ್ರಜೆಯಾದೆ. ಸಂಪರ್ಕದಲ್ಲಿದ್ದ ಎಲ್ಲ ಸ್ನೇಹಿತೆಯರ ಜೊತೆ ಫೋನ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದೆ. ಕೊನೆಗೂ ಒಂದು ದಿನ, “ಡಿಗ್ರಿ ರಾಕರ್’ ಎಂಬ ಗ್ರೂಪ್ ಅನ್ನು ಸೃಷ್ಟಿಸಿದೆ.
ಆದರೆ, ಈ ಗ್ರೂಪ್ಗೆ ತನ್ನದೇ ಆದ ಸಂವಿಧಾನವನ್ನು ಅಳವಡಿಸಿದೆ. ಯಾವುದಕ್ಕೂ ಬಾರದ ಮೆಸೇಜುಗಳನ್ನು ಹಾಕೋದು ಬೇಡ, ಉಪಯೋಗಕ್ಕೆ ಬರುವಂಥ ಮಾಹಿತಿಗಳು ಇಲ್ಲಿ ಶೇರ್ ಆದರೆ ಚೆನ್ನ ಎಂಬ ಕಾಳಜಿ ನನ್ನದಾಗಿತ್ತು. ಆದರೆ, ಬರುತ್ತಾ ಬರುತ್ತಾ ರಾಯರ ಕುದುರೆ ಇನ್ನೇನೋ ಆಯ್ತು ಅಂತಾರಲ್ಲ, ಹಾಗಾಯ್ತು ನಮ್ಮ ಗ್ರೂಪ್ನ ಕತೆ. ನಿತ್ಯವೂ ಪೋಸ್ಟ್ ಆಗುತ್ತಿದ್ದ ಪ್ರಚಲಿತ ವಿದ್ಯಮಾನ, ಔದ್ಯೋಗಿಕ ಮಾಹಿತಿಗಳು ನಿಂತೇ ಹೋದವು. ಶುಭೋದಯ, ಶುಭರಾತ್ರಿ, ಊಟ ಆಯ್ತಾ, ಮತ್ತೆ ಇನ್ನೇನ್ ಸಮಾಚಾರ… ಇಂಥ ಅನಗತ್ಯ ಸಂದೇಶ, ಚರ್ಚೆಗಳೇ ವಿಜೃಂಭಿಸಿಬಿಟ್ಟವು. ಯಾಕಾದರೂ ಈ ಗ್ರೂಪ್ ಸೃಷ್ಟಿಸಿಬಿಟ್ಟೆನೋ ಅಂತ ನನಗೇ ಚಿಂತೆ ಆಯ್ತು. ಹಾಗಾಗಿ, ಆ ಗ್ರೂಪ್ನಿಂದ ನಾನೇ ಹೊರಕ್ಕೆ ಜಿಗಿದೆ.
ಪೂರ್ಣಿಮಾ ಹಿರೇಮಠ, ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ