ಬರಿಯ ಓಟವಲ್ಲ; ಸಮಗ್ರ ತರಬೇತಿಯ ತಾಣ

ಮೂಡುಬಿದಿರೆಯಲ್ಲಿ 6ನೇ ವರ್ಷದ ಕಂಬಳ ತರಬೇತಿ ಶಿಬಿರ

Team Udayavani, Sep 30, 2021, 6:04 AM IST

ಬರಿಯ ಓಟವಲ್ಲ; ಸಮಗ್ರ ತರಬೇತಿಯ ತಾಣ

ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯಲ್ಲಿರುವ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ಈಗ ಕಂಬಳದ ತರಬೇತಿ ಪಡೆಯುತ್ತಿರುವ 18ರಿಂದ 27 ವರ್ಷ ವಯೋಮಾನದ 33 ಮಂದಿ ಯುವಜನರದ್ದೇ ಸಂಭ್ರಮ.

ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ವ್ಯಾಪ್ತಿಯ “ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಸೆ. 19ರಿಂದ ಹದಿನಾರು ದಿನಗಳ ಪರ್ಯಂತ 6ನೇ ವರ್ಷದ ಕಂಬಳ ತರಬೇತಿ ಶಿಬಿರ ನಡೆಯುತ್ತಿದೆ.

ಕಂಬಳದ ವಿಶ್ವಕೋಶ ಹೆಸರಾಂತ ಗುಣಪಾಲ ಕಡಂಬರ ಮುತುವರ್ಜಿ, ಮಾರ್ಗದರ್ಶನದಲ್ಲಿ 5 ತರಬೇತಿ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದೆ. ಇದು ಆರನೇಯದು.

ಇದು ಬರೇ ಕೋಣಗಳನ್ನು ಓಡಿಸು ವವವರ ತರಬೇತಿ ಅಲ್ಲ. ಇಲ್ಲಿ ಕೋಣಗಳ ಪರಿಪಾಲನೆ, ಆರೈಕೆಯಿಂದ ತೊಡಗಿ ಮನುಷ್ಯ ಪಶುಪ್ರೀತಿಯನ್ನು ರೂಢಿಸಿಕೊಳ್ಳುವ ಬಗ್ಗೆ ಶಿಬಿರದಲ್ಲಿ ತಿಳಿಸಲಾಗುತ್ತದೆ.

ಶಿಬಿರದ ವೇಳಾಪಟ್ಟಿ ಮುಂಜಾನೆ ಗಂಟೆ 5.30ರಿಂದಲೇ ಪ್ರಾರಂಭ. ಯೋಗಾಸನ, ವ್ಯಾಯಾಮ, ಕೋಣಗಳ ಪಾಲನೆ,ಲಾಲನೆ, ಮಜ್ಜನ, ಕೋಣಗಳೊಂದಿಗೆ ಓಟದ ತರ ಬೇತಿ, ಕಂಬಳಕ್ಕೆ ಸಂಬಂಧಿಸಿದ ಪರಿಕ ರಗಳ ಪರಿಚಯ, ವಿಶೇಷವಾಗಿ ಕಂಬಳದ ಕೋಣ ಗಳಿಗೆ ಸಂಬಂಧಿಸಿದ ವಿವಿಧ ಹಗ್ಗಗಳ ನೇಯ್ಗೆ, ಬೆತ್ತದ ಕರಕೌಶಲ ಇವನ್ನೆಲ್ಲ ಕಲಿಸಲಾಗುತ್ತಿದೆ.

ಇದನ್ನೂ ಓದಿ:ಸರಕಾರಕ್ಕೆ 48 ಗಂಟೆಗಳ ಗಡುವು ನೀಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಏನೆಲ್ಲ ಹಗ್ಗಗಳು, ಬೆತ್ತಗಳು?
ಕೋಂಟುದ ಬಲ್ಲ್ , ಪೊನಕೆದ ಬಲ್ಲ್ , ನೆತ್ತಿದ ಬಲ್ಲ್ (ಹಣೆಯ ಹಗ್ಗ), ಕೋಣಗಳನ್ನು ಓಡಿಸುವ “ಗಿಡಾವುನ ಬಲ್ಲ್ , ಪನೆತ ಬಲ್ಲ್ , ಕೋಣಗಳನ್ನು ಕರೆತರುವಾಗ ಹಾಕಲಾಗುವ “ಕೊನಪುನ ಬಲ್ಲ್ ‘ಹೀಗೆ ಆರು ಬಗೆಯ ಹಗ್ಗಗಳನ್ನು ಹೊಸೆಯುವ, ನೇಯ್ಗೆ ಮಾಡುವ, ಕಲಾತ್ಮಕ ಬೆತ್ತ ತಯಾರಿಸುವ ಕರ ಕೌಶಲವನ್ನು ಶಿಬಿರಾಧಿಕಾರಿ ಸರಪಾಡಿ ಜೋನ್‌ ಸಿರಿಲ್‌ ಡಿ’ಸೋಜಾ ಜತೆಗೆ ರಾಮಕೃಷ್ಣ ರೆಂಜಾಳ, ಕಡಂದಲೆ ಗಣೇಶ ಸಫ‌ಲಿಗ ಮಾರ್ಗದರ್ಶನ ನೀಡುತ್ತಿದ್ದಾರೆ.

ಶಿಬಿರದಲ್ಲಿ ನಾಯಕತ್ವ, ವ್ಯಕ್ತಿತ್ವ ವಿಕಸನ, ಆರೋಗ್ಯಕರ ಆಹಾರ, ಕಂಬಳದ ಧಾರ್ಮಿಕ ಆಚರಣೆ, ನಿಯಮ/ಸಮಯ ಪಾಲನೆ, ಕಂಬಳ ಸುಧಾರಣೆಯಲ್ಲಿ ಕೋಣದ ಯಜಮಾನರ ಪಾತ್ರ, ಪರಿಕರ ರಚನೆ, ದೈಹಿಕ ಕ್ಷಮತೆ, ವಿಮೆ, ಕೋಣಗಳ ಆರೈಕೆ, ತರಬೇತಿ, ಪ್ರಥಮ ಚಿಕಿತ್ಸೆ, ತುಳುನಾಡ ಸಂಸ್ಕೃತಿ, ಕಂಬಳದಲ್ಲಿ ಸಾಮಾಜಿಕ ಪಾತ್ರ ಇಂಥ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಅಮೂಲ್ಯ ಮಾಹಿತಿ ನೀಡಲಾಗುತ್ತಿದೆ.

ತುಳು ಅಕಾಡೆಮಿ ಮುದ್ರೆ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌ ಈ ತರಬೇತಿ ಶಿಬಿರಕ್ಕೆ ಸಹಭಾಗಿತ್ವ ಸಾರಿದ್ದು, ಸರಕಾರಿ ಲಾಂಛನದೊಂದಿಗೆ, ಅಕಾಡೆಮಿಯ ಮುದ್ರೆಯೊಂದಿಗೆ ಪಾಲ್ಗೊಂಡವರಿಗೆ ಪ್ರಮಾಣಪತ್ರ ಲಭಿಸಲಿದೆ.

ಯೋಗ ತರಬೇತಿಯಲ್ಲಿ ಆಳ್ವಾಸ್‌ನ ದೈಹಿಕ ಶಿಕ್ಷಣ ಶಿಕ್ಷಕ ವಸಂತ ಜೋಗಿ, ಶಾಂತಾರಾಮ್‌, ಸೀತಾರಾಮ ಶೆಟ್ಟಿ, ಬಂಟ್ವಾಳ, ರವೀಂದ್ರ ಕುಮಾರ ಕುಕ್ಕುಂದೂರು, ನಟರಾಜ ಹೆಗ್ಡೆ ಹಿರಿಯಡಕ, ಸುರೇಶ್‌ ಕೆ. ಪೂಜಾರಿ ರೆಂಜಾಳ ಕಾರ್ಯ, ಸುಭಾಶಚಂದ್ರ ಚೌಟ, ಜ್ವಾಲಾಪ್ರಸಾದ್‌ ಪಡ್ಯಾರ ಮನೆ ಈದು, ಆದಿರಾಜ ಜೈನ್‌, ಅಲ್ಲಿಪಾದೆ, ಉಮೇಶ ಕರ್ಕೇರ ಪುತ್ತೂರು, ಶ್ರೀಧರ ಆಚಾರ್ಯ ಸಾಣೂರು ಮೊದಲಾದವರಿದ್ದಾರೆ.

ಶಿಸ್ತು ಸಹಿತ ತರಬೇತಿ
ಕಂಬಳದ ಕೋಣಗಳ ಜತೆಗೆ ಎರಡು ದಿನ ನರ್ವಸ್‌ ಆಗಿದ್ದೆ. ಮೂರನೇ ದಿನದಿಂದ ಕೋಣಗಳೊಂದಿಗೆ ಸಲುಗೆಯಿಂದಿರಲು ಸಾಧ್ಯವಾಗುತ್ತಿದೆ. ಶಿಸ್ತು ಸಹಿತ ತರಬೇತಿ. ಎಲ್ಲವೂಉತ್ತಮ ಗುಣಮಟ್ಟದ್ದು.
-ಸೃಜನ್‌ ರೈ, ದೈಹಿಕ ಶಿಕ್ಷಣ ಶಿಕ್ಷಕ ಸಿದ್ದಕಟ್ಟೆ, ಶಿಬಿರಾರ್ಥಿ

 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.