ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು
Team Udayavani, May 27, 2022, 11:52 PM IST
ಕುಂದಾಪುರ: ಕುಂದಾಪುರ ತಾ.ಪಂ. ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಿಗೆ ಎರಡು ವರ್ಷಗಳಿಂದ ಅನುದಾನ ಬಿಡುಗಡೆ ಯಾಗದ ಪ್ರಕರಣ ಕೊನೆಗೂ ಇತ್ಯರ್ಥಗೊಂಡಿದೆ. ಪೂರ್ಣಗೊಂಡ 13 ಕಾಮಗಾರಿಗಳ 47.69 ಲಕ್ಷ ರೂ. ಬಿಡುಗಡೆಯಾಗಿದೆ.
ರಾಜ್ಯದ ಉಳಿದೆಲ್ಲ ತಾ.ಪಂ.ಗಳಿಗೆ ಹಣ ಬಂದರೂ ಕುಂದಾ ಪುರ ಮಾತ್ರ ಬಾಕಿಯಾಗಿತ್ತು. 15ನೇಹಣಕಾಸು ಯೋಜನೆಯಡಿ 2020-21 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಗೆ 8 ಕೋ.ರೂ., ದ.ಕ. ಜಿಲ್ಲೆಗೆ 10 ಕೋ.ರೂ. ಬಿಡುಗಡೆ ಯಾಗಿತ್ತು. 2020ರ ಜೂ. 19ರಂದು ಒಂದನೇ ಕಂತಿನ ಅನಿರ್ಬಂಧಿತ ಅನುದಾನ, ಜೂ. 22ರಂದು ಅನಿರ್ಬಂಧಿತ ಅನುದಾನ, 2021ರ ಫೆ. 3ರಂದು ಎರಡನೇ ಕಂತಿನ ಅನಿರ್ಬಂಧಿತ ಅನುದಾನ, 2021ರ ಮಾ. 30ರಂದು ಎರಡನೇ ಕಂತಿನ ನಿರ್ಬಂಧಿತ ಅನುದಾನ ಬಿಡುಗಡೆಯಾಗಿತ್ತು. ಮೊದಲ ಕಂತಿನ ಅನುದಾನ 47.69 ಲಕ್ಷ ರೂ. 2020ರ ಆ. 29ರಂದು ಬಿಡುಗಡೆಯಾಗಿತ್ತು. ಎರಡನೇ ಕಂತು 47.69 ಲಕ್ಷ ರೂ. ತಾ.ಪಂ. ಖಾತೆಗೆ ಜಮೆಯಾಗಲು ಬಾಕಿಯಾಗಿತ್ತು. ಈ ಕುರಿತು ಪತ್ರ ವ್ಯವಹಾರ ನಡೆಸಿದ್ದರೂ ಪ್ರತಿ ಕ್ರಿಯೆ ಸಕಾರಾತ್ಮಕವಾಗಿರಲಿಲ್ಲ.
ತಾ.ಪಂ. ಅನುದಾನ ಬಾಕಿ ಯಾದ ಕುರಿತು “ಉದಯವಾಣಿ’ ಮೇ 1ರಂದು “ಕುಂದಾಪುರ ತಾ.ಪಂ.: 2 ವರ್ಷವಾದರೂ ಬಾರದ ಅನುದಾನ, ರಾಜ್ಯದ ಬೇರೆಲ್ಲ ಕಡೆಗೂ ಬಿಡುಗಡೆ; ಇದೊಂದು ಮಾತ್ರ ಬಾಕಿ’ ಎಂದು ವರದಿ ಪ್ರಕಟಿಸಿತ್ತು. ವರದಿಗೆ ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಡಾ| ನವೀನ್ ಭಟ್, ಜಿ.ಪಂ. ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್ ಮೊದಲಾದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
MUST WATCH
ಹೊಸ ಸೇರ್ಪಡೆ
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…