ಇನ್ನಾ ಗ್ರಾಮದಲ್ಲಿ ಚಿರತೆ : ಆತಂಕದಲ್ಲಿ ಜನತೆ
Team Udayavani, May 16, 2019, 6:10 AM IST
ಕಾರ್ಕಳ: ತಾಲೂಕಿನ ಇನ್ನಾ ಗ್ರಾಮದಲ್ಲಿ ಚಿರತೆ ಕಾಣಸಿಗುತ್ತಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.
ಮೇ 13ರಂದು ಇಲ್ಲಿನ ಕೇದಿಗೆ ನಿವಾಸಿಗಳಾದ ಸುರೇಶ್ ಹಾಗೂ ಸತೀಶ್ ಎಂಬವರ ಕೊಟ್ಟಿಗೆಯಲ್ಲಿದ್ದ ಕರುಗಳನ್ನು ಚಿರತೆಯೊಂದು ಕೊಂದು ಹಾಕಿದೆ. ಈ ಕುರಿತು ಅರಣ್ಯ ರಕ್ಷಕ ರಾಜು ಹಾಗೂ ಕಾರ್ಕಳ ಪಶಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ| ಎಚ್. ಸುಬ್ರಹ್ಮಣ್ಯ ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಚಿರತೆಯ ಹಾವಳಿಯಿಂದ ಗ್ರಾಮದ ಜನತೆ ಭಯಭೀತಗೊಂಡಿದ್ದು, ರಾತ್ರಿ ವೇಳೆ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.