ಹತ್ತು ಸಾವಿರ ಚೀನೀ ಸೈನಿಕರೂ ಹಿಂದೆ ಸರಿಯಲಿ; ಪೂರ್ವ ಲಡಾಖ್ನಿಂದಷ್ಟೇ ಕಾಲ್ಕಿತ್ತರೆ ಸಾಲದು
ಎಲ್ಎಸಿ ಉದ್ದಕ್ಕೂ ನಿಯೋಜನೆಗೊಂಡಿರುವ ಡ್ರ್ಯಾಗನ್ ಪಡೆ
Team Udayavani, Jun 11, 2020, 8:29 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪೂರ್ವ ಲಡಾಖ್ನ 3 ಭಾಗಗಳಲ್ಲಷ್ಟೇ ಚೀನ ಹಿಂದೆ ಸರಿದರೆ ಸಾಲದು. ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಉಳಿದ ಭಾಗಗಳಲ್ಲಿ ನಿಯೋಜಿಸಿರುವ 10 ಸಾವಿರಕ್ಕೂ ಅಧಿಕ ಸಂಖ್ಯೆಯ ಸೈನಿಕರನ್ನೂ ಹಿಂದೆಗೆದುಕೊಳ್ಳಬೇಕು. ಆಗ ಮಾತ್ರವೇ ಗಡಿಬಿಕ್ಕಟ್ಟು ಶಮನಗೊಳ್ಳಲು ಸಾಧ್ಯ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಜೂ.6ರ ಮಾತುಕತೆಯ ಬಳಿಕ ಚೀನ ಗಲ್ವಾನ್ ತೀರದ 3 ಭಾಗಗಳಿಂದ 2ರಿಂದ 2.5 ಕಿ.ಮೀ. ಹಿಂದೆ ಸರಿದಿದೆ. ಆದರೆ, ಎಲ್ಎಸಿಯ ಮಿಕ್ಕ ಕಡೆಗಳಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯ ಬೃಹತ್ ಪಡೆ ನಿಯೋಜನೆಗೊಂಡಿದೆ. “ಮಿಲಿಟರಿ ಕಾಮಗಾರಿ, ಭಾರೀ ಫಿರಂಗಿಗಳ ನಿಯೋಜನೆ, ಯುದ್ಧವಾಹನಗಳ ಓಡಾಟ ನಿಲ್ಲಿಸಿದಾಗ ಮಾತ್ರ ಗಡಿಯಲ್ಲಿನ ಒತ್ತಡ ಗಳು ಕಡಿಮೆಯಾಗುತ್ತವೆ’ ಎಂದು ಮೂಲಗಳು ತಿಳಿಸಿವೆ.
“ಮೇ 4ರಂದು ಗಸ್ತು ಪಾಯಿಂಟ್ನ ಸನಿಹದಲ್ಲೇ ಯುದ್ಧವಾಹನಗಳೊಂದಿಗೆ ಪಿಎಲ್ಎ ಕಾಲಾಳುಪಡೆಯ ಬೃಹತ್ ಪರೇಡ್ ನಡೆಸಿತ್ತು. ಚೀನಾದ ಈ ವರ್ತನೆ ಗಮನಿಸಿ ಭಾರತೀಯ ಸೇನಾಪಡೆ ಎಲ್ಎಸಿಯ ಉದ್ದಕ್ಕೂ ಹತ್ತು ಸಾವಿರ ಸೈನಿಕರನ್ನು ನಿಯೋಜಿ ಸಿದೆ. ಚೀನೀ ಸೈನಿಕರ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸುತ್ತಿದ್ದೇವೆ’ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಸುತ್ತಿನ ಮಾತುಕತೆ: ಉಭಯ ರಾಷ್ಟ್ರಗಳ ನಡುವೆ ಮುಂದಿನ 10 ದಿನಗಳಲ್ಲಿ ಬೆಟಾಲಿಯನ್, ಬ್ರಿಗೇಡ್ ಹಾಗೂ ಮೇಜರ್ ಜನರಲ್ ಮಟ್ಟದಲ್ಲಿ 3 ಸುತ್ತಿನ ಮಾತುಕತೆಗಳು ಏರ್ಪಡುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
MUST WATCH
ಹೊಸ ಸೇರ್ಪಡೆ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ