ನೇಮ್‌ ಬದಲಾದರೆ ನಾಮ!

ಹೆಸರಲ್ಲೇನಿದೆ ಅನ್ಬೇಡಿ...

Team Udayavani, Sep 18, 2019, 5:00 AM IST

e-18

“ನಿಮ್ಮ ಹೆಸರು…’ ಅಂದೆ, ಆಕೆಯ ವಿವರ ಬರೆದುಕೊಳ್ಳುತ್ತ. 2 ನಿಮಿಷವಾದರೂ ಉತ್ತರವಿಲ್ಲ! “ಅಯ್ಯ..ಹೆಸರು ಹೇಳಲೂ ಇಷ್ಟು ಯೋಚಿಸಬೇಕೆ..?’ ಆಕೆ ನನ್ನ ಕ್ಲೈಂಟ್‌. ವಿಮಾ ಸಂಸ್ಥೆಯ ಉದ್ಯೋಗಿಯಾಗಿ ಈ ಪ್ರಶ್ನೆಯನ್ನು ಆಗಾಗ
ಕೇಳಬೇಕಾಗುತ್ತದೆ. “ಮೇಡಂ, ಅದೇನಂದ್ರೆ.. ನನ್ನ ಹೆಸ್ರು
ಚಿತ್ರಾ ಅಂತ. ಆದ್ರೆ, ಮದ್ವೆ ಆದ್ಮೇಲೆ ಗಂಡನ್‌ ಮನೇಲಿ ನಿಧಿ ಅಂತ ಕರೀತಾರೆ. ಸೋ..ಯಾವ ಹೆಸ್ರು ಹೇಳಲಿ ಅಂತ
ಗೊಂದಲ ಆಯ್ತು..’ ಅಂದರಾಕೆ. ಇದೇನೂ ಹೊಸದಲ್ಲ.100ರಲ್ಲಿ 40ರಷ್ಟು ಹೆಣ್ಣುಮಕ್ಕಳಿಗೆ ಹೀಗೇನೇ. ಶಾಲೆಯ ದಾಖಲಾತಿಯಲ್ಲಿ ಒಂದು ಹೆಸರು. ಕೆಲವರಿಗೆ ಮದುವೆಯ ನಂತರ ಪತಿಯ ಮನೆತನದ ಹೆಸರು
ಸೇರಿಸಿಕೊಳ್ಳಬೇಕೆಂಬ ಒತ್ತಾಯವಿರುತ್ತದೆ.

ನಿಮಗೆ ಗೊತ್ತಿರಲಿ.. ಹೆಸರಿನ ಮುಂದೆ ಪತಿಯ ಹೆಸರನ್ನು/ಸರ್‌ನೇಮ್‌ ಅನ್ನು ಸೇರಿಸಿ ಬರೆಯುವುದು ರೂಢಿಗತವಾಗಿದೆಯೇ ಹೊರತು ಕಾನೂನಿನ ಪ್ರಕಾರ ಅದು ಪೂರ್ತಿ ಸರಿ ಅಲ್ಲ. ಶಾಲೆಯ ದಾಖಲಾತಿಯಲ್ಲಿರುವ ಹೆಸರನ್ನೇ ಬ್ಯಾಂಕ್‌, ಆಧಾರ್‌, ಪ್ಯಾನ್‌ ಕಾರ್ಡ್‌ಗಳಲ್ಲಿ ಬಳಸಿದ್ದರೆ ಒಳ್ಳೆಯದು. ಅನವಶ್ಯಕ ತೊಂದರೆಗಳಾಗುವುದಿಲ್ಲ. ಒಮ್ಮೆ ಬದಲಾಯಿಸಲೇ ಬೇಕಾದ ಅನಿವಾರ್ಯತೆ ಇದ್ದರೆ..ಒಂದು ಅಫಿಡವಿಟ್‌ ಮಾಡಿಸಿ
ಇಟ್ಟುಕೊಳ್ಳುವುದು ಒಳ್ಳೆಯದು. ಮ್ಯಾರೇಜ್‌ ಸರ್ಟಿಫಿಕೇಟ್‌ ಮಾಡಿಸಿಕೊಳ್ಳುವುದು ಉಪಯುಕ್ತ. ನನ್ನ ಅನುಭವದ ಮಾತಿದು.

ಬಹಳಷ್ಟು ಹೆಣ್ಣುಮಕ್ಕಳು ಮದುವೆಯ ನಂತರ ಇಂಥ ದಾಖಲಾತಿಗಳ ಬಗ್ಗೆ ಬಹಳ ನಿರ್ಲಕ್ಷ್ಯ ಮಾಡುತ್ತಾರೆ. ಶಾಲೆ, ಕಾಲೇಜುಗಳಿಂದ ಸರ್ಟಿಫಿಕೇಟ್‌ಗಳನ್ನೇ (ಅಂಕಪಟ್ಟಿ) ತಂದಿಟ್ಟುಕೊಳ್ಳದ ಹೆಣ್ಣು ಮಕ್ಕಳೂ ಇದ್ದಾರೆ…!

ಜನನ ಪ್ರಮಾಣ ಪತ್ರ, ಆಧಾರ್‌, ಪ್ಯಾನ್‌ ಇತ್ಯಾದಿ ದಾಖಲೆಗಳಲ್ಲಿರುವ ವಿವರಗಳು ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಖಾತ್ರಿಮಾಡಿಕೊಳ್ಳಬೇಕು. ತಪ್ಪಾಗಿದ್ದಲ್ಲಿ ಸರಿಪಡಿಸಿಕೊಳ್ಳಬೇಕು.
ಒಮ್ಮೆ ತಮ್ಮ ವಿಮೆಗೆ ಪತ್ನಿಯನ್ನು ನಾಮಿನಿಯಾಗಿ ಮಾಡಿದ್ದವರೊಬ್ಬರು
ಅಪಘಾತದರಲ್ಲಿ ತೀರಿಹೋದರು. ಪತ್ನಿಯ ಹೆಸರನ್ನು ಅವರು ಸುಮಿತ್ರಾ ಎಂದು ನಮೂದಿಸಿದ್ದರು. ಆದರೆ ಆಕೆಯ ಆಧಾರ್‌, ಪ್ಯಾನ್‌ ಕಾರ್ಡ್‌, ಬ್ಯಾಂಕ್‌ ದಾಖಲೆಗಳಲ್ಲಿ ಸುಮಾ ಎಂಬುದಾಗಿ ಇತ್ತು. ಶಾಲೆಯ ದಾಖಲಾತಿ ನೋಡಿದರೆ..ಅಲ್ಲಿದ್ದದ್ದು ಸುನಿತಾ ಎಂಬ ಹೆಸರು…!

ಸುಮ್ಮನೆ ಅನವಶ್ಯಕ ಗೊಂದಲ.. ರಗಳೆ..ಪರಿಹಾರ ಸಿಗುವಲ್ಲಿ ವಿಳಂಬ..ಅದೂ ಹೆಸರಿನ ತಪ್ಪಿನಿಂದಾಗಿ..! ಕೆಲವೊಮ್ಮೆ ಅದು ನಮ್ಮ
ಸ್ವಯಂಕೃತಾಪರಾಧವೂ ಹೌದು. ನಿರ್ಲಕ್ಷ್ಯವೂ ಹೌದು. ಹೆಸರಲ್ಲೇನಿದೆ ಬಿಡಿ.. ಅನ್ನುತ್ತೇವಲ್ಲ..? ಹೆಸರೆಂಬುದು ಖಂಡಿತ ವಾಗಿಯೂ ನಿರ್ಲಕ್ಷ್ಯ ಮಾಡುವಂಥದ್ದಲ್ಲ. ಗೆಳತಿಯರೇ..ನೆನಪಿರಲಿ…

ಸುಮನಾ ಮಂಜುನಾಥ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.