ಕುಂದಾಪುರದಲ್ಲಿ ಗರಿಗಳ ರವಿವಾರ
Team Udayavani, Apr 15, 2019, 6:30 AM IST
ಕುಂದಾಪುರ: ಬಹಳ ಪುರಾತನ ಚಾರಿತ್ರ್ಯವುಳ್ಳ ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ ಗರಿಗಳ ರವಿವಾರ ಹಬ್ಬವನ್ನು ಬಹಳ ಭಕ್ತಿ ಪೂಜೆಯಿಂದ ಆಚರಿಸಲಾಯಿತು.
ಗರಿಗಳ ಆಶೀರ್ವಚನ ಕಾರ್ಯವನ್ನು ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಫಾ| ಪ್ರವೀಣ್ ಅಮೃತ್ ಮಾರ್ಟಿಸ್ ನಡೆಸಿಕೊಟ್ಟರು.
ಭಕ್ತಿಯಿಂದ ಆಚರಿಸೋಣ
ಪ್ರಧಾನ ಧರ್ಮಗುರು ಫಾ| ಸ್ಟ್ಯಾನಿ ತಾವ್ರೊ, ಯೇಸು ಯಾತನೆ, ಕಷ್ಟ ಹಿಂಸೆ ಅನುಭವಿಸಿದ ಅನಂತರ ದೇವರ ಮಾತಿನಂತೆ ನಡೆದು ಜಯಶಾಲಿಯಾದ, ಹಾಗೇ ನಮಗೂ ಕೂಡ ಕಷ್ಟ, ಯಾತನೆ, ಅವಮಾನ, ಹಿಂಸೆ ಅನುಭವಿಸಿದಲ್ಲಿ ಮೋಕ್ಷ ಸಿಗುತ್ತದೆ. ಯೇಸು ತನ್ನನ್ನು ಶಿಲುಬೆಗೆ ಏರಿಸಿದ ಪಾಪಿಗಳಿಗೆ ಕ್ಷಮೆ ನೀಡಿದ ಕರುಣಾಳು. ಇದನ್ನು ಸ್ಮರಿಸಿ ಈ ಪವಿತ್ರ ವಾರವನ್ನು ಭಕ್ತಿಯಿಂದ ಆಚರಿಸೋಣ ಎಂದು ಸಂದೇಶ ನೀಡಿದರು.
ಸಹಾಯಕ ಧರ್ಮಗುರು ಫಾ| ರೋಯ್ ಲೋಬೊ ಪವಿತ್ರ ಬಲಿದಾನಲ್ಲಿ ಭಾಗಿಯಾದರು. ಈ ಪವಿತ್ರ ಗರಿಗಳ ರವಿವಾರದ ಧಾರ್ಮಿಕ ಪೂಜಾ ವಿಧಿಯಲ್ಲಿ ಭಕ್ತರು ಭಾಗಿಯಾದರು.